ಮುದುಡಿ ಕುಳಿತ ವಿಮಾನವೂ, ಮುಖ ಸಿಂಡರಿಸುವ ಕಪ್ತಾನನೂ: ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ
“ಧೋನಿಯಾಗಲು ಹೊರಟಿದ್ದ ಆ ತರುಣ ವಿಮಾನ ಪರಿಚಾರಕ ದಾರಿಯುದ್ದಕ್ಕೂ ಆ ಕಪ್ತಾನನ ಸಿಟ್ಟಿನ ಕಥೆಗಳನ್ನು ಹೇಳುತ್ತಾ ನನ್ನ ನಗಿಸಲು ನೋಡುತ್ತಿದ್ದ. ವಿಮಾನ ಬೆಂಗಳೂರಿಂದ ಹೊರಟು ಕೊಚ್ಚಿ ತಲುಪುವವರೆಗೆ ಬೇರೆ ಏನೂ ಕೆಲಸವಿಲ್ಲದ ಆ ವಿಮಾನದ..”
ಅಬ್ದುಲ್ ರಶೀದ್ ಬರೆದ ಲಕ್ಷದ್ವೀಪ ಡೈರಿ:ಇಂದಿನಿಂದ ಪ್ರತಿ ಶುಕ್ರವಾರ
“ಕನ್ನಡನಾಡಿನ ಕಡಲ ತೀರದ ಮಂಗಳೂರಿನಿಂದ ಸುಮಾರು ಮುನ್ನೂರೈವತ್ತು ಕಿಲೋಮೀಟರ್ ದೂರದಲ್ಲಿ, ಕೇರಳದ ಕೊಚ್ಚಿಯಿಂದ ಮುನ್ನೂರೆಂಬತ್ತು ಕಿಲೋಮೀಟರ್ ದೂರದಲ್ಲಿರುವ ಈ ದ್ವೀಪಗಳು ಕೇಂದ್ರಾಡಳಿತಕ್ಕೊಳಪಟ್ಟ ನಿರ್ಬಂಧಿತ ಪ್ರದೇಶಗಳು. ಜಗತ್ತಿಗೆ ಜಗತ್ತೇ ಕೊರೋನಾ ಸೈತಾನನ ಹೊಡೆತದಿಂದ ತತ್ತರಿಸುತ್ತಿರುವ..”
ತಂಟೆಕೋರ ಅಕಿರ: ಅಕಿರ ಕುರೊಸಾವ ಆತ್ಮಕತೆಯ ಕಂತು
“ಗಣಿತದ ಮೇಷ್ಟ್ರ ಮಗ ನಮ್ಮ ತರಗತಿಯಲ್ಲಿದ್ದ. ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ನಮಗೆ ಮೊದಲೇ ತಂದುಕೊಡುವಂತೆ ಅವನ ಬೆನ್ನುಹತ್ತಿದೆವು. ಮೊದಲಿಗೆ ಅವನು ಒಪ್ಪಲಿಲ್ಲ. ಕಡೆಗೆ ಅಂತೂ ಇಂತೂ ಅವನಿಂದ ಪ್ರಶ್ನೆಪತ್ರಿಕೆಗಳನ್ನು ವಸೂಲಿ ಮಾಡಿದೆವು. ಅದನ್ನು ಇಡೀ ತರಗತಿಗೆ ಹಂಚಿಬಿಟ್ಟೆವು…”
ಭಯಾನಕ ಸುತ್ತಾಟ: ಅಕಿರ ಕುರೊಸಾವ ಆತ್ಮಕತೆಯ ಕಂತು
“ನನ್ನಣ್ಣನ ಉದ್ದೇಶ ಅರ್ಥವಾಗಲಿಲ್ಲ. ಇಷ್ಟು ಭಯಂಕರವಾಗಿರುವುದನ್ನು ನೋಡಲು ಬಲವಂತ ಮಾಡುತ್ತಿದ್ದಾನಲ್ಲ ಅಂತ ಅವನ ಮೇಲೆ ಕೋಪ ಬಂತು. ಕೆಂಪಾಗಿದ್ದ ಸುಮಿಡಗಾವ ನದಿ ದಂಡೆಯ ಮೇಲೆ ನಿಂತಾಗ ಕಂಡ ದೃಶ್ಯ ಅತ್ಯಂತ ಭೀಕರವಾಗಿತ್ತು. ಹೆಣಗಳ ರಾಶಿ ದಂಡೆಯನ್ನೆಲ್ಲ ತುಂಬಿತ್ತು. ಅದನ್ನು ನೋಡುತ್ತಿದ್ದಂತೆ…”
ಮನುಷ್ಯತ್ವ ಮತ್ತು ಕರಾಳ ಸತ್ಯ: ಅಕಿರ ಕುರೊಸಾವ ಆತ್ಮಕತೆಯ ಕಂತು
“ಈ ಪುಟ್ಟ ಕತೆಗೆ ಅದರದೇ ಆದ ಸೊಗಸಿದೆ. ಈ ಕತೆ ಯಾರಿಗೂ ನೋವುಂಟುಮಾಡುವುದಿಲ್ಲ. ಭಯ ಮನುಷ್ಯನನ್ನು ಹೇಗೆಲ್ಲ ವರ್ತಿಸುವಂತೆ ಮಾಡುತ್ತದೆ ಎನ್ನುವುದನ್ನು ನೋಡಿದಾಗ ಭಯವಾಗುತ್ತದೆ. ಕತ್ತಲಿಗೆ ಹೆದರಿದ ಜನ ಊಹಿಸಲು ಆಗದಷ್ಟು ಭಯಾನಕವಾದ ಕೃತ್ಯಗಳಲ್ಲಿ ತೊಡಗಿದರು. ಹಿಂದೆಂದೂ ಅನುಭವಿಸದೇ ಇದ್ದ ಕತ್ತಲು…”
ಕಸದಗುಂಡಿಯ ನೆರೆಹೊರೆ: ಕುರಸೋವಾ ಆತ್ಮಕತೆಯ ಮತ್ತೊಂದು ಪುಟ
“ನಾಯಕನನ್ನು ಪ್ರಾಂತ್ಯವೊಂದರ ಭೂಗತದೊರೆ ಮಾಡಿದೆ. ಅವನ ಪಾತ್ರವನ್ನು ನಿಕಷಕ್ಕೆ ಒಡ್ಡಲು ಅವನ ಎದುರು ಮತ್ತೊಂದು ಪಾತ್ರವನ್ನು ಇಡಲು ನಿರ್ಧರಿಸಿದೆ. ಮೊದಲು ಈ ಪ್ರತಿನಾಯಕ ಮಾನವೀಯ ಅನುಕಂಪವುಳ್ಳ ಆ ಪ್ರದೇಶದಲ್ಲಿ ತನ್ನ ದವಾಖಾನೆಯನ್ನು ತೆರೆಯುತ್ತಿರುವ ಯುವವೈದ್ಯ ಎಂದುಕೊಂಡೆ. ಆದರೆ ನಾನು ಮತ್ತು ವೆಕ್ಸಾ ಎಷ್ಟೇ ಪ್ರಯತ್ನಿಸಿದರೂ ಈ ಪಾತ್ರವನ್ನು ಜೀವಂತಗೊಳಿಸಲು ಸಾಧ್ಯವಾಗಲಿಲ್ಲ. ಈ ಪಾತ್ರದಲ್ಲಿ ಚೈತನ್ಯವೇ ಇರಲಿಲ್ಲ..”
ಒನ್ ವಂಡರ್ಫುಲ್ ಸಂಡೆ: ಕುರೊಸೊವಾನ ಆತ್ಮಕತೆಯ ಪುಟ
“ಅನ್ ಫಿನಿಶ್ಡ್ ಸಿಂಫೋನಿ” ಗೆ ಸಂಗೀತ ನಿರ್ದೇಶಕನ ತಾಳದಂಡವನ್ನು ಆಡಿಸುವ ಕತೆಯ ನಾಯಕನ ಪಾತ್ರವನ್ನು ಮಾಡಿದ ನಟ ನುಮಸಾಕಿ ಇಸಾವೊ. ಈತನಿಗೆ ಸಂಗೀತದ ಗಂಧಗಾಳಿ ಗೊತ್ತಿರಲಿಲ್ಲ. ಸಂಗೀತ ಕುರಿತಂತೆ ಹಲವು ರೀತಿಯ ಅಸೂಕ್ಷ್ಮತೆಗಳಿರುತ್ತವೆ. ಆದರೆ ನುಮಸಾಕಿಗೆ ಧ್ವನಿಯಲ್ಲಿನ ನವಿರು, ತೀಕ್ಷ್ಣ ಅಥವ ಆಳವನ್ನು ಕೂಡ ಗುರುತಿಸಲಾಗುತ್ತಿರಲಿಲ್ಲ. ಆದರೆ ನಾವಿದನ್ನು ಕಡೆಗಣಿಸುವಂತಿರಲಿಲ್ಲ. ನುಮಸಾಕಿ ಬೆದುರುಗೊಂಬೆಯಂತೆ ಕೈಯಾಡಿಸುತ್ತಿದ್ದ.”
ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್: ಕುರಸೋವ ಆತ್ಮಕತೆಯ ಪುಟ
“ನೊ ರಿಗ್ರೆಟ್ಸ್ ಫಾರ್ ಅವರ್ ಯೂತ್ ಈ ಎಲ್ಲ ಏಳುಬೀಳುಗಳ ನಡುವೆ ಹುಟ್ಟಿತು. ಈ ಚಿತ್ರದ ಕುರಿತು ನನ್ನಾಳದಲ್ಲಿ ಭಾವನೆಗಳ ಅಲೆಗಳು ಏಳುತ್ತವೆ. ಯುದ್ಧಾನಂತರದಲ್ಲಿ ಸ್ವತಂತ್ರ ವಾತಾವರಣದಲ್ಲಿ ಮಾಡಿದ ಮೊದಲ ಚಿತ್ರ. ಕ್ಯೋಟೊದ ಹಳೆಯ ರಾಜಧಾನಿಯ ಸ್ಥಳಗಳನ್ನು ಚಿತ್ರೀಕರಣಕ್ಕೆ ಬಳಸಿದ್ದೆವು. ಹುಲ್ಲಿನ ಬೆಟ್ಟಗಳು, ಬೀದಿ ಬದಿಯ ಸಾಲು ಹೂಗಳ ರಸ್ತೆಗಳು, ಸೂರ್ಯನ ಕಿರಣಗಳನ್ನು ಪ್ರತಿಫಲಿಸುತ್ತಿದ್ದ ಹೊಳ್ಳಗಳು ಇವೆಲ್ಲವೂ …”
ಜಪಾನಿಯರ ಮನೋಭಾವಗಳು: ಕುರೊಸಾವನ ಆತ್ಮಕತೆಯ ಪುಟ
“ಯುದ್ಧದ ಸಮಯದಲ್ಲಿ ಸೌಂದರ್ಯಕ್ಕಾಗಿ ಹಸಿದು ಜಪಾನಿನ ಸಾಂಪ್ರದಾಯಿಕ ಕಲೆಗಳತ್ತ ನಡೆದಿದ್ದೆ. ಬಹುಶಃ ಸುತ್ತಲಿನ ವಾಸ್ತವದಿಂದ ಓಡಿಹೋಗುವ ಇಚ್ಛೆಯಿಂದ ಹೀಗೆ ಮಾಡಿರಬಹುದು. ಆದರೆ ಈ ಪಲಾಯನದ ಉದ್ದೇಶವು ಮಹತ್ವವಾದದ್ದನ್ನು ನೀಡಿತು. ಮೊಟ್ಟಮೊದಲ ಬಾರಿಗೆ ನೊಹ ನಾಟಕವನ್ನು ನೋಡಲು ಹೋದೆ. ಹದಿನಾಲ್ಕನೆಯ ಶತಮಾನದ ನೊಹ ನಾಟಕಕಾರ ಜಿಯಾಮಿಯು ಬರೆದಿದ್ದ ಸಿದ್ಧಾಂತಗಳನ್ನು ಓದಿದೆ.”








