ಹಿರಿಯ ಪತ್ರಕರ್ತ ಹಾಗೂ ಕವಿ ರಾಮು ಇನ್ನಿಲ್ಲ
ಹಿರಿಯ ಪತ್ರಕರ್ತ ಹಾಗೂ ಕವಿ ರಾಮು(69) ಮಂಗಳವಾರ ಮುಂಜಾನೆ ತೀರಿಕೊಂಡರು. ವಿಭಿನ್ನ ನೆಲೆಗಟ್ಟಿನ ಅವರ ಕವಿತೆಗಳ ಕಾರಣಕ್ಕೆ ಮತ್ತು ಅವರ ಆಪ್ತತೆಯ ಕಾರಣಕ್ಕೆ ಮೈಸೂರಿನ ಹಾಗೂ ಮೈಸೂರಿಗೆ ಆಗಮಿಸುತ್ತಿದ್ದ ಸಾಹಿತ್ಯದ ಬಂಧುಗಳೆಲ್ಲ ಅವರನ್ನು ಆಗಾಗ ಭೇಟಿಯಾಗುತ್ತಲೆ ಇರುತ್ತಿದ್ದರು.
ಅಗ್ನಿಸೂಕ್ತ, ರಾಮು ಕವಿತೆಗಳು, ವಿಷ್ಣುಕ್ರಾಂತಿ ಮತ್ತು ಇತರೆ ಕವಿತೆಗಳು ಇವರ ಪ್ರಕಟಿತ ಕವನ ಸಂಕಲನಗಳು.
ರಾಮು ಅವರನ್ನು, ಅವರ ವ್ಯಕ್ತಿತ್ವದ ಕುರಿತು ಕವಯತ್ರಿ ರೂಪಾ ಹಾಸನ ಬರೆದ ಕವಿತೆಯೊಂದು ನಿಮ್ಮ ಓದಿಗೆ
ರವಿಶಂಕರ್ ಎಸ್.ಎಲ್. ಬರೆದ ಈ ಭಾನುವಾರದ ಕಥೆ
ಮನೆಯಕಡೆಯಿಂದ ಜಾನಕಿ ನರಳುವ ಸಣ್ಣಸದ್ದು ಕೇಳತೊಡಗಿತು. ಜಾನಕಿಗೆ ಒಂಭತ್ತು ತಿಂಗಳುಗಳು ತುಂಬಿದ್ದರಿಂದ ಹೆರಿಗೆನೋವು ಶುರುವಾಗಿತ್ತು. ಶಿವಮ್ಮ ಸಾಕಷ್ಟು ಹೆರಿಗೆಗಳನ್ನು ಮಾಡಿಸಿದ್ದರಿಂದ, ಯಾರ ಸಹಾಯವೂ ಬಯಸದೆ, ಒಬ್ಬಂಟಿಯಾಗೇ ಹೆರಿಗೆಮಾಡಿಸುವ ಅನುಭವ ಪಡೆದಿದ್ದಳು. ಹೆರಿಗೆನೋವಿನ ನರಳುವಿಕೆಯ ಕೂಗು ಹೆಚ್ಚಾಗುತ್ತಿದ್ದಂತೆಯೇ, ಸಂಗಣ್ಣ ತಾನು ಇಳಿದು ಹೋಗಲೆ. ಬೇಡವೇ? ಎಂಬ ಯೋಚನೆಗೆಬಿದ್ದ.
ರವಿಶಂಕರ್ ಎಸ್.ಎಲ್. ಬರೆದ ಈ ಭಾನುವಾರದ ಕಥೆ “ಹಬ್ಬ” ನಿಮ್ಮ ಓದಿಗೆ
ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ
ಈ ನಡುವೆ ಪಾತ್ಲಿಂಗಪ್ಪ ಹಾಗೂ ಚಿತ್ಲಿಂಗ ಮತ್ಮತ್ತೆ ಭೇಟಿಯಾಗುತ್ತಿದ್ದದ್ದು ತಿಳಿದು ಮಗಳು ಕುದ್ದು ಹೋಗಿ ವರ್ಷದ ಹಿಂದೆ ಅಪ್ಪನಿಗೆ ಲಾಯರ್ ನೋಟೀಸ್ ಕಳಿಸಿದ್ದಳು. ಇದು ಪಾತ್ಲಿಂಗಪ್ಪನನ್ನು ಕುಗ್ಗಿಸಿತ್ತು. ತನ್ನದೆಲ್ಲವನ್ನೂ ಕಿತ್ತುಕೊಂಡು ಬೀದಿಗೆ ತಳ್ಳುವ ಹುನ್ನಾರದಂತೆ ಕಂಡಿತ್ತು. ಹಂಗಾಗಿ ಅದು ಆ ವಿಚಾರದಲ್ಲಿ ಅವನನ್ನು ಮತ್ತಷ್ಟು ಬಿಗಿಯಾಗುವಂತೆ ಮಾಡಿತ್ತು. ಅದರೊಟ್ಟಿಗೆ ಅವನೊಳಗೆ ತಾನು ತಮ್ಮನ ಮಗನಿಗೆ ಮಾಡಿದ್ದ ಅನ್ಯಾಯದ ಪಾಪಪ್ರಜ್ಞೆ ಬೆಳೆಯತೊಡಗಿತ್ತು.
ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ “ಸೋಲು” ನಿಮ್ಮ ಓದಿಗೆ
ಸೌರಭಾ ಕಾರಿಂಜೆ ಬರೆದ ಈ ಭಾನುವಾರದ ಕಥೆ
ಬೆಳಿಗ್ಗೆ ತುಂಬಿಸಿಕೊಂಡ ದೋಸೆ ಡಬ್ಬಿ ಹಾಗೇ ಇದೆ ಎಂಬುದು ನೆನಪಾಯಿತು ಅವಳಿಗೆ. ಕೊಟ್ಟು ಬಿಡಲೇ ಅನಿಸಿತು ಒಮ್ಮೆ. ಮನೆಗೆ ಹೋಗಿ ತಿನ್ನಬಹುದು ತಾನು. ಆದರೆ ಇವನಿಗೆ ಬೇಕಾದದ್ದು ದುಡ್ಡು, ಊಟ ಅಲ್ಲ, ಆ ದುಡ್ಡನ್ನು ಕಬಳಿಸಲು ನಮೂನೆ ನಮೂನೆಯ ಪ್ರಯತ್ನ ಅನ್ನಿಸಿ ಮನಸ್ಸೆಲ್ಲಾ ಕಹಿಯಾಯಿತು. ಜೊತೆಗೆ ಬಾಯಿಯೂ ಕಹಿಯಾಯಿತು. ಬಾಯಿಯಲ್ಲಿ ತುಂಬಿಕೊಂಡಿದ್ದ ಎಂಜಲನ್ನು ನುಂಗಲು ಅಸಹ್ಯವಾಗಿ ಉಗುಳುವ ಒತ್ತಡ ಉಂಟಾಯಿತು. ಯಾವತ್ತೂ ರಸ್ತೆಯಲ್ಲಿ ಉಗುಳಿದವಳಲ್ಲ. ಮುಜುಗರ ಒತ್ತಿ ಬಂತು.
ಸೌರಭಾ ಕಾರಿಂಜೆ ಬರೆದ ಕಥೆ “ಹಣಾಹಣಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಮುನವ್ವರ್ ಜೋಗಿಬೆಟ್ಟು ಬರೆದ ಈ ಭಾನುವಾರದ ಕಥೆ
ಬಟ್ಟೆ ತೊಳೆಯಲು ಹೋಗಿದ್ದ ಉಮ್ಮ ಬಂದು ಹಿತ್ತಲಿಗೆ ತಲುಪಿದ್ದಳು. ಹೊರಳಾಡುತ್ತಿರುವ ಝುಮೈರ್ನನ್ನು ಸಮಾಧಾನ ಮಾಡುವ ಶತ ಪ್ರಯತ್ನ ಮಾಡ ತೊಡಗಿದಳು. ವಿಶಣ್ಣನಾಗಿ ಅಬ್ಬ ಮಗನ ರೋಧನೆಯನ್ನು ನೋಡುತ್ತಾ ಕುಳಿತಿದ್ದ. ಹೇಗೋ ಸಮಧಾನಿಸಿ ಮನೆಯೊಳಗೆ ಕರೆದುಕೊಂಡು ಹೋದಳು ಉಮ್ಮ. ಮಗ ಎಷ್ಟೇ ಸಮಾಧಾನ ಮಾಡಿದರೂ ಅವನ ದುಃಖ ಇಳಿಯುವುದಿಲ್ಲವೆಂದು ಉಮ್ಮನಿಗೆ ಖಾತ್ರಿಯಾಯಿತು. ರಾತ್ರಿ ಊಟ ಮಾಡದೆ ಮಲಗಿದ್ದ ಮಗನ ಬಳಿಗೆ ಬಂದವಳು “ಐವತ್ತು ರೂಪಾಯಿ ನಾನು ಕೊಡ್ತೇನೆ.
ಮುನವ್ವರ್ ಜೋಗಿಬೆಟ್ಟು ಬರೆದ ಕಥೆ “ಶಾಲಾ ಮಕ್ಕಳ ಪ್ರವಾಸಕ್ಕೆ ಜಯವಾಗಲಿ” ನಿಮ್ಮ ಓದಿಗೆ
ಹಮೀರ್ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ
ಹೊರಗಾಳಿಯ ತಾಜಾತನವನ್ನು, ಮಧ್ಯಾಹ್ನ ಮೂರುಗಂಟೆಯ ಬಿಸಿಲನ್ನು ಸೇವಿಸಿದೆ. ರೋಡು ದೊಡ್ಡ ಮಾಡಿದಾಗ ಕಡಿದ, ಈಗ ರೊಡಿನ ಸೈಡಲ್ಲಿ ಮಹಾ ಬಂಡೆಗಳ ತರ ಅಥವಾ ರಾಮಲಕ್ಷ್ಮಣರೋ, ಪಾಂಡವರೊ ಸಾಯಿಸಿ ಕೊಚ್ಚಿಹಾಕಿದ ಉಗ್ರ ರಾಕ್ಷಸ ಜನಾಂಗದ ಹೆಣಗಳ ಹಾಗೆ ಬಿದ್ದಿರೊ ಮೂರ್ನಾಲ್ಕು ಶತಮಾನಗಳಷ್ಟು ಪುರಾತನವಾಗಿರಬಹುದಾದ ಮರಗಳ ಬುಡಗಳು ಕಣ್ಣಿಗೆ ಬಿದ್ದವು. ಆ ತಾಜಾತನದ ಸಹಾಯದಿಂದಲೋ ಏನೋ ಇಲ್ಲಿಯತನಕ ಸಿಗದ ಪರಿಹಾರವು ಸಿಕ್ಕಿತು, ಅಥವಾ ಉತ್ಪತ್ತಿಯಾಯಿತು, ಆಥವಾ ನನ್ನ ಸುಪ್ತಪ್ರಜ್ಞಾ ಮನಸ್ಸು ಸಂಶ್ಲೇ಼ಷಣೆ ಮಾಡಿತು.
ಹಮೀರ್ ಮುಗಿಲು ಕೆ.ಎಲ್. ಬರೆದ ಈ ಭಾನುವಾರದ ಕಥೆ “ಹಿಂದಿನದು” ನಿಮ್ಮ ಓದಿಗೆ
ಆಕರ್ಷ ಕಮಲ ಬರೆದ ಈ ಭಾನುವಾರದ ಕತೆ
ಪಜಲ್ ಪೀಸ್ಗಳನ್ನು ಕೆಳಕ್ಕಿರಿಸಿ ಕೀಲಿಕೈಗಳ ಗೊಂಚಲನ್ನು ಚರಂಡಿಗೆ ಎಸೆಯಲು ನಿರ್ಧರಿಸಿದ್ದನೇನೋ ಎನ್ನುವಷ್ಟೇ ವೇಗವಾಗಿ ಎಲಿವೇಟರ್ಗಳ ಕಡೆಗೆ ಓಡಿದ. ಹದಿಮೂರನೇ ಮಹಡಿಯಿಂದ ಗ್ರೌಂಡ್ ಫ್ಲೋರ್ ಲಾಬಿಗೆ ಬರುವಷ್ಟರಲ್ಲಿ ಕಚೇರಿಯಿಂದ ಹೊರನಡೆಯುವಾಗ ತನ್ನ ಹೆಸರು ನೆನಪಿಲ್ಲದ ಕಾವಲುಗಾರನಿಗೆ ಏನು ಹೇಳಬಹುದು, ಮನಸ್ಸನ್ನು ನೋಯಿಸದೆ ಪೊಲಿಟಿಕಲಿ ಕರೆಕ್ಟ್ ಆಗಿ ಹೇಗೆ ಮಾತನಾಡಬಹುದು ಎಂದೆಲ್ಲ ಯೋಚಿಸಿದ. ಆಕ್ಸೆಸ್ ಕಾರ್ಡ್ ಇಲ್ಲದೆಯೇ ಮತ್ತೆ ಕಚೇರಿಗೆ ಬರಲೇಬೇಕು.
ಆಕರ್ಷ ಕಮಲ ಬರೆದ ಕತೆ “ಆಯತಾಕಾರದ ನೆರಳು” ನಿಮ್ಮ ಈ ಭಾನುವಾರದ ಓದಿಗೆ
ಎಂದಿಗೂ ಹುಟ್ಟದ ಮಗುವಿಗೆ ಮೂರು ಕಿನ್ನರ ಕತೆಗಳು
ಪಾತ್ರೆ ತೊಳೆದು ಮುಗಿಸಿದ ಅಮ್ಮ ಹಾಲಿಗೆ ಬಂದು ಮೊದಲು ನೆಲದ ಹಾಸನ್ನು ಬ್ರಶ್ನಿಂದ ತಿಕ್ಕಿ ಸ್ವಚ್ಛಗೊಳಿಸುತ್ತಿದ್ದರು. ನಂಆಗೆಲ್ಲ ಆ ಸುಂದರ ಹೆಂಗಸು ಸೋಫಾದ ಮೇಲೆ ಮಲಗಿ ಪುಸ್ತಕವನ್ನು ಓದುತ್ತಲೇ, ಏನಾದರೂ ದೂರುಗಳನ್ನು ದಾಖಲಿಸುತ್ತಿದ್ದಳು. ಟೇಬಲ್ ಮೇಲೆ ಕುಳಿತು ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಹುಡುಗಿಗೆ ಅರ್ಥವಾಗದ ವಿಷಯವೊಂದಿತ್ತು.
ಇಟಲಿಯ ಸಾಹಿತಿ ಮತ್ತು ಪತ್ರಕರ್ತೆಯಾಗಿದ್ದ ಓರಿಯಾನ ಪಲಾಸಿಯವರ ‘ಎಂದಿಗೂ ಹುಟ್ಟದ ಮಗುವಿಗೆ ಪತ್ರ’ ಕಾದಂಬರಿಯನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸುತ್ತಿದ್ದು, ಅದರ ಭಾಗವೊಂದು ನಿಮ್ಮ ಓದಿಗೆ ಇಲ್ಲಿದೆ
ಅಬ್ದುಲ್ ರಶೀದ್ ಬರೆದ ಈ ಭಾನುವಾರದ ಕಥೆ
ಕಾಣೆಯಾಗಿದ್ದ ಟಿಬೆಟನ್ ಕ್ಯಾಂಪಿನ ಮೂವರು ಹಸುಳೆಗಳು ಇದೇ ಬಿಡಾರದ ಬಾಗಿಲು ತಟ್ಟಿ ಆಹಾರ ಕೋರಿದ್ದರು. ಕುಡಿದು ಬಿದ್ದಿದ್ದ ಈ ಆಸಾಮಿ ಕಣ್ಣೇ ಬಿಟ್ಟಿರಲಿಲ್ಲ. ಆತ ಕಣ್ಣು ಬಿಟ್ಟಾಗ ಆತನ ಮಡದಿ ಅದಾಗಲೇ ಲಾಮಾ ಮಕ್ಕಳ ಬಟ್ಟೆ ಬದಲಾಯಿಸಿ, ಬಿಸಿ ನೀರಲ್ಲಿ ಸ್ನಾನ ಮಾಡಿಸಿ, ಹೊಟ್ಟೆಗೆ ತಿನ್ನಲು ಕೊಟ್ಟು, ಅವರ ಕಾಷಾಯ ವಸ್ತ್ರಗಳನ್ನು ಒಗೆದು ಬಿಸಿಲಿಗೆ ಒಣಗಲು ಹಾಕಿ, ಅವರಿಗೆ ಕಂಬಳಿ ಹೊದೆಸಿ ಬೆಚ್ಚಗೆ ಮಲಗಿಸಿ ಅವರನ್ನು ಕಾದು ಕುಳಿತಿದ್ದಳು.
ಅಬ್ದುಲ್ ರಶೀದ್ ಬರೆದ ಕಥೆ “ಅಂತಾರಾಷ್ಟ್ರೀಯ ಕುಂಬಳಕಾಯಿ”









