Advertisement
ಚೈತ್ರಾ ಶಿವಯೋಗಿಮಠ

ಚೈತ್ರಾ ಶಿವಯೋಗಿಮಠ ಮೂಲತಃ ವಿಜಯಪುರದವರು. ಪ್ರಸ್ತುತ ಬೆಂಗಳೂರಿನ ನಿವಾಸಿ. ವೃತ್ತಿಯಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿರುವ ಇವರಿಗೆ ಓದು, ಬರಹ, ಕಾವ್ಯ ಅಚ್ಚುಮೆಚ್ಚು. ಇವರ ಮೊದಲ ಪ್ರಕಟಿತ ಕವನ ಸಂಕಲನ "ಪೆಟ್ರಿಕೋರ್"(ಪ್ರಾರ್ಥನಾ ಕಾವ್ಯ ಪುರಸ್ಕಾರ, ಅಮ್ಮ ಪ್ರಶಸ್ತಿ ಸಂದಿದೆ). ಹಲವಾರು ಪತ್ರಿಕೆಗಳಲ್ಲಿ ಇವರ ಕವನಗಳು/ ಬರಹಗಳು ಪ್ರಕಟವಾಗಿವೆ.

ಸ್ಯಾಂಕಿ ಟ್ಯಾಂಕ್ ಎಂಬ ಬೆಂಗಳೂರಿಗರ ಕಾಶಿ!: ದೀಪಾ ಫಡ್ಕೆ ಬರಹ

ಸ್ಯಾಂಕಿಯ ಇನ್ನೊಂದು ಮೂಲೆಗೆ ತಲುಪುವ ಹೊತ್ತಿಗೆ ನೀರಿನಲ್ಲಿರುವ ತುಂಡು ಮರದ ಮೇಲೆ ಈ ನೀರುಕಾಗೆಗಳದು ಸನ್ ಬೇದಿಂಗ್ ನಡೆಯುತ್ತಿರುತ್ತದೆ. ಎರಡೂ ರೆಕ್ಕೆಗಳನ್ನು ಇಷ್ಟಗಲಕ್ಕೆ ಬಿಡಿಸಿಕೊಂಡು ತಿರುಗುವ ಟೇಬಲ್ ಫ್ಯಾನಿನಂತೇ ಸೂರ್ಯನ ಮುಂದೆ ಮೈಯೊಣಗಿಸಿಕೊಂಡು ನಿಂತಿರುತ್ತದೆ. ಇಲ್ಲಿರುವ ಮರಗಳ ಮೇಲಿನ ಸಂಸಾರದ ಕತೆಯೂ ವಿಶಿಷ್ಟವೇ. ಗೂಬೆಗಳ, ಮಿಂಚುಳ್ಳಿಗಳ ಸಂಸಾರ ಬೆಳೆಯುವುದನ್ನು ಕಂಡಿದ್ದೇವೆ. ಒಂದೇ ಒಂದು ಸಾರಿ ಅಚ್ಚ ಹಳದಿ ಬಣ್ಣದ ಗೋಲ್ಡನ್ ಓರಿಯಲ್ ನೋಡಿದ ಧನ್ಯತೆ ನಮ್ಮದು.
ಬೆಂಗಳೂರಿನ ಸುಪ್ರಸಿದ್ಧ ಸ್ಯಾಂಕಿ ಕೆರೆಯ ಕುರಿತು ದೀಪಾ ಫಡ್ಕೆ ಬರಹ ನಿಮ್ಮ ಓದಿಗೆ

Read More

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ

ಬೀಡಾಡಿ ದನವೊಂದು ನೆಟ್ಟಿದ್ದ ತರಕಾರಿ ಸಾಲಿಗೇ ಬಾಯಿ ಹಾಕಿ ಕುತ್ತಿಗೆ ಆಡಿಸುತ್ತಾ ಮೇಯುತ್ತಿದ್ದುದನ್ನು ನೋಡಿ ಅಲ್ಲೇ ಬಿದ್ದಿದ್ದ ಕೋಲೊಂದನ್ನು ತೆಗೆದುಕೊಂಡು `ಹೋಯ್ ಹೋಯ್’ ಎಂದು ಬೊಬ್ಬೆ ಹೊಡೆದುಕೊಂಡು ದಣಪೆಯಿಂದ ಹೊರಗಟ್ಟಲು ಪ್ರಯತ್ನಿಸಿದಳು. ನಾಲಗೆಯಿಂದ `ಹಡಬೆ ದನ’ ಎನ್ನುವ ಬೈಗಳೂ ಸುಲಭವಾಗಿ ಬಂದು ಹೋಯ್ತು. ಇಡೀ ಅಂಗಳ ಓಡಾಡಿಸಿಕೊಂಡು ನೆಟ್ಟಿದ್ದ ಪ್ರೀತಿಯ ಅಬ್ಬಲಿಗೆ ಸಾಲನ್ನೂ ಮೆಟ್ಟಿಕೊಂಡು ಗಿಡಗಳನ್ನು ಧರಾಶಾಯಿಯಾಗಿಸುತ್ತಾ ಕೊನೆಗೂ ದಣಪೆಯಿಂದ ಹೊರಗೆ ಹೋದಾಗ ಅದರ ಬೆನ್ನಿಗೆ…

Read More

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ: ಸಂವಾದಿ

“ಸಂಜನಾಳ ಬೆಳಗುಗಳು ನಂತರ ಮನೋಹರನ ಮೆಸೇಜುಗಳಿಲ್ಲದೇ ಆರಂಭವಾಗುತ್ತಿರಲಿಲ್ಲ. ಬೆಳ್ಬೆಳಿಗ್ಗೆ ಗುಲಾಬಿಗಳ ಗುಛ್ಛ ಬಂದರೆ ನಂತರ ಮೆಸೇಜುಗಳ ಸುರಿಮಳೆ. ಇಡೀ ಪುರಾಣ ಯಾವುದೇ ಮುಚ್ಚು ಮರೆಯಿಲ್ಲದೇ ಹೇಳಿಕೊಳ್ಳುತ್ತಿದ್ದ. ಐಐಎಸ್ಸಿಯ ಮೈಕ್ರೋಬಯಾಲಜಿ ವಿಭಾಗದಲ್ಲಿದ್ದ. ಎಂಥ ಸೆಮಿನಾರೇ ಇರಲಿ, ಲೆಕ್ಚರ್ ಡೆಮಾನ್ಸ್ಟ್ರೇಷನ್ ಇರಲಿ. ಮೆಸೇಜು ತಪ್ಪುತ್ತಿರಲಿಲ್ಲ. ಸಂಜನಾಳೇ ಶೂಟಿಂಗ್ ಎಂದೊ ಎಡಿಟಿಂಗ್ ಎಂದೊ ಒಮ್ಮೊಮ್ಮೆ ಬೇಕೂಂತಲೇ ಉತ್ತರಿಸಲು ನಿಧಾನಿಸಿದರೂ ಬೇಸರವಿಲ್ಲದೆ ಇರುತ್ತಿದ್ದ. `”

Read More

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿಗಾಡಿನ ಹೊಸ ಕತೆಗಳು: ಸಂಗೀತ ರವಿರಾಜ್ ಬರಹ

ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ.... ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು…

Read More

ಬರಹ ಭಂಡಾರ