ಮುದಿರಾಜ್ ಬಾಣದ್ ಬರೆದ ಈ ಭಾನುವಾರದ ಕತೆ
ಬಿದ್ದಿದ್ದ ಜಡೆಗುಂಡು ರಿಬ್ಬನ್ ತಗಂಡು ನೀಲೇಶ್ ಜೇಬಲ್ಲಿ ಇಟ್ಟಿಕೊಳ್ಳುವದಕ್ಕೂ ಅವನ ತಾಯಿ ಅಲ್ಲಿಗೆ ಬರುವುದಕ್ಕೂ ಸರಿ ಹೋಯಿತು. “ಏನ್ ನಿಮ್ಮ ಜಗಳ ಹಾವು ಮುಂಗಸಿ ಆಡಿದಂಗಾ, ಏನಾಯ್ತು? ಹೇ ಮುದುಕ ಅದೇನ್ ಚಡ್ಡಿ ಬಕಣದಾಗ ಇಟ್ಟಿಕಂಡಿದ್ದು?” ಅಂತ ಕೇಳಿದಳು. ಅಕ್ಕ ತಮ್ಮ ಇಬ್ಬರೂ ಒಮ್ಮೆ ಮುಖ ಮುಖ ನೋಡಿಕೊಂಡರು. “ಅಮ್ಮ ಅದು ಅದು…” ಅಂತ ರಾಗ ಎಳೆಯುವಷ್ಟರಲ್ಲಿ, “ಲೇ ತಾರ ಅವ ಸಿಕ್ಕನಾ ಬಾರೇ ಜಲ್ದಿ” ಅಂತ ನೀಲೇಶನ ತಂದೆ ಜೋರು ಜೋರಾಗಿ ಕೂಗಿದ.
ಮುದಿರಾಜ್ ಬಾಣದ್ ಬರೆದ ಈ ಭಾನುವಾರದ ಕಥೆ “ಗಂಡುಮಲಿ” ನಿಮ್ಮ ಓದಿಗೆ
ಶರಣಗೌಡ ಬಿ ಪಾಟೀಲ ಬರೆದ ಈ ಭಾನುವಾರದ ಕಥೆ
ನಿಮ್ಮಪ್ಪ ಹ್ಯಾಂಗೇ ಇರಲಿ ಅವನು ನಮ್ಮ ಕಣ್ಮುಂದೆ ಇರಬೇಕು. ಅಂವ ನನ್ನ ಪಾಲಿನ ದೇವರು. ನನ್ನ ಹಣೆಬರಹದಾಗ ಏನಿದೆಯೋ ಅದು ಆಗಿ ಹೋಗಿದೆ. ಹಿರಿಯರ ಮಾತಿಗೆ ಬೆಲೆ ಕೊಟ್ಟು ಆತನ ಜೊತೆ ಮದುವೆಯಾದೆ. ಅಂತಹ ಗಂಡನ ಜೊತೆ ಹ್ಯಾಂಗ ಸಂಸಾರ ಮಾಡ್ತಿಯೋ ಏನೋ ಅಂತ ಆಡಿಕೊಳ್ಳತಿದ್ದರು. ಅವರ ಮಾತಿಗೆ ನಾನೆಂದೂ ತಲೆ ಕೆಡಿಸಿಕೊಳ್ಳಲಿಲ್ಲ. ಹೀಗಿದ್ದರೂ ಆತ ಹೇಳದೇ ಕೇಳದೇ ಹೋಗಿದ್ದಾನೆ.
ಶರಣಗೌಡ ಬಿ ಪಾಟೀಲ, ತಿಳಗೂಳ ಬರೆದ ಸಣ್ಣ ಕತೆ “ಎಲ್ಲರಂತವನಲ್ಲ!” ನಿಮ್ಮ ಈ ಭಾನುವಾರದ ಓದಿಗೆ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಧುಸೂದನ ವೈ. ಎನ್. ಕತೆ
ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಮಧುಸೂದನ ವೈ. ಎನ್. ಬರೆದ ಕತೆ “ಬೋಣಿ”
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕಥೆ
ಮಾರನ ಕನಸು ನನಸಾಗಲಿಲ್ಲ. ಮಣ್ಣು ಸೇರಿತ್ತು. ಮಾರನ ತತ್ಕಾಲದ ಜನಪ್ರಿಯತೆಯನ್ನು ಮಾತ್ರವೇ ನಂಬಿಕೊಂಡಿದ್ದ ಆ ಸಿನಿಮಾ ಚೆನ್ನಾಗಿ ಓಡಲಿಲ್ಲ. “ಸಿನಿಮಾ ಚೆನ್ನಾಗಿ ಕಲೆಕ್ಷನ್ ಮಾಡಿಯೇ ಮಾಡುತ್ತದೆ. ಸಿನಿಮಾ ಹಿಟ್ ಆದಮೇಲೆ ನಿನಗೆ ಎಂಟು ಲಕ್ಷ ಕೊಡುತ್ತೇವೆ” ಎಂದು ನಂಬಿಸಿದ್ದ ನಿರ್ದೇಶಕ- ನಿರ್ಮಾಪಕರು ಆಮೇಲೆ ಕೈ ಕೊಟ್ಟಿದ್ದರು. ಸಿನಿಮಾ ಆರಂಭದ ಸಂದರ್ಭದಲ್ಲಿ ಕೊಟ್ಟಿದ್ದ ಹನ್ನೆರಡು ಸಾವಿರ ಮಾತ್ರ ಮಾರನ ಪಾಲಿಗೆ ದಕ್ಕಿದ್ದು.
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಕಥೆ “ಮಾರ”
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕತೆ
ಭಾಳ ಸಿಹಿಸುದ್ದಿಯೇನೂ ಅಲ್ಲ. ಆದರೂ, ಕಹಿಯಂತೂ ಅಲ್ಲಲ. ತೇರಿಗೆ ಹೂವುಹಣ್ಣು ಹಾಕವರಿದ್ರ ಇವತ್ತೇ ತಗೊಂಡು ತಯಾರಾಗ್ರಿ. ನಾಳೆ ಶಿಗತಾವೋ ಇಲ್ಲೋ. ಭಯಂಕರ ತುಟ್ಟಿನು ಇರತಾವು. ಬಿಸಿಲು ಏರಾಕ ಹೊಂಟೈತಿ. ಜರಾ ಚಹಾ ಕುಡೀತಿರೇನು ನೋಡ್ರಿ, ಹೇಳುತ್ತ ತಾನೂ ಹಗುರಾದಂತೆ ಬೋಲ್ಡಿ ಬಾಬಾ ಕೊಳವೆಗೆ ತಂಬಾಕು ತುಂಬಿ ಕಿಡಿ ಹಚ್ಚಿದ. ರುಕುಮವ್ವ, ಚಂದ್ರವ್ವಳನ್ನು ಕೈಯಿಂದ ಎಳೆದುಕೊಳ್ಳುತ್ತ ಬೆನ್ನು ಸವರಿ, ಸಮಾಧಾನ ಆತಿಲ್ಲವಾ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೇಶವ ಮಳಗಿ ಬರೆದ ಕಥೆ
ಜೆಸ್ಸಿ ಪಿ.ವಿ. ಪುತ್ತೂರು ಬರೆದ ಈ ಭಾನುವಾರದ ಕಥೆ
ಏನಾಗುತ್ತಿದೆಯೆಂದು ಅವರಿಗೆ ಅರ್ಥವಾಗುವ ಮೊದಲೇ ಬೆಂಕಿ ಅರ್ಧದಷ್ಟು ತೋಟಕ್ಕೆ ವ್ಯಾಪಿಸಿತ್ತು. ಅನಿರೀಕ್ಷಿತವಾಗಿ ಘಟಿಸಿದ ಅನಾಹುತ ಕಂಡು ಮಾತುಹೊರಡದೇ ನಿಂತಿದ್ದ ಅಂಬಿಕಾ ಈಗ ಜೋರಾಗಿ ಕಿರುಚಲಾರಂಭಿಸಿದರು. “ಅಯ್ಯೋ, ಯಾರಾದರೂ ಓಡಿ ಬನ್ನಿ.. ನಮ್ಮನ್ನು ಕಾಪಾಡಿ… ಯಾರಾದರೂ ಬನ್ನಿ, ಬೆಂಕಿ ನಂದಿಸಿ….” ನೆರೆಮನೆಯಿಂದ ಕೇಳಿದ ಆರ್ತನಾದ, ಎತ್ತರದಲ್ಲಿ ಕಾಣುತ್ತಿರುವ ಬೆಂಕಿಯ ಕೆನ್ನಾಲಿಗೆ, ಆಗಿರಬಹುದಾದ ಅನಾಹುತದ ಚಿತ್ರಣವನ್ನು ಶಂಕರಣ್ಣನಿಗೆ ಕಟ್ಟಿಕೊಟ್ಟಿತು.
ಜೆಸ್ಸಿ ಪಿ.ವಿ. ಪುತ್ತೂರು ಬರೆದ ಈ ಭಾನುವಾರದ ಕಥೆ “ಹೊರಗಿನ ಬೆಂಕಿ ಮತ್ತು ಒಳಗಿನ ಕಳೆ” ನಿಮ್ಮ ಓದಿಗೆ
ಎ.ಬಿ. ಪಚ್ಚು ಕುಟ್ಟಿದಪಲ್ಕೆ ಬರೆದ ಈ ಭಾನುವಾರದ ಕಥೆ
ಮೇಕೆಗಳೆಲ್ಲವೂ ರಸ್ತೆ ದಾಟಿದ ಮೇಲೆ ಲಾರಿ ಮುಂದಕ್ಕೆ ಚಲಿಸಲು ಆರಂಭಿಸಿತು. ಅದರದ್ದು ಈಗಲೂ ಒಂದೇ ವೇಗ. ನಿಂತುಕೊಂಡಿದ್ದವನು ಮತ್ತೆ ಲಾರಿಯಲ್ಲಿ ಕುಳಿತೆ. ಇನ್ನೊಮ್ಮೆ ನಾಯಿ ಕಡೆಗೆಯೇ ನೋಡಿದೆ. ಆಕಾಶದೆಡೆಗೆ ನೋಡುತ್ತಿದ್ದ ನಾಯಿ ತನ್ನ ಕಣ್ಣಿನಲ್ಲಿ ಏನನ್ನು ತುಂಬಿಕೊಳ್ಳುತಿತ್ತೋ, ಅದರ ಅಂತರಾತ್ಮ ಅದರೊಳಗಿನ ಪರಮಾತ್ಮ ಅದಕ್ಕೆ ಬದುಕಿನ ಯಾವ ದಿವ್ಯ ರಹಸ್ಯವನ್ನು ಹೇಳುತ್ತಿತ್ತೋ ಆ ಮೂಲಕ ಅದು ನನಗೆ ಏನನ್ನು ಪರೋಕ್ಷವಾಗಿ ತಿಳಿಸಲು ಪ್ರಯತ್ನ ಪಡುತ್ತಿದೆಯೋ ಎನ್ನುವುದು ನನಗೆ ಒಂಚೂರೂ ಗೊತ್ತಾಗಲಿಲ್ಲ.
ಎ.ಬಿ. ಪಚ್ಚು ಕುಟ್ಟಿದಪಲ್ಕೆ ಬರೆದ ಈ ಭಾನುವಾರದ ಕಥೆ “ಮೇಘ ಮಲ್ಹಾರ”
ಶಾಂತಿನಾಥ ದೇಸಾಯಿಯವರ ಕೃತಿಗಳಲ್ಲಿ ವ್ಯಕ್ತಿಸ್ವಾತಂತ್ರ್ಯದ ಬಿಕ್ಕಟ್ಟುಗಳು
ಆಧುನಿಕತೆಯು ನಮ್ಮ ಮನಸ್ಸಿಗೆ ಇತ್ತ ಸ್ವಾತಂತ್ರ್ಯವನ್ನು ಮೊಟ್ಟಮೊದಲ ಬಾರಿಗೆ ಕನ್ನಡ ಗದ್ಯ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಗ್ರಹಿಸಿದವರು ದೇಸಾಯರು. ಅವರ ಪಾತ್ರಗಳು ಈ ಸ್ವಾತಂತ್ರ್ಯವನ್ನು ನಿಭಾಯಿಸಲಾಗದ ತಮ್ಮ ವೈಫಲ್ಯದಿಂದ ಕಂಗೆಡುವಂಥವರು. ಸಂಪೂರ್ಣ ಸ್ವಾತಂತ್ರ್ಯವನ್ನು ಭರಿಸುವುದು ಎಷ್ಟು ಕ್ಲಿಷ್ಟಕರವಾದದ್ದು ಮತ್ತು ಈ ಹಾದಿ ಹೆಜ್ಜೆಹೆಜ್ಜೆಗೂ ಎಂಥ ವೈಫಲ್ಯಗಳಿಂದ ಕೂಡಿದ್ದು ಎಂಬುದು ಅವರ ಕಥೆಗಳ ಅಂತರಂಗವನ್ನು ಪ್ರವೇಶಿಸಿದಾಗಲೇ ಗೊತ್ತಾಗುವ ಸಂಗತಿ.
ಕುವೆಂಪು ವಿಶ್ವವಿದ್ಯಾಲಯ ಪ್ರಕಟಿಸಿರುವ “ಶಾಂತಿನಾಥ ದೇಸಾಯಿ ಸಾಹಿತ್ಯ-ವ್ಯಕ್ತಿತ್ವ” ಕೃತಿಯಲ್ಲಿನ ಕಥೆಗಾರ ವಿವೇಕ ಶಾನಭಾಗ ಬರೆದ ಲೇಖನ ನಿಮ್ಮ ಓದಿಗೆ
ಶಾಂತಿ ಕೆ. ಅಪ್ಪಣ್ಣ ಈ ಭಾನುವಾರದ ಕಥೆ
ಅದು ವಿಷಯ! ಅಲ್ಲಿಗೆ ವಯಸ್ಸಾಗಿರುವುದು ಯಾವುದಕ್ಕೆ? ದೇಹಕ್ಕೆ ಮಾತ್ರವೇ? ಮನಸು ಪಕ್ವವಾಗುವುದು ಅನ್ನುತ್ತಾರಲ್ಲ ಅದೇನದು? ಆಯ್ಕೆಗಳನ್ನೆಲ್ಲ ಬದಿಗೊತ್ತಿ, ಹೆಚ್ಚು ತಕರಾರು ಮಾಡದೆ, ಇರುವುದನ್ನು ಒಪ್ಪಿಕೊಂಡು, ಒಪ್ಪಲಾಗದಿದ್ದರೂ ಒಪ್ಪಿಸಿಕೊಂಡು, ಅಪ್ಪಿಕೊಂಡು, ದಬ್ಬಿಸಿಕೊಂಡು ಹೇಗಾದರೊಂದು ಬದುಕುವುದೆ? ಅಥವಾ ಪರಿಸ್ಥಿತಿಗೆ ತಲೆಬಾಗಿ ಸ್ಥಿತಪ್ರಜ್ಞೆಯನ್ನು ಆರೋಪಿಸಿಕೊಂಡು ಒಳಗೊಳಗೇ ಬೇಯುತ್ತ, ಬೇಯುವಿಕೆಯ ಕಮಟು ವಾಸನೆ ಹೊರಗೆ ತೋರದಂತೆ ಕಾಯುತ್ತ, ಹೀಗೆ ಬೇಯುವುದೇ ಜೀವನದ ಸಾರ್ಥಕತೆಯೆಂದುಕೊಂಡು ಸುಳ್ಳೇ ನಂಬಿಸಿಕೊಳ್ಳುವುದೆ?
ಶಾಂತಿ ಕೆ. ಅಪ್ಪಣ್ಣ ಬರೆದ ಈ ಭಾನುವಾರದ ಕಥೆ “ಚಿತ್ರಕಾರನ ಬೆರಳು”









