Advertisement

ಅನುವಾದಕರಿಗೆ ಫೆಲೋಶಿಪ್…

ಬಹುವಚನ ಪ್ರಕಾಶನ ಮತ್ತು ನಾಟಕ ಕಂಪನಿ ತಮಾಶಾ ಸ್ಟುಡಿಯೋ ಫೌಂಡೇಶನ್‌ನಿಂದ ಜಂಟಿಯಾಗಿ ಸ್ಥಾಪಿಸಲಾದ ನಾಟಕ ಅನುವಾದ ಫೆಲೋಶಿಪ್‌ಗೆ ಅನುವಾದಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಂದಿರುವ ಅರ್ಜಿಗಳಿಂದ ಮೂರು ಅನುವಾದಕರಿಗೆ ಫೆಲೋಶಿಪ್ ನೀಡಲಾಗುವುದು. ಇಬ್ಬರು ಭಾಷಾಂತರಕಾರರು ಜೊತೆಗೂಡಿ ಭಾಷಾಂತರ ಮಾಡುವ ಉದ್ದೇಶ ಹೊಂದಿದ್ದರೆ, ಅಂಥ ಅರ್ಜಿಗಳನ್ನು ಸಹ ಸ್ವೀಕರಿಸಲಾಗುವುದು.
ಫೆಲೋಶಿಪ್ 15 ದಿನಗಳ ರೆಸಿಡೆನ್ಸಿಯನ್ನೂ ಒಳಗೊಂಡಿರುತ್ತದೆ. ಫೆಲೋಷಿಪ್ ಮೊತ್ತ ರೂ. 30,000 ವನ್ನು ಅಂತಿಮ ಹಸ್ತಪ್ರತಿಯನ್ನು ಸಲ್ಲಿಸಿದ ಮೇಲೆ ಪಾವತಿಸಲಾಗುವುದು. ರೆಸಿಡೆನ್ಸಿಯು ಬೆಂಗಳೂರಿಗೆ ಸಮೀಪವಿರುವ ಸ್ಥಳದಲ್ಲಿರುತ್ತದೆ, ಅನುವಾದಕರ ಊಟ, ವಸತಿ ಮತ್ತು ಪ್ರಯಾಣದ ವೆಚ್ಚವನ್ನು ಬಹುವಚನ ಪ್ರಕಾಶನವು ಭರಿಸುತ್ತದೆ.

ಮರಾಠಿ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸುವ ಈ ಯೋಜನೆಗೆ ಅರ್ಜಿದಾರರು ಎರಡೂ ಭಾಷೆಗಳ ಜ್ಞಾನವನ್ನು ಹೊಂದಿರಬೇಕು. ಫೆಲೋಶಿಪ್ ಗೆ ಆಯ್ಕೆಯಾದವರು ರೆಸಿಡೆನ್ಸಿಯ ಸಮಯದಲ್ಲಿ ಅನುವಾದದ ಮೊದಲನೇ ಡ್ರಾಫ್ಟ್ ಅನ್ನು ಪೂರ್ಣಗೊಳಿಸಿರಬೇಕು. ಭಾಷಾಂತರವನ್ನು ರೆಸಿಡೆನ್ಸಿಯ ನಂತರದ ಮೂರು ವಾರಗಳಲ್ಲಿ ಅಂತಿಮಗೊಳಿಸಿ ಸಲ್ಲಿಸಬೇಕು. ಈ ಎಲ್ಲ ಅನುವಾದಿತ ನಾಟಕಗಳನ್ನು ಬಹುವಚನ ಪ್ರಕಾಶನವು ಪ್ರಕಟಿಸಲಿದೆ.
ಅರ್ಜಿ ಸಲ್ಲಿಸುವುದು ಹೇಗೆ: 

ನಿಮ್ಮ ಅಪ್ಲಿಕೇಶನ್‌ಗಳನ್ನು ಸಂಕ್ಷಿಪ್ತ ಪರಿಚಯದೊಂದಿಗೆ ಕಳುಹಿಸಬೇಕು, ಅನುವಾದ ಕ್ಷೇತ್ರದಲ್ಲಿ ಈವರೆಗಿನ ನಿಮ್ಮ ಕೆಲಸ ಮತ್ತು ಪ್ರಸ್ತುತ ಯೋಜನೆಯಲ್ಲಿ ನಿಮ್ಮ ಆಸಕ್ತಿಯನ್ನು ತಿಳಿಸಬೇಕು.

1000 ಪದಗಳಿಗಿಂತ ಹೆಚ್ಚಿಲ್ಲದ ಎರಡು ಮಾದರಿ ಅನುವಾದಗಳನ್ನು ಕಳುಹಿಸಬೇಕು. ಮಾದರಿಗಳಲ್ಲಿ ಒಂದು ನಾಟಕ ಸಾಹಿತ್ಯ ಪ್ರಕಾರದಲ್ಲಿರಬೇಕು. ಅನುವಾದಗಳು ಕನ್ನಡದಲ್ಲಿರಬೇಕು.
ಆಯ್ಕೆಯಾದ ಎಲ್ಲ ಅರ್ಜಿದಾರರಿಗೆ ನಾಟಕದ ಒಂದು ಆಯ್ದ ಭಾಗವನ್ನು ಅನುವಾದಿಸಲು ಕಳುಹಿಸಲಾಗುವುದು. ಇದರ ಆಧಾರದ ಮೇಲೆ ಅಂತಿಮ ನಿರ್ಣಯವನ್ನು ಕೈಗೊಳ್ಳಲಾಗುವುದು.
ನುಡಿ ಪಾರಿಜಾತದಲ್ಲಿ ಟೈಪ್ ಮಾಡಿದ ಅಂತಿಮ ಹಸ್ತಪ್ರತಿಯು ದೋಷ ಮುಕ್ತವಾಗಿರಬೇಕು, ಸಾಫ್ಟ್ ಕಾಪಿಯನ್ನು ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆಬ್ರವರಿ ೨೮, 2025.
ನಿಮ್ಮ ಅರ್ಜಿಗಳನ್ನು bahuvachanatamaasha@gmail.com ಕಳುಹಿಸಿ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ