Advertisement
ಮಾರುತಿ ಗೋಪಿಕುಂಟೆ ಬರೆದ ಈ ದಿನದ ಕವಿತೆ

ಮಾರುತಿ ಗೋಪಿಕುಂಟೆ ಬರೆದ ಈ ದಿನದ ಕವಿತೆ

ಸುಳಿವೇ ಇಲ್ಲದೆ..

ಅಕ್ಷರಗಳನ್ನೇನೊ ಜೋಡಿಸಿ
ಪದವಾಗಿಸಿದೆ ಅದರಲ್ಲಿ
ನಿನ್ನ ಧ್ವನಿಯಿರಲಿಲ್ಲ

ಪದ ಪದಗಳ ಸೇರಿಸಿ
ಕವಿತೆ ಕಟ್ಟಿದೆ ಅದರಲ್ಲಿ
ನಿನ್ನ ಪ್ರಾಸವೆ ಇರಲಿಲ್ಲ

ತ್ರಾಸದಿಂದ ಪ್ರಾಸವ
ಸೇರಿಸಿ ಪದ್ಯವಾಗಿಸಿದೆ
ಅದರಲ್ಲಿ ನಿನ್ನ ರಾಗವಿರಲಿಲ್ಲ

ಎದೆಯ ಇನಿದನಿಯ
ಆಲಿಸಿದೆ ಅಲ್ಲಿ ನಿನ್ನ
ಸುಳಿವೆ ಇರಲಿಲ್ಲ

ಸುಳಿವು ಕೊಟ್ಟರೆ
ಸೂಕ್ತ ಬಹುಮಾನ ಎಂಬ
ಪತ್ರಿಕೆಯ ಜಾಹೀರಾತು ಸದಾ
ನನ್ನನ್ನು ಗೇಲಿ ಮಾಡುತ್ತಲೆ ಇದೆ.

ಕದ್ದವರೇನೊ ಸಿಗಬಹುದು
ಸುಮ್ಮನೆ ಎದ್ದು ಹೋದವರು
ಯಾವುದಕ್ಕೂ ನಿಲುಕದವರು
ಯಾವ ಸುಳಿಗೂ ದಕ್ಕದವರು

ಅಕ್ಷರದ ಚುಂಗು ಹಿಡಿದು
ಕವಿತೆ ಕಟ್ಟುವ ತವಕ ನನಗೆ
ನೀನು ಬದುಕು ಕಟ್ಟಿಕೊಂಡಿದ್ದೆ
ನಾನು ಜನರ ಬಾಯಿಗೆ ಸಿಕ್ಕು
ಕತೆಯಾಗಿದ್ದೆ, ಅದಕೆ ಯಾವ
ಜಾಹೀರಾತಿನ ಹಂಗಿಲ್ಲ ಬಿಡು

ಸುಮ್ಮನೆ ಹುಡುಕುತ್ತೇನೆ
ಬದುಕಿನ ತುಂಬಾ ನೀ
ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು
ಸುಳಿವು ಕೊಡದೆ
ಬಿಟ್ಟು ಹೋದ ನೆನಪುಗಳನ್ನು
ಮತ್ತೀಗ ಪತ್ರಿಕೆಯ ಜಾಹೀರಾತು
ಅಣಕಿಸುತ್ತದೆ. ಬದುಕು ಕೂಡಾ.

About The Author

ಮಾರುತಿ ಗೋಪಿಕುಂಟೆ

ಮಾರುತಿ ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಗೋಪಿಕುಂಟೆ ಗ್ರಾಮದವರು. ಶ್ರೀ ಅಮ್ಮಾಜಿ ಗ್ರಾಮಾಂತರ ಪ್ರೌಢಶಾಲೆ ಹಾರೋಗೆರೆಯಲ್ಲಿ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಕತೆ-ಕವನಸಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. "ಎದೆಯ ನೆಲದ ಸಾಲು" ಎಂಬ ಕವನ ಸಂಕಲನ ಅಚ್ಚಿನಲ್ಲಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ