Advertisement
ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಕಳೆದುಹೋದ ಕನಸುಗಳೇ

ಕಾಗೆಗಳ ಕೂಗಿಗೆ
ಗೂಬೆಗಳ ಗೂಂಗುಟ್ಟುವಿಕೆಗೆ
ಇನ್ನಿಲ್ಲವಾದ ಕನಸುಗಳೇ
ಮತ್ತೆ ಹುಟ್ಟಿಬನ್ನಿ

ಕಣ್ಣಿನೊಳಗೆ ಇಳಿದು
ಹೃದಯದಾಳದಲ್ಲಿ ಬೇರುಬಿಟ್ಟು
ಹೆಮ್ಮರವಾಗಿ ಬೆಳೆಯುವಂತೆ
ಮತ್ತೆ ಹುಟ್ಟಿಬನ್ನಿ

ನೀವಿಲ್ಲದೆ ಚಲಿಸದು ಕಾಲ್ಗಳು
ಕಳೆಯದು ನನ್ನ ಒಂದಿರುಳು
ದಾರಿ ದೂರವಾದೀತು
ಎದೆಯು ಭಾರವಾದೀತು

ಮತ್ತೆ ಹುಟ್ಟಿಬನ್ನಿ ಕನಸುಗಳೇ
ಅಜ್ಞಾನ ತಮವನ್ನು ಕೊಂದುಹಾಕುವಂತೆ
ಮಾತ್ಸರ್ಯದ ಎದೆಗೂಡಿಗೆ ಬೆಂಕಿಯಿಡುವಂತೆ
ಹರಕು ಬಾಯಿಗಳಿಗೆ ಹೊಲಿಗೆ ಹಾಕುವಂತೆ

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ