Advertisement

ಮಾರುತಿ ಗೋಪಿಕುಂಟೆ ಬರೆದ ಈ ದಿನದ ಕವಿತೆ

ಸುಳಿವೇ ಇಲ್ಲದೆ..

ಅಕ್ಷರಗಳನ್ನೇನೊ ಜೋಡಿಸಿ
ಪದವಾಗಿಸಿದೆ ಅದರಲ್ಲಿ
ನಿನ್ನ ಧ್ವನಿಯಿರಲಿಲ್ಲ

ಪದ ಪದಗಳ ಸೇರಿಸಿ
ಕವಿತೆ ಕಟ್ಟಿದೆ ಅದರಲ್ಲಿ
ನಿನ್ನ ಪ್ರಾಸವೆ ಇರಲಿಲ್ಲ

ತ್ರಾಸದಿಂದ ಪ್ರಾಸವ
ಸೇರಿಸಿ ಪದ್ಯವಾಗಿಸಿದೆ
ಅದರಲ್ಲಿ ನಿನ್ನ ರಾಗವಿರಲಿಲ್ಲ

ಎದೆಯ ಇನಿದನಿಯ
ಆಲಿಸಿದೆ ಅಲ್ಲಿ ನಿನ್ನ
ಸುಳಿವೆ ಇರಲಿಲ್ಲ

ಸುಳಿವು ಕೊಟ್ಟರೆ
ಸೂಕ್ತ ಬಹುಮಾನ ಎಂಬ
ಪತ್ರಿಕೆಯ ಜಾಹೀರಾತು ಸದಾ
ನನ್ನನ್ನು ಗೇಲಿ ಮಾಡುತ್ತಲೆ ಇದೆ.

ಕದ್ದವರೇನೊ ಸಿಗಬಹುದು
ಸುಮ್ಮನೆ ಎದ್ದು ಹೋದವರು
ಯಾವುದಕ್ಕೂ ನಿಲುಕದವರು
ಯಾವ ಸುಳಿಗೂ ದಕ್ಕದವರು

ಅಕ್ಷರದ ಚುಂಗು ಹಿಡಿದು
ಕವಿತೆ ಕಟ್ಟುವ ತವಕ ನನಗೆ
ನೀನು ಬದುಕು ಕಟ್ಟಿಕೊಂಡಿದ್ದೆ
ನಾನು ಜನರ ಬಾಯಿಗೆ ಸಿಕ್ಕು
ಕತೆಯಾಗಿದ್ದೆ, ಅದಕೆ ಯಾವ
ಜಾಹೀರಾತಿನ ಹಂಗಿಲ್ಲ ಬಿಡು

ಸುಮ್ಮನೆ ಹುಡುಕುತ್ತೇನೆ
ಬದುಕಿನ ತುಂಬಾ ನೀ
ಬಿಟ್ಟು ಹೋದ ಹೆಜ್ಜೆ ಗುರುತುಗಳನ್ನು
ಸುಳಿವು ಕೊಡದೆ
ಬಿಟ್ಟು ಹೋದ ನೆನಪುಗಳನ್ನು
ಮತ್ತೀಗ ಪತ್ರಿಕೆಯ ಜಾಹೀರಾತು
ಅಣಕಿಸುತ್ತದೆ. ಬದುಕು ಕೂಡಾ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. Nagaraja

    ಕವಿತೆ ಚೆನ್ನಾಗಿದೆ ಗೆಳೆಯ ಇಷ್ಟವಾಯಿತು….

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ