Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಆನೆ ಸಾಕಲು ಹೊರಟವಳ ಕಥೆ

ಸುಲಲಿತವಾದ ಪ್ರಬಂಧಗಳಿಗೆ ಅವರು ಆಯ್ದುಕೊಳ್ಳುವ ವಿಷಯಗಳೇನೂ ಅಸಾಮಾನ್ಯವಾದುದಲ್ಲ. ಹೆಚ್ಚಿನವು ದಿನನಿತ್ಯ ಜರುಗುವ ಸಂಗತಿಗಳೇ. ಆದರೆ ಅದನ್ನು ಹೇಳುವ ಶೈಲಿ ಇದೆಯಲ್ಲಾ, ಅದು ಮಾತ್ರ ನಿಜಕ್ಕೂ ಅದ್ಭುತ. ಅತ್ಯಂತ ಚಿಕ್ಕದಾಗಿ, ಚೊಕ್ಕದಾಗಿ ಮತ್ತು ಸರಳವಾಗಿ ನಿರೂಪಣೆ‌ ಮಾಡುತ್ತಾರೆ. ಮಧ್ಯಾಹ್ನ ಮಾಡುವ ಅಡುಗೆಗೆ ಸಂಬಂಧಿತ ಲಹರಿ ಬಂದರೆ ಅದುವೇ ಒಂದು ಪ್ರಬಂಧವಾಗುತ್ತದೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ಮೀನಿನ ರುಚಿ ಹಿಡಿದು ಅಲೆದಾಡಿದವರು

ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಆದರೆ ಇದನ್ನು ಪ್ರವಾಸ ಕಥನವೆನ್ನಲು ಸಾಧ್ಯವೇ ಅಥವಾ ಬೇರೆ ಏನಾದರೂ ಹೆಸರು ಕೊಡಬೇಕೆ ಅನ್ನುವುದು ನನಗೆ ತಿಳಿದಿಲ್ಲ. ಯಾಕೆಂದರೆ ಮೀನಿನ ಖಾದ್ಯಗಳ ಸವಿಯುವ ನೆಪದಲ್ಲಿ ಭಾರತದ ಪ್ರತಿ ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಭೇಟಿಕೊಟ್ಟು, ಆಯಾ ರಾಜ್ಯಗಳಲ್ಲಿ ಮೀನು ಅಲ್ಲಿನ ಸಂಸ್ಕೃತಿಯಲ್ಲಿ ವಹಿಸಿದ ಪಾತ್ರದ ಬಗ್ಗೆ ಲೇಖಕರು ಬಹಳ ಆಳವಾಗಿ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ಮಲೆನಾಡಿನ ಬಿಸುಪು, ಹವಿಗನ್ನಡದ ಸೊಗಸು

ನನಗೆ ಒಂದು ಆಶ್ಚರ್ಯ ಅಂತ ಅನ್ನಿಸಿದ್ದು, ಕತೆ ನಡೆಯವ ಆ ಸಮಯ ಏನಿದೆ ಆಗ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಹೋರಾಟ ಏರುಗತಿಯಲಿದ್ದ ಸಮಯ. ಪ್ರತಿ ಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಜೈಲಿಗೆ ಹೋಗಿದ್ದ ಪರಿಸ್ಥಿತಿ ಇತ್ತು. ಮನೆ ಗಂಡಸ್ರೆಲ್ಲಾ ಜೈಲಲ್ಲಿ, ಈ ಕಡೆ ಜಪ್ತಿ ಮಾಡಲೆ ಬಂದಾಗ ಹೆಂಗಸ್ರೇ ಅಡ್ಡ ನಿಂತು ಪೋಲೀಸರ ವಿರುದ್ಧ ಹೋರಾಡಿದ ಸನ್ನಿವೇಶದ ಘಟನೆಗಳು ಬಹಳ ನಡೆದಿವೆ.
“ಓದುವ ಸುಖ” ಅಂಕಣದಲ್ಲಿ ವಿ.ಟಿ. ಶೀಗೇಹಳ್ಳಿ ಬರೆದ ತಲೆಗಳಿ ಕಾದಂಬರಿಯ ಬಗ್ಗೆ ಬರೆದಿದ್ದಾರೆ ಗಿರಿಧರ್‌ ಗುಂಜಗೋಡ್

Read More

ನಾಲ್ಕು ರಾಜ್ಯಗಳ ಏಳಿಗೆಯ ಅವಲೋಕನ

ಕೃತಿಯು ಮುಖ್ಯವಾಗಿ ಶಿಕ್ಷಣ ಮತ್ತು ಆರೋಗ್ಯ ಸೂಚ್ಯಂಕಗಳನ್ನು ಆದರ್ಶವಾಗಿರಿಸಿಕೊಂಡು ಕಳೆದ ನೂರು ವರ್ಷಗಳಿಂದ ಆದ ಬದಲಾವಣೆಗಳ ಬಗ್ಗೆ ಅಧ್ಯಯನ ನಡೆಸಲಾಗಿದೆ. ನೂರು ವರ್ಷಗಳ ಮುಂಚೆ ಪರಿಗಣನೆಗೆ ತೆಗೆದುಕೊಂಡ ನಾಲ್ಕೂ ರಾಜ್ಯಗಳು ಹೆಚ್ಚುಕಮ್ಮಿ ಒಂದೇ ಪರಿಸ್ಥಿತಿಯಲ್ಲಿದ್ದವು. ಆದರೆ ಉಪರಾಷ್ಟ್ರೀಯತೆಯ ಪ್ರಜ್ಞೆ ಬೆಳೆಸಿಕೊಂಡ ತಮಿಳುನಾಡು ಮತ್ತು ಕೇರಳ ಪ್ರಗತಿ ಹೊಂದಿದರೆ ಆ ಪ್ರಜ್ಞೆ ಬೆಳೆಸಿಕೊಳ್ಳಲು ವಿಫಲವಾದ ರಾಜ್ಯಗಳು ಹೇಗೆ ಹಿಂದುಳಿದಿವೆ ಅನ್ನುವುದನ್ನು ವಿವರಿಸಲಾಗಿದೆ.

Read More

ಸಾಸಿವೆ ತಂದವಳ ಅಕ್ಷರಗಳಲ್ಲಿ ಕಂಡ ಜೀವಚೈತನ್ಯ

ನೋವಿನಲ್ಲೂ ನಗುವನ್ನು ಹುಡುಕುವ, ಅಷ್ಟು ಯಾತನಾಮಯವಾದ ಬರಹಗಳನ್ನು ಬರೆಯುವಾಗಲೂ ನಮ್ಮನ್ನು ನಗಿಸಲು ಪ್ರಯತ್ನಿಸುವ ಅವರ ಬರಹಗಳ ಮೆಚ್ಚಲೇಬೇಕು. ಇದು ಅವರ ಯಾತನಾಮಯವಾದ ಒಂದು ವರ್ಷದ ವಿವರಣೆ ಮಾತ್ರವಲ್ಲ. ಹೇಗೆ ಅವರು ಅದನ್ನು ಎದುರಿಸಿ ಎದ್ದು‌ನಿಂತರು, ಹೇಗೆ ಮನೋಬಲ ಬೆಳೆಸಿಕೊಂಡರು, ನಂತರ ಹೆದರಿ ಮನೆಯಲ್ಲಿ ಕೂರದೇ, ತಮ್ಮ ವೃತ್ತಿಗೆ ತೆರೆದುಕೊಂಡರು, ಬರೆಯಲಾರದಷ್ಟು ನಿಶ್ಯಕ್ತಿಯಿದ್ದರೂ ಕತೆ ಕವನಗಳ ಬರೆದರು, ತಮ್ಮ ಹವ್ಯಾಸಗಳನ್ನು ಕೂಡಾ…

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ