Advertisement
ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

“ರಾಜಾಜಿನಗರ” ಹೆಸರಿನ ಚರಿತ್ರೆ ಗೊತ್ತಾ?

ಒಂದು ಭಾನುವಾರ ಬೆಳಿಗ್ಗೆ ಇಡೀ ರಾಜಾಜಿನಗರ ಬೆಚ್ಚಿ ಬೀಳುವ ಹಾಗೇ ದೊಡ್ಡ ಶಬ್ದ ಕೇಳಿಸಿತು. ಎಲ್ಲರೂ ಧಾವಂತದಿಂದ ಅವರವರ ಮನೆಗಳಿಂದ ಆಚೆ ಬಂದರು. ಏನು ಏನು ಅಂದುಕೊಂಡು ಅವರವರಲ್ಲೇ ಮಾತಾಡಿ ಕೊಂಡರು. ಸ್ವಲ್ಪ ಹೊತ್ತಿಗೆ ಮೊದಲು ವಿಮಾನ ಹೋಯಿತು, ಅದೇ ಸಿಡಿದು ಹೋಗಿರಬೇಕು ಎಂದು ತರ್ಕಿಸಿದರು. ಮನೆಗೆ ಬೀಗ ಜಡಿದು ಬಿದ್ದಿರುವ ವಿಮಾನದ ಅವಶೇಷ ನೋಡಲು ಸಾಲು ಸಾಲಾಗಿ ಇಡೀ ಸಂಸಾರ ಹೊರಟಿತು. ನಾನೂ ಈ ಗುಂಪಿನಲ್ಲಿದ್ದೆ. ಸುಮಾರು ದೂರ ಎರಡು ಮೂರು ಗಂಟೆ ನಡೆದೆವು ಅಂತ ಕಾಣುತ್ತೆ. ಎಲ್ಲೂ ವಿಮಾನದ ಅವಶೇಷ ಕಾಣಿಸಲಿಲ್ಲ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಎರಡನೇ ಕಂತು ನಿಮ್ಮ ಓದಿಗೆ

Read More

ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ ಆರಂಭ

ಮುಂದೆ ಈ ಕುದುರೆ ಗಾಡಿ ಯಾ ಜಟಕಾ ಗಾಡಿ ಪ್ರಸಂಗ ಸಾವಿರಾರು ಸಲ ರಿಪೀಟ್ ಆದವು. ಆಗ ರಾಮಚಂದ್ರಪುರದ ಬಳಿ ಬರುತ್ತಿದ್ದಂತೆ ದೊಡ್ಡ ಇಳಿಜಾರು ಶುರು ಆಗಿ ಸುಮಾರು ನೂರಾ ಐವತ್ತು ಅಡಿ ಆಳಕ್ಕೆ ರಸ್ತೆ ಸರಿದು ನಂತರ ಏರು ಗತಿಯಲ್ಲಿ ಇದು ಮುನ್ನೂರು ಗಜ ದಾಟಿ ರಾಜಾಜಿನಗರ ಎಂಟ್ರೆನ್ಸ್ ತಲುಪುತಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ ಹೊಸ ಸರಣಿ “ಹಳೆ ಬೆಂಗಳೂರ ಕಥೆಗಳು” ಇನ್ನು ಹದಿನೈದು ದಿನಗಳಿಗೊಮ್ಮೆ, ಶುಕ್ರವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟವಾಗಲಿದೆ.

Read More

ಟೆಂಟ್ ಸಿನಿಮಾನೂ ಮತ್ತು ಪೊರಕೆ ನ್ಯೂಸೂ

ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಅವರ ಮನೆಗೆ ಯಾವುದೋ ಸಮಾರಂಭಕ್ಕೆ ಹೋದ ನೆನಪಿದೆ. ಅಲ್ಲಿ ಅಪ್ಪ ಮಡಿಯಲ್ಲಿ ಪುಟ್ಟ ಪಂಚೆ ಕಚ್ಚೆ ಹಾಕಿಕೊಂಡು ಊಟ ಬಡಿಸಿದ ನೆನಪು; ಅಲ್ಲಿ ಮೊಟ್ಟ ಮೊದಲಬಾರಿಗೆ ಊಟದ ಎಲೆಗೆ ಹಳದಿ ಕೆಂಪು ಮಿಶ್ರಣದ ದೊಡ್ಡದಾಗಿ ಹೆಚ್ಚಿದ ಮಾವಿನ ಹಣ್ಣಿನ ಸಿಪ್ಪೆ ಇಲ್ಲದ ಹೋಳು ಬಡಿಸಿದ್ದು, ಅದನ್ನು ನಾನು ಗಬಗಬಾ ತಿಂದಿದ್ದು, ಎದುರು ಕೂತ ರೇಷ್ಮೆ ಸೀರೆ ಉಟ್ಟಿದ್ದ ಚಿಕ್ಕಮ್ಮನ ಹಾಗೆ ಕಾಣಿಸುತ್ತಿದ್ದ ದಪ್ಪನೆ ಹೆಂಗಸರೊಬ್ಬರು ಬಡಿಸುವವರನ್ನು ಕರೆದು ಮಗೂಗೆ ಇನ್ನೊಂದು ಸ್ವಲ್ಪ ಹಣ್ಣು ಬಡಿಸಿ ಅಂತ ಹೇಳಿದ್ದು…. ಎಚ್. ಗೋಪಾಲಕೃಷ್ಣ ಬರಹ

Read More

ಶಾಲಾ ಕಾಲೇಜು ದಿನಗಳ ಮೆಲುಕು

ತರಗತಿಯಲ್ಲಿ ಹೆಚ್ಚು ಅಂಕ ತೆಗೆಯುವ ಹಾಗೂ ಅತಿ ಕಡಿಮೆ ಅಂಕ ತೆಗೆಯುವ ವಿದ್ಯಾರ್ಥಿ ಇವರಿಗೆ ಸಮಾನ ಪ್ರೀತಿಪಾತ್ರರು. ನಾನು ಎರಡನೇ ಗುಂಪಿನ ಖಾಯಂ ಸದಸ್ಯ. ಶಾಲೆಯಿಂದ ಹೊರಗೆ ಸಿಕ್ಕಾಗ ಬಾರೋ ಅಂತ ಕೂಗುವರು. ಎಷ್ಟು ಸೋಶಿಯಲ್ ಸ್ಟಡಿಸ್‌ನಲ್ಲಿ ಈ ಸಲ…. ಅಂತ ಕೇಳುವರು. ನೂರಕ್ಕೆ ಹನ್ನೆರೆಡು ಸಾರ್ ಅನ್ನುತ್ತಿದ್ದೆ. ಹೇಗೆ ಓದುವೆ, ಯಾವ ಹೊತ್ತಿನಲ್ಲಿ ಓದುವುದು…. ಹೀಗೆ ವಿಷಯ ತಿಳಿದು ಅದರ ಪರಿಷ್ಕರಣೆ ಮಾಡುತ್ತಿದ್ದರು.
ಶಾಲಾ ಕಾಲೇಜು ಮೇಷ್ಟರೊಟ್ಟಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ ಎಚ್. ಗೋಪಾಲಕೃಷ್ಣ

Read More

ಝಂಡಾ ಊಂಚಾ ಬಿಟ್ಟು.. ಘಮಘಮಿಸುವ ಊಟದ ಹಿಂದೆ ಹೊರಟೂ…

ಮೌಂಟ್ ಅಬುನಲ್ಲಿನ ಆಶ್ರಮಕ್ಕೆ ಹೋಗಿದ್ದೆ. ಅಲ್ಲಿ ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇರುತ್ತೆ ಅಂತ ಯಾರೋ ಹೇಳಿದ್ದರು. ಇಪ್ಪತ್ತು ನಾಲ್ಕು ಗಂಟೆ ಊಟದ ಮನೆ ಸೇವೆ ಇದ್ದರೆ ದೇವರನ್ನ ಯಾವಾಗ ನೋಡೋದು ಅನ್ನುವ ಸಂಶಯ ಹುಟ್ಟಿತ್ತು. ನನ್ನಾಕೆ ಒಂದು ಮೊಟಕು ಕೊಟ್ಟು ಇಪ್ಪತ್ನಾಲ್ಕು ಗಂಟೇನೂ ತಿಂತಲೇ ಕೂಡು ಹಾಗಿಲ್ಲ ಅಂತ ಭೋಜನ ಶಾಲೆಯಿಂದ ಆಚೆಗೆ ದರ ದರ ಎಳೆದುಕೊಂಡು ಹೋಗಿದ್ದಳು. ಊಟಕ್ಕೆ ಅಲ್ಲೂ ಚಪಾತಿ, ಅದಕ್ಕೆ ನೆಂಚಿಕೊಳ್ಳೂಕ್ಕೆ ಅದೇನೋ ಒಂದು.
ಎಚ್. ಗೋಪಾಲಕೃಷ್ಣ ಬರೆದ ಹಾಸ್ಯ ಪ್ರಬಂಧ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ