Advertisement

ಕೆ ಟಿ ಗಟ್ಟಿ

ಬೀರುವಿನೊಳಗೇ ಅವಿತು ಕೂತ ಅತಿಥಿಗಳು

ಒಮ್ಮೆ ನಾವು ಮೈಸೂರಿಗೆ ಹೋಗಿ ಒಂದಷ್ಟು ದಿನಗಳ ಕಾಲ ಉಳಿದು, ಮರಳಿ ಮನೆಗೆ ಬಂದೆವು. ಬಂದವಳೇ ಬಟ್ಟೆ ಬ್ಯಾಗು ಹಿಡಿದುಕೊಂಡು ಒಳಹೋಗಿ, ಅಲ್ಲಿದ್ದ ಗೋಡೆ ಬೀರಿನ ಬಾಗಿಲು ತೆಗೆದೆ. ಒಂದು ಸಲ ಶಾಕ್ ಹೊಡಿತು. ಗೊಳೋ ಎಂದು ಜೋರಾಗಿ ಅಳುತ್ತಿದ್ದೆ.  ‘ಯಾಕೆ, ಏನೇ ಆಯ್ತು,’ ಹೀಗೆ ಅಳಕ್ಕೆ ಎಂದು, ರೂಮಿಗೆ ಗದರಿಕೊಂಡೇ ಬಂದರು ತೇಜಸ್ವಿ. ಇನ್ನೂ ಜೋರಾಯಿತು ನನ್ನ ಅಳು. ನನಗೆ ಮಾತೇ ಹೊರಡಲಿಲ್ಲ. ‘ಏನೇ’ ಎಂದು, ಹಾರು ಹೊಡೆದುಕೊಂಡು ಬಿದ್ದಿದ್ದ ಬಾಗಿಲಿನತ್ತ ನೋಡಿದರು. ಬೇಸ್ತು ಬಿದ್ದರು. ಈ ಹೊಸ ಅತಿಥಿಗಳಿಂದ ನನಗಾದ ನಷ್ಟ ಎಣಿಸಲಾಗದ್ದು.
ಮೂಡಿಗೆರೆ ಹ್ಯಾಂಡ್ ಪೋಸ್ಟ್ ನಲ್ಲಿ , ರಾಜೇಶ್ವರಿ ತೇಜಸ್ವಿ ಬರೆದ ಬರಹ ಇಂದಿನ ಓದಿಗಾಗಿ.

Read More

ಹಂಗೂ ಹಿಂಗೂ ತೇಜಸ್ವಿ ಇಂಗು ತಂದದ್ದು

ಈ ಮೂಡಿಗೆರೆ ಒಂದು ವಿಚಿತ್ರ ‘ಊರು ಮಾರಾಯರ್ರೆ’. ಇಂಥ ಮಾತಿನ ಶೈಲಿ ಗಮನಿಸಿ ಏನೋ ಆತ್ಮೀಯತೆ ಅನ್ನಿಸೊಲ್ವೆ. ಈ ಊರಿನ ಪೇಟೆ ಅಂಗಡಿಯವರ ರೀತಿನೇ ಹಾಗೆ. ಕಳೆದ ವರ್ಷ ನಮ್ಮ ತೋಟದಲ್ಲಿ ಭರ್ಜರಿ ಮಾವಿನಕಾಯಿ ದೊಡ್ಡ ಸೈಜಿನವು ಹಿಡಿದಿತ್ತು. ಆಪ್ತರಿಗೂ ಕೊಡಲಿಕ್ಕಾಗುತ್ತೆಂದು ಹೆಚ್ಚಿಗೆನೇ ಉಪ್ಪಿನಕಾಯಿ ಹಾಕಿದ್ದೆ. ಆಂಧ್ರ ಬಗೆಯಂತೆ. ಒಗ್ಗರಣೆ ಬೇಕೆಂದು ನನ್ನವರಿಗೆ ಹೇಳಿ ಇಂಗು ತರಿಸಿಕೊಂಡೆ. ಯಾಕೋ ಚೆನ್ನಾಗಿಲ್ಲ ಅನಿಸಿತ್ತು. ತೇಜಸ್ವಿ ಒಳ್ಳೆಯ ಇಂಗು ಬೇಕೆಂದದು ಒಂದೆರಡು ಅಂಗಡಿಯಲ್ಲಿ ಕೇಳಿದರು. ಆಗ ಸಿಗಲಿಲ್ಲವೆನ್ನಿ. ಆದರೆ ಕೆಲದಿನಗಳು ಕಳೆಯುವಷ್ಟರಲ್ಲಿ ಇಂಗಿನ ಸರಕೇ ಮನೆಗೆ ಬಂದು ಬಿದ್ದಿತ್ತು.

Read More

ರೇಶ್ಮಾ ಗುಳೇದಗುಡ್ಡಾಕರ್ ಬರೆದ ಈ ದಿನದ ಕವಿತೆ

“ಬಯಲ ಬಾಳಿಗೆ
ಒಲುಮೆ ಜೋಳಿಗೆ
ಹರಿಯುತಿಹುದು ಜೀವನ
ಪಾತ್ರಗಳ ಬದಲಿಸುತ ನಿಂತ
ನೀರಾಗದೆ ನಿರಾಳವಾಗಿ”- ರೇಶ್ಮಾ ಗುಳೇದಗುಡ್ಡಾಕರ್ ಬರೆದ ಈ ದಿನದ ಕವಿತೆ

Read More

ನಾಗರಾಜ ವೈದ್ಯ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನಾಗರಾಜ ವೈದ್ಯ. ಮೂಲತಃ ಉತ್ತರ ಕನ್ನಡದ ಹೆಗ್ಗಾರದವರಾದ ನಾಗರಾಜ ವೈದ್ಯ ಅವರು ಬರಹಗಾರರು. ತಿರುಗಾಟ, ಫೋಟೋಗ್ರಫಿ ಅವರಿಗಿಷ್ಟ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್ ವಿಳಾಸ: ks.kendasampige@gmail.com

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ