Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಶ್ರಾವಣ ಬಂತೂ ನಾಡಿಗೆ….: ಮಹಾಲಕ್ಷ್ಮೀ ಕೆ. ಎನ್. ಬರಹ

ಈ ಹಸಿರ ಬಸಿರ ತಿಳಿಗಾಳಿಯನ್ನು ಉಸಿರಾಡುವವರು ನಾವುಗಳು. ಜೀವರಾಶಿಗಳ ಚಟುವಟಿಕೆಗಳು ಕೂಡ ಹೆಚ್ಚಾಗುತ್ತವೆ. ಪ್ರಕೃತಿ ಮತ್ತು ಜೀವಿಗಳ ನಡುವಿನಲ್ಲಿ ನಡೆಯುವ ಭಾವನಾತ್ಮಕ ಸಂವಾದ ಹೆಚ್ಚಾಗುತ್ತದೆ. ಭೂಮಿಯನ್ನು ಚುಂಬಿಸುವ ಮಳೆರಾಯ, ಅವಕಾಶ ಸಿಕ್ಕಾಗ ಮಳೆಯಲ್ಲೇ ಚೂರು ಬಂದು ಹೋಗುವ ಸೂರ್ಯ. ಅದ್ಭುತ ಋತುಚಕ್ರ. ನಿಸರ್ಗದ ಕಲಾತ್ಮಕತೆಗೆ ಜೀವವೈವಿಧ್ಯದ ಸಂಗಮಕ್ಕೆ ಕಾರಣವಾಗಿದೆ ಈ ಶ್ರಾವಣ ಮಾಸ. ಪ್ರಕೃತಿಯ ಹೃದಯಧ್ವನಿಯ ಹಬ್ಬ. ಮರದ ರೆಂಬೆ ಕೊಂಬೆಗಳಲ್ಲಿ ಅಳಿಲುಗಳು ಮಾತಿಗಿಳಿಯುತ್ತವೆ, ಕೆಲವೊಮ್ಮೆ ಕೀಟಗಳು ಬಂದು ಇಣುಕಿ ಹೋಗುತ್ತವೆ.
ಶ್ರಾವಣ ಸಂದರ್ಭದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳ ಕುರಿತು ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

Read More

ಮಾನ್ಸೂನ್ ಮಳೆ ಬಾಲ್ಯದ ನೆನಪುಗಳನ್ನು ಹೊತ್ತು ತರುವ ತೇರು: ಮಹಾಲಕ್ಷ್ಮೀ. ಕೆ. ಎನ್. ಬರಹ

ಬೆಚ್ಚಗಿನ ಸ್ವೆಟರ್, ರಾತ್ರಿ ಚಳಿಗೆ ಬೆಚ್ಚಗಿನ ಕಂಬಳಿ, ಮನೆಯ ಹೆಂಚಿನ ಮೇಲಿಂದ ಮಳೆ ನೀರು ಇಳಿಯುವ ಜೋಗುಳದಂತಹ ಶಬ್ದ, ಅಕ್ಕನ ಎಂಟು ತಿಂಗಳ ಮಗಳು ತೊಟ್ಟಿಲಿನಿಂದ ಹೊರಗೆ ತಿಳಿ – ಬಿಳಿ ಕಣ್ಣು ಬಿಟ್ಟು ಜಿಟಿಜಿಟಿ ಮಳೆಯ ರಭಸ ನೋಡುವ ಕುತೂಹಲದ ಕೂಸು. ಹಬೆಯಾಡುವ – ಹೊಗೆಯಾಡುವ ಸ್ನಾನದ ಮನೆ ಕಂಡರೆ ಸುಡುಸುಡು ನೀರನ್ನು ಒಂದೆರಡು ಕಡಾಯ ಮೈಮೇಲೆ ಸುರಿದುಕೊಳ್ಳುವ ಬಯಕೆ – ಹೊರಗಿನ ಕೆಲಸ ಮುಗಿಸಿ ಬಂದವರ ಮನಸ್ಸನ್ನು ಆಯಸ್ಕಾಂತದಂತೆ ಎಳೆಯುತ್ತಲೇ ಇರುತ್ತದೆ.
ಮಾನ್ಸೂನ್‌ ಕುರಿತು ಮಹಾಲಕ್ಷ್ಮೀ. ಕೆ. ಎನ್. ಬರಹ ನಿಮ್ಮ ಓದಿಗೆ

Read More

“ಅವಳು….”: ಮಹಾಲಕ್ಷ್ಮೀ. ಕೆ. ಎನ್. ಬರಹ

ಅವಳಿಗೂ ಬುದ್ಧನಾಗುವ ಆಸೆ. ವೃಷ್ಟಿ ಅವಳು ಸಮಷ್ಟಿ, ಸೃಷ್ಟಿ ಉತ್ಪತ್ತಿಯ ಕಾರಣಕರ್ತೆ ಬುದ್ಧನಾದರೆ ಜಗವ ಪೋಷಿಸುವವರ್ಯಾರು? ತ್ಯಜಿಸಿ ಹೊರಟರೆ ಅಮ್ಮನಾಗಿ ಪಾಲಿಸುವವರ್ಯಾರು? ಒತ್ತಾಸೆಯಾಗುವ ಅವಳು ಹೊರಟುಬಿಟ್ಟರೆ ಭೂಮಿ ಬಂಜರಲ್ಲವೇ?
ಮಹಾಲಕ್ಷ್ಮೀ ಕೆ.ಎನ್.‌ ಬರಹ ನಿಮ್ಮ ಓದಿಗೆ

Read More

ಚಿಗುರು, ಮಳೆ ಮತ್ತು ಒಲವು…: ಮಹಾಲಕ್ಷ್ಮಿ ಕೆ. ಎನ್. ಬರಹ

ಇಲ್ಲಿ ಯಾವುದೋ ಹಳೆಯ ಅಲ್ಲಲ್ಲಿ ತಿರುವಿರುವ ರಸ್ತೆಗೆ ಬಂದವರಿಗೆಲ್ಲಾ ತೋರ್ಬೆರಳಲ್ಲಿ ದಾರಿ ತೋರಿಸಿ ಕಳಿಸುವಾಸೆ. ಇಲ್ಲೊಂದು ಹೆದ್ದಾರಿಯ ಹೆಮ್ಮರಕೆ ಬನ್ನಿ ಸ್ವಲ್ಪಹೊತ್ತು ಕುಳಿತು ಹೋಗಿ ಎಂದು ಬಿಳಲ ರೆಂಬೆ ಕೊಂಬೆಗಳಿಂದ ಕೈಬೀಸಿ ಕರೆಯುವಾಸೆ. ಹಕ್ಕಿಗಳಿಗೆ ತನ್ನಷ್ಟಕ್ಕೆ ತಾನು ಹಾಡುವಾಸೆ. ಮಂದ ಮಾರುತನಿಗೆ ತೇಲುವ ಕಣ್ಗಳಿಗೆ ಜೋಂಪೇರಿಸುವಾಸೆ.
ಮಹಾಲಕ್ಷ್ಮಿ ಕೆ. ಎನ್.‌ ಬರಹ ನಿಮ್ಮ ಓದಿಗೆ

Read More

ಹಿಡಿಯಷ್ಟು ಪ್ರೀತಿ ಕಡಲಿನಷ್ಟಾಯ್ತು: ಮಹಾಲಕ್ಷ್ಮೀ. ಕೆ. ಎನ್. ಬರಹ

ಮೋಡ ಕಪ್ಪಾದಾಗ ಮಳೆ ಬಂದೇಬರುತ್ತೆ ಅನ್ನೋ ಮುನ್ಸೂಚನೆ ಇರುತ್ತೆ, ಕಾಲೇಜಿನಲ್ಲಿ ಸ್ವಲ್ಪ ಮೈ ಬೆಚ್ಚಗಾದಾಗ ಮನೆಗೆ ಹೋಗುವಷ್ಟರಲ್ಲಿ ಇವತ್ತು ಜ್ವರ ಬಂದೇ ಬರುತ್ತೆ ಅಂತ ಗೊತ್ತಾಗುತ್ತೆ, ಇವತ್ತು ರೆಕಾರ್ಡ್ ಬುಕ್ ಮರೆತುಬಂದಿದ್ದೀನಿ ಲೆಕ್ಚರರ್ ಹತ್ತಿರ ಬೈಗುಳಗಳು ಕಾದಿದೆ ಅಂತ ಗೊತ್ತಾಗುತ್ತೆ, ಆದರೆ ಪ್ರೀತಿ ಹುಟ್ಟುವ ಘಳಿಗೆ ಯಾರಿಗೆ ತಾನೇ ತಿಳಿದೀತು? ಕೆಲವೊಮ್ಮೆ ಮೆಚ್ಚುಗೆಯಲ್ಲಿ ಮುಗುಳ್ನಕ್ಕು ಪ್ರಾರಂಭವೇ ಇಲ್ಲದೆಯೇ ಅಲ್ಲಿಗೇ ಮುಕ್ತಾಯವಾಗಬಹುದು.
ಪ್ರೇಮಿಗಳ ದಿನಕ್ಕೆ ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ