Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.

ವಿಳಾಸದ ಅಂದದ ಬೆಡಂಗಿನ ಪೆಂಡಿರೇ ಪೆಂಡಿರಲ್ಲಿಯಾ: ಆರ್. ದಿಲೀಪ್ ಕುಮಾರ್ ಅಂಕಣ

“ಒಂದಷ್ಟು ಸೂಕ್ಷ್ಮವಾಗಿ ಗಮನಿಸಿದಾಗ ಪರಿಸರವನ್ನು ಕಟ್ಟಿಕೊಡುವ ಪಂಪನ ಕಲೆ ಬಹುಮುಖ್ಯವಾಗುತ್ತದೆ. ಯಾವುದೇ ರಸವೂ ಅದು ಸ್ಪಷ್ಟವಾಗಿ ಗ್ರಹಿಕೆಗೆ ಬರುವುದು ಅಲ್ಲಿನ ಪರಿಸರದ ಆಧಾರದ ಮೇಲೆ. ಇಲ್ಲಿ ಕತ್ತಲಾಗಿದೆ, ಪೆಂಡವಾಸದ ಮನೆಯ ಮುಂದೆ ಹೋಗುತ್ತಿದ್ದಾನೆ, ಮಬ್ಬು ಗತ್ತಲು, ಬಾಗಿಲ ಮುಂದೆ ಜಗುಲಿಗಳ ಮೇಲೆ ಕುಳಿತಿರುವವರು, ಅಲ್ಲಿನ ಬಣ್ಣ ಕಪ್ಪು ಮಿಶ್ರಣ ಹಸಿರು. ಹೀಗೆ ಒಂದು ಸಂದರ್ಭದ ಬಹುಮುಖ್ಯ ಅಂಶಗಳೇ ಗಮನ ಸೆಳೆದು ಬಿಡುತ್ತದೆ.”

Read More

ಸಾಮಾನ್ಯಮೇ ಬಗೆಯೆ ಭವತ್ ಕೇಶಪಾಶ ಪ್ರಪಂಚಂ: ಆರ್. ದಿಲೀಪ್ ಕುಮಾರ್ ಅಂಕಣ

“ಹೀಗೆ ಮಾಡಿದ ಪ್ರತಿಜ್ಞೆಯನ್ನ ಕೊನೆಗಾಣಿಸಿ ಯುದ್ಧರಂಗದಲ್ಲಿ ಅವನಾಡುವ ಮಾತು ಬಹಳ ಮುಖ್ಯವಾಗುತ್ತದೆ. ಅದರಲ್ಲಿಯೂ ದುಶ್ಯಾಸನನನ್ನು ಕೊಂದು ಅವಳ ಮುಡಿಯನ್ನು ಕಟ್ಟುವುದು, ಕಟ್ಟಿ ನೋಡಿ ನಗುವುದು ಇಲ್ಲಿನ ಬಹು ಮುಖ್ಯವಾದ ಭಾಗ. ಆ ಪದ್ಯವಂತೂ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹು ಚರ್ಚಿತವಾಗಿದೆ. ಪಂಪನೇ ದ್ರೌಪತಿಯನ್ನು ಕಾರ್ಯ ಕಾರಣದ ಮೂಲ ಅಂಶವಾಗಿ ನಿಲ್ಲಿಸಿ ನೋಡಿರುವುದಕ್ಕೆ ಈ ಪದ್ಯ ಸಾಕ್ಷಿಯಾಗಿದೆ…”

Read More

ಅಲರ್ಗಣ್ಣೊಳ್ ಸ್ಮರಂ ಇರ್ದನಕ್ಕುಂ: ಆರ್.ದಿಲೀಪ್ ಕುಮಾರ್ ಅಂಕಣ

“ದ್ರೌಪತಿಯನ್ನು, ಸುಭದ್ರೆಯನ್ನು, ಹಿಡಿಂಬೆಯೊಂದಿಗೆ ಭೀಮನ ಸಂಬಂಧವನ್ನು ವರ್ಣಿಸುವಾಗ ಇದ್ದ ಒಂದು ಮಿತಿ ಇಲ್ಲಿ ಮೀರಿದೆ. ಕಾವ್ಯ ಸಂವಿಧಾನ ಮತ್ತು ಕಾವ್ಯದ ಬಂಧ ಅದನ್ನು ಒಪ್ಪುತ್ತದೆ. ಸುಭದ್ರೆಯನ್ನು ನೋಡಿದ ತಾಪ ಪರಿಹಾರಕ್ಕೆ ಅಂದಿನ ರಾತ್ರಿಯೇ ಅರ್ಜುನ ಊರು ಸುತ್ತುವುದು ಇಲ್ಲಿನ ಮುಖ್ಯ ಭಾಗ. ಆದರೆ ಹೋಗುವಾಗ ಅವನಿಗಷ್ಟೇ ಕಾಣುವ ವೇಶ್ಯೆಯರನ್ನು ತೋರಿಸದೆ ಓದುಗರಿಗೂ ಕಾಣಿಸುವಂತೆ ಮಾಡುವುದನ್ನು ನೋಡಿ ಪಂಪನ ರಸಿಕತೆಗೆ…”

Read More

ನೀನ್ ಬಾ ಪೋಪಂ: ದಿಲೀಪ್ ಕುಮಾರ್ ಅಂಕಣ

“ಬೇಟೆಯಾಡಲು ಬಂದ ಶಂತನುವಿಗೆ ಬಹಳ ದೂರದಲ್ಲಿಂದಲೇ ಯೋಜನಗಂಧಿಯ ದೇಹದಿಂದ ಬರುತ್ತಿದ್ದ ವಾಸನೆ ಸೆಳೆಯುತ್ತದೆ. ಮೊದಲೇ ಬಳಲಿದ್ದವನು ಆ ವಾಸನೆಗೆ ಮರುಳಾಗಿ ದುಂಬಿಯಂತೆ ಅದನ್ನರಸಿ ಬರುತ್ತಾನೆ. ಬರುವಾಗಲೇ ಆ ಮಧುವಿನ ವಾಸನೆಗೆ ಸೋತವನು, ಎಳೆ ಜಿಂಕೆಯ ಹಾಗೆ ಕಣ್ಣುಗಳು ಇರುವವಳನ್ನು ಕಂಡು, ಕಂಡೊಡನೆ ಒಲಿದು, ಸತ್ಯ ಸಾಬೀತುಪಡಿಸಲು ಹಿಡಿಯುವ ದಿಬ್ಯದ ಹಾಗೆ ಅವಳನ್ನು ಹಿಡಿದು ಮಾತು ಪ್ರಾರಂಭ ಮಾಡುತ್ತಾನೆ.”

Read More

ಆರ್. ದಿಲೀಪ್ ಕುಮಾರ್ ಬರೆದ ಎರಡು ಕವಿತೆಗಳು

“ಇಲ್ಲಿ ನಿಂತ ಅಲ್ಲಮನ ಭಂಗಿ
ಪಾಣಿನಿಯ ಭಾಷೆಯ ಲಯಕಾಗಿ ಕೊಟ್ಟ ಪೆಟ್ಟು
ಕನ್ನಡಿಸಿದೆ ಇಂದಿಗೂ ಪುಟ್ಟ ಪುಟ್ಟ ಪದಗಳಲೆ
ನಿಂತು ನಗುತಿದೆ ಅಲ್ಲಮನ ಕಣ್ಣಲ್ಲಿ”- ಆರ್. ದಿಲೀಪ್ ಕುಮಾರ್ ಬರೆದ ಎರಡು ಕವಿತೆಗಳು

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ