Advertisement

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು

ಹುಣ್ಣಮೀಗೊಂಥರಾ ಹೋಳಗಿ, ಅಮ್ವಾಸಿಗೊಂಥರಾ ಹೋಳಗಿ…

“ಸಣ್ಣಸಣ್ಣ ಸಂಭ್ರಮಕ್ಕೂ, ಹಬ್ಬಕ್ಕೂ ಹುಣ್ಣಮೀಗೂ ಕಡ್ಲಿಬ್ಯಾಳೀ ಹೋಳಿಗಿ, ತೊಗರಿ ಬ್ಯಾಳಿ ಹೋಳಿ, ಆ ಕಡಬು ಈ ಕಡುಬು, ಮತ್‌ ಆ ಥರದ್‌ ಹುಗ್ಗಿ, ಇಂಥಾ ಹುಗ್ಗಿ ಅಂತೆಲ್ಲ ಮಾಡೂದ ಮಾಡೂದು. ಸೀ ಇಷ್ಟಾ ಅಂತ ಒಬ್ಬಾಕೇ ಮಾಡಿ ಕುತ್ಕೊಂಡ್‌ ತಿನ್ನೂವಂಥ ಹೆಣಮಗಳು ಅಲ್ಲ ಬಿಡ್ರಿ. ತಾ ಜಗ್ಗ ಕೆಲಸಾ ಮಾಡಿ ಮಂದೀಗೆ ತಿನ್ನಸೂದಂದ್ರ ಸಂಭ್ರಮ ಅಕೀಗೆ. ಹಂಗಂತನ, ನಮ್‌ ಹಳೇಮನ್ಯಾಗಿದ್ದ ನನ್‌ ಕ್ಲಾಸ್‌ ಮೇಟು ಡುಮ್ಮನ ದಿನೇಶಾ, “ಏ, ನಿಮ್‌ ಮಮ್ಮೀನ ನಮ್‌ ಮಮ್ಮೀನ ಎಕ್ಸ್ಚೇಂಜ್‌ ಮಾಡ್ಕೊಳ್ಳೂಣಣ… ಪ್ಲೀಸ್‌..”

Read More

ಬೆಳಕಿನಿಂದ ಕತ್ತಲಿಗೆ ಮತ್ತೂ ಶಬ್ದದಿಂದ ನಿಶ್ಯಬ್ದಕೆ: ರೂಪಶ್ರೀ ಕಲ್ಲಿಗನೂರ್‌ ಲೇಖನ

“ನಗರವಾಸಿಗಳಿಗೆ ಸಹಜವಾಗಿರಬೇಕಿದ್ದ ಕತ್ತಲೆಂದರೂ ಭಯ, ನಿಶ್ಯಬ್ದತೆಯೂ ಭಯ.. ಕೆಲಸದ ಬೆನ್ನೇರಿ ನಗರಗಳಲ್ಲಿ ಬಂದು ಕುಳಿತ ನಾವು ಪ್ರಕೃತಿಯಿಂದ ದೂರವುಳಿದು ನಮ್ಮದೇ ಕೃತಕ ಜಗತ್ತನ್ನು ಸೃಷ್ಟಿಸಿಕೊಂಡಿದ್ದೇವೆ. ನಾವು ಮಲಗುವ ಹೊತ್ತಿಗೆ ಪೂರ್ಣ ಕತ್ತಲೂ ಇಲ್ಲ, ನಿಶ್ಯಬ್ದತೆಯೂ ಇಲ್ಲ… ಅರೆಬರೆ ಕತ್ತಲಿಗೆ ಹೊಂದಿಕೊಂಡು ಮಲಗುತ್ತಿದ್ದೇವೆ. ಯಾವೊಂದೂ ಸದ್ದಿಲ್ಲದೇ….”

Read More

ಇದು ಪ್ರಕೃತಿ ಕಲಿಸುವ ಪಾಠವ?: ರೂಪಶ್ರೀ ಕಲ್ಲಿಗನೂರ್ ಅಂಕಣ

“ವಾರದ ಹಿಂದಿನವರೆಗೆ ಜಗತ್ತು ಅಭಿವೃದ್ಧಿಯ ಹೆಸರಲ್ಲಿ ಹೇಗೆಲ್ಲ ನಾಟ್ಯವಾಡುತ್ತಿತ್ತು? ಬದುಕಿನ ಬಗ್ಗೆ, ನಮ್ಮಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರೀತಿ, ಕಾಳಜಿ ಇರುವ, ಮಹತ್ವ ಗೊತ್ತಿರುವವರ ಕಣ್ಣಲ್ಲಿ, ಅಭಿವೃದ್ಧಿ ಅನ್ನುವುದು ಹಗ್ಗ ಬಿಚ್ಚಿದ ಹುಚ್ಚು ಕುದುರೆಯ ಓಡಾಡುತ್ತ, ನಿಸರ್ಗವನ್ನು ಹಾಳುಮಾಡುತ್ತಿರುವಂತೆ ಕಂಡಿದ್ದಿರಬೇಕು. ಅದರ ಓಟಕ್ಕೊಂದು ಲಂಗು ಲಗಾಮು ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ಅದು ವೇಗ ಪಡೆದುಕೊಂಡಿತ್ತು..”

Read More

ಅಗರ್ತಲಾದ ಬೀದಿಗಳಲ್ಲಿ ಸುತ್ತಾಡಿದ ನೆನಪುಗಳು: ರೂಪಶ್ರೀ ಕಲ್ಲಿಗನೂರ್ ಅಂಕಣ

“ತ್ರಿಪುರಾ ವಿಶ್ವವಿದ್ಯಾಲಯದಿಂದ ನೀರ್ ಮಹಲ್ ಮೂವತ್ತು ಕಿಲೋಮೀಟರುಗಳಷ್ಟು ದೂರವಿತ್ತು. ಹಾದಿಯುದ್ದಕ್ಕೂ ಅಲ್ಲಲ್ಲಿ ಹಸುರು ಗದ್ದೆಗಳು, ಕೈಕಾಲು ಮುರಿದುಕೊಂಡು ಬೀದಿಗೆ ಬಿದ್ದ ಬಂಗಾಳಿ ದೇವತೆಯರು, ಮೆಟಲ್ ಶೀಟಿನ ಅಂಗಡಿಗಳು, ಮನೆಗಳು, ಕಾಡು ಕಡಿದು ಎದೆಯುಬ್ಬಿಸಿಕೊಂಡು ಎದ್ದು ನಿಂತಿದ್ದ ರಬ್ಬರ್ ತೋಟಗಳು ಸಿಕ್ಕವು. ಪ್ರವಾಸಿಗರ ಕೊರತೆಯಿಂದ ಹಾಗೂ ಬಡತನದ ಹೊಡೆತದಿಂದ ಅಗರ್ತಲಾ…”

Read More

ಶಹರದ ಗೋಡೆಗಳ ಕೆಡವುದು ಹೇಗೆ?: ರೂಪಶ್ರೀ ಕಲ್ಲಿಗನೂರ್ ಅಂಕಣ

“ಅವೆಲ್ಲ ಅಮ್ಮ ಬೆಳೆಸಿದ ಹೂಗಳು. ಮನೆಯ ಮುಂದೆ ಹೂ ಬೆಳೆಸಲು ಜಾಗವೂ ಇಲ್ಲ, ಹಿಡಿ ಮಣ್ಣೂ ಇಲ್ಲ. ಹಾಗಂತ ಅಮ್ಮ ಸುಮ್ಮನಿರೋಲ್ಲ. ಬೇರೆಯವರ ಟೆರೆಸ್ಸಿನ ಮೇಲೇ, ತನ್ನ ಗಾರ್ಡನ್ನನ್ನು ಬೆಳೆಸುತ್ತಿದ್ದಾರೆ. ಮನೆಯಹಾಗೆ ಇಷ್ಟಗಲ ಮೊಗವರಳಿಸಿಕೊಂಡು ನಿಲ್ಲುವ ಒಂದೊಂದೂ ಹೂಗಳನ್ನ ಅವಳು ಪ್ರೀತಿಯಿಂದ ನೋಡ್ತಾರೆ. ಮನೆಗೆ ಹೋದವರ ಮುಂದೆಲ್ಲ ಅದರ ಅಂದಚಂದದ ಗುಣಗಾನ ಮಾಡ್ತಾ, ಅಕಸ್ಮಾತ್ ಯಾರಾದ್ರೂ ಹೇಳದೇ ಕೇಳದೇ ಹೂಗಳನ್ನ ಕಿತ್ತುಬಿಟ್ರೆ ಮುಗೀತು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ