Advertisement

ದೇವಿಕಾ ನಾಗೇಶ್

ಸುಧಾ ಆಡುಕಳ ಬರೆದ ಈ ಭಾನುವಾರದ ಕತೆ “ಆರೂವರೆ ಅಡಿಯ ಮನುಷ್ಯ”

ನಾನು ಗುರುವೆಂದು ಭಾವಿಸಿದ ಫುಲೆ ದಂಪತಿಗಳು ಹೇಳಿದ್ದೂ ಇದೇ ಮಾತುಗಳನ್ನು. ಪುಟ್ಟ ಬಾಲಕಿಯರಿಂದ ಹಿಡಿದು, ಮದುವೆಯಾಗಿ ವಿಧವೆಯರಾದ ಹೆಣ್ಣುಗಳವರೆಗೆ ಎಲ್ಲರ ಕೈಯ್ಯಲ್ಲಿಯೂ ಅಕ್ಷರದ ದೀವಿಗೆಯನ್ನು ಹಿಡಿಸಬೇಕೆಂದು ಅವರು ಶ್ರಮಿಸಿದ ಮಾರ್ಗ ನನ್ನೆದುರು ತೆರೆದುಕೊಂಡಿತ್ತು. ಅವರು ಹುಟ್ಟುಹಾಕಿದ ಅರಿವಿನ ಸಸಿಯಿಂದು ಆರೈಕೆಯಿಲ್ಲದೇ ಸೊರಗಿ ಸಾಯುವ ಸ್ಥಿತಿಯಲ್ಲಿತ್ತು. ವಾಸ್ತವ ಸತ್ಯವನ್ನರಿಯಲು ನಾನು ರಾಜ್ಯದ ತುಂಬೆಲ್ಲ ಸಂಚರಿಸತೊಡಗಿದೆ.
ಸುಧಾ ಆಡುಕಳ ಬರೆದ ಕತೆ “ಆರೂವರೆ ಅಡಿಯ ಮನುಷ್ಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಅಮ್ಮ ಮತ್ತು ಹುಣ್ಣಿಮೆ: ಸುಧಾ ಆಡುಕಳ ಬರಹ

ಪ್ರತಿದಿನ ಸ್ನಾನಮಾಡಿ ಬಂದಕೂಡಲೇ ಅಮ್ಮ ಮುಖದ ತುಂಬ ಪಾಂಡ್ಸ್ ಪೌಡರನ್ನು ಢಾಳಾಗಿ ಹಚ್ಚಿಕೊಳ್ಳುತ್ತಿದ್ದಳು. ಅಶ್ವತ್ಥದ ಎಲೆಯಾಕಾರದಲ್ಲಿ ಕಾಡಿಗೆಯನ್ನು ಚಂದಗೆ ಬೊಟ್ಟಾಗಿಸುತ್ತಿದ್ದಳು. ಎಲ್ಲರಂತೆ ಕುಂಕುಮವನ್ನು ಹಣೆಗೆ, ತಾಳಿಗೆ ಹಚ್ಚಿಕೊಳ್ಳದೇ ತುಟಿಗೆ ನವಿರಾಗಿ ಲೇಪಿಸಿಕೊಳ್ಳುತ್ತಿದ್ದಳು. ಎಲ್ಲವೂ ಮುಗಿದು ಕನ್ನಡಿಯಲೊಮ್ಮೆ ಇಣುಕುವಾಗ ಅವಳ ಮುಖದಲ್ಲೊಂದು ಹೂ-ನಗೆಯಿರುತ್ತಿತ್ತು.
ಇಪ್ಪತ್ತೊಂಭತ್ತು ವರ್ಷಗಳ ಹಿಂದೆ ಹುಣ್ಣಿಮೆಯ ರಾತ್ರಿ ತೀರಿಕೊಂಡ ತಮ್ಮ ತಾಯಿಯ ಕುರಿತು ಸುಧಾ ಆಡುಕಳ ಬರಹ ನಿಮ್ಮ ಓದಿಗೆ

Read More

ಹೊಳೆಯೊಂದು ಹರಿದ್ಹಾಂಗೆ…..: ಸುಧಾ ಆಡುಕಳ ಅಂಕಣ

ತಮ್ಮೂರಿನ ಹೊಳೆಗೂ ಒಂದು ಪುರಾಣವಿರುವುದು ತಿಳಿದು ನೀಲಿಗೆ ಬಹಳ ಖುಶಿಯಾಯಿತು. ಮರುಕ್ಷಣವೇ ಇನ್ನಿಲ್ಲವಾಗುತ್ತಿರುವ ಹೊಳೆಯ ನೆನಪಾಗಿ ವಿಷಾದ ಆವರಿಸಿತು. ಅವಳ ಇತಿಹಾಸದ ಶಿಕ್ಷಕರು ಕಾಣೆಯಾಗಿರುವ ನದಿಗಳ ಬಗೆಗೆ ಎಷ್ಟೊಂದು ವಿಷಯಗಳನ್ನು ಹೇಳಿದ್ದರು. ತಮ್ಮೂರಿನ ಹೊಳೆ ಹೋಗಿ ಸೇರುವ ನದಿಯೆಲ್ಲಿಯಾದರೂ ಕಾಣೆಯಾದರೆ ಅದೊಂದು ವಿದ್ಯಮಾನವಾಗಿ ಉಳಿಯುತ್ತದೆ. ಹೊಳೆ ಕಾಣೆಯಾದರೆ ಹೇಳಹೆಸರಿಲ್ಲದೇ ಮರೆಯಾಗಿಬಿಡುತ್ತದೆ. ಹೀಗೆಲ್ಲ ಯೋಚನೆಗಳು ರಾತ್ರಿಯಿಡೀ ಅವಳನ್ನು ಕಾಡತೊಡಗಿದವು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ತೈದನೆಯ ಹಾಗೂ ಕೊನೆಯ ಕಂತು ನಿಮ್ಮ ಓದಿಗೆ

Read More

ಆ ಹೊಳೆವ ಕಂಗಳು…: ಸುಧಾ ಆಡುಕಳ ಅಂಕಣ

ಅದೇನು ಜಾದೂ ನಡೆಯಿತೋ ತಿಳಿಯದು, ಅಲ್ಲಿಂದ ತಿರುಗಿ ಬಂದ ಮಂಜಿಯ ಅಪ್ಪ ಗಡುಸಾಗಿ ಮಾತನಾಡತೊಡಗಿದ, “ಮಗಳು ನಂದು, ಏನು ಮಾಡಬೇಕಂತ ನಂಗೊತ್ತದೆ. ನೀವು ಇನ್ನೂ ಮೀಸೆ ಸರಿಯಾಗಿ ಬರದಿರೋರೆಲ್ಲ ಕಾನೂನು ಮಾತಾಡೂದು ಬ್ಯಾಡ. ಅವಳ ದೇಹ ಬಿಡುಗಡೆಗೆ ಕಾಯ್ತದೆ. ನಮ್ಮ ಕುಟುಂಬದ ದೆಯ್ಯಗಳು ಅವಳನ್ನು ಕಳಿಸಿಕೊಡು ಅಂತ ಕೂಗ್ತಿವೆ. ನೀವು ಪೋಲೀಸು, ಕಾನೂನು ಅಂತ ವರಾತ ಸುರುಮಾಡಿ ಅವಳ ದೇಹ ಕೊಳೆಯೂ ಹಾಗೆ ಮಾಡಬೇಡಿ.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಇಪ್ಪತ್ನಾಲ್ಕನೆಯ ಕಂತು ನಿಮ್ಮ ಓದಿಗೆ

Read More

ನೀಲಿ ಜಗತ್ತು: ಸುಧಾ ಆಡುಕಳ ಅಂಕಣ

“ಇಕಾ, ನೀನು ಇದನ್ನೊಂದು ಸಲ ಓದು. ಬರೀ ನಿನ್ನ ಶಾಲೆ ಪುಸ್ತಕ ಓದಿ ಹಾಳಾಗಬೇಡ. ಇದನ್ನು ಓದಿದ್ರೆ ನಿಂಗೂ ಮಾನ, ಮರ್ಯಾದೆ ಎಲ್ಲ ಮರೆತುಹೋಗ್ತದೆ.” ಎನ್ನುತ್ತಾ ಹೆಣ್ಣು ಗಂಡುಗಳೆರಡು ವಿಚಿತ್ರ ಭಂಗಿಯಲ್ಲಿರುವ ಪುಸ್ತಕವನ್ನು ಅವಳೆಡೆಗೆ ಹಿಡಿದ. ಅದನ್ನು ನೋಡಿದ್ದೇ ನೀಲಿಯ ಎದೆಯಲ್ಲಿ ನಡುಕ ಪ್ರಾರಂಭವಾಗಿ ಇದ್ದೆನೋ ಬಿದ್ದೆನೋ ಎಂದು ಮನೆಯೆಡೆಗೆ ಓಡತೊಡಗಿದಳು. ಆನಂದನ ಅಮ್ಮನಿಗೆ ಇವೆಲ್ಲವನ್ನೂ ಹೇಳಬೇಕೆಂದು ಎಷ್ಟೋ ಸಲ ಅಂದುಕೊಂಡಳಾದರೂ ಮಗನನ್ನು ದನಕ್ಕೆ ಬಡಿಯುವಂತೆ ಬಡಿಯುವ ಅವಳು ಇಂಥ ಸುದ್ದಿ ಕೇಳಿದರೆ ಅವನನ್ನು ಕೊಂದೇಬಿಟ್ಟಾಳೆಂದು ಸುಮ್ಮನಾದಳು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ