Advertisement

ದೇವಿಕಾ ನಾಗೇಶ್

ಅಕ್ಷರಗಳು ಅನಾವರಣಗೊಳಿಸುವ ಸತ್ಯ

ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ.
ದೇವನೂರ ಮಹಾದೇವ ಬರೆದ “ಎದೆಗೆ ಬಿದ್ದ ಅಕ್ಷರ” ಕೃತಿಯ ಕುರಿತು ಸುಧಾ ಆಡುಕಳ ಬರಹ

Read More

ಭಾಷಾ ಕಲಿಕೆಯ ಕುತೂಹಲಕರ ಆಯಾಮಗಳು

ಭಾಷೆಯನ್ನು ಮಕ್ಕಳು ಮಾತನಾಡಲು,  ವಿಷಯಗಳನ್ನು ತಿಳಿಯಲು ಮಾತ್ರವೇ ಬಳಸುವುದಿಲ್ಲ. ಭಾಷೆಯನ್ನವರು ಓದುವುದು ಮತ್ತು ಬರೆಯುವುದರ ಮೂಲಕ ಮಾತ್ರವೇ ಕಲಿಯುವುದೂ ಇಲ್ಲ. ಅವರ ಅನುಭವಕ್ಕೆ ನಿಲುಕುವ ಪ್ರತಿಯೊಂದು ವಸ್ತುಗಳು ಮತ್ತು ದೈನಂದಿನ ಅನುಭವಗಳ ಮೂಲಕ ಭಾಷೆಯನ್ನು ಕಲಿಯುತ್ತಾ ಹೋಗುತ್ತಾರೆ. ಎಷ್ಟು ಹೊಸ ಅನುಭವಗಳಿಗೆ ತೆರೆದುಕೊಳ್ಳುವರೋ ಅಷ್ಟು ಹೆಚ್ಚು ಪದ ಸಂಪತ್ತು ಮತ್ತು ಭಾಷಾಜ್ಞಾನ ಅವರಲ್ಲಿ ವೃದ್ಧಿಯಾಗುತ್ತ ಸಾಗುತ್ತದೆ. …

Read More

ಸುಧಾ ಆಡುಕಳ ಅನುವಾದಿಸಿದ ಟ್ಯಾಗೋರರ ಭಾಷಣ

ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ, ಬರಹಗಾರ ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿ ಕೃತಿಯನ್ನು ಕನ್ನಡದ ಲೇಖಕಿ ಸುಧಾ ಆಡುಕಳ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ನೊಬೆಲ್ ಪ್ರಶಸ್ತಿ ಸ್ವೀಕರಿಸಿದ ಸಂದರ್ಭದಲ್ಲಿ ಟ್ಯಾಗೋರರು ಮಾಡಿದ ಭಾಷಣವನ್ನು ಈ ಕೃತಿಯಲ್ಲಿ ಸೇರಿಸಲಾಗಿದೆ. ವಿದ್ವಾಂಸ, ತತ್ವಜ್ಞಾನಿ ಆಗಿದ್ದ ಟ್ಯಾಗೋರರು ಈ ಭಾಷಣದಲ್ಲಿ ತಮ್ಮ ಬಗ್ಗೆ ಹಾಗೂ ಜಗತ್ತನ್ನು ತಾವು ಅರ್ಥೈಸಿಕೊಂಡ ಬಗ್ಗೆ ವಿವರಿಸಿದ್ದಾರೆ. ಗಂಗೆಯ ತಟದಲ್ಲಿ ಕಳೆದ ದಿವ್ಯ ಏಕಾಂತದ ಕ್ಷಣಗಳು ನೀಡಿದ ಪ್ರತಿಫಲನವಾಗಿ ಕವನಗಳು ಹೇಗೆ ಒಲಿದು ಬಂದವು ಎಂಬುದನ್ನು ಹೇಳಿದ್ದಾರೆ.

Read More

ಬೃಂದಾವನಕೆ ಗೋವನು ಕಾಯಲು…

“ನಮ್ಮ ಆಟ ಒಂದು ಕಡೆಗಾದರೆ ರಾಸುಗಳ ಆಟ ಇನ್ನೊಂದು ಮೋಜಾಗಿರುತ್ತಿತ್ತು. ಒಂದೇ ಮನೆಯ ರಾಸುಗಳು ಹೊತ್ತಾಟ ಮಾಡುತ್ತಿರಲಿಲ್ಲ. ಆದರೆ ಇಲ್ಲಿ ಅನೇಕ ಮನೆಯ ಗಂಟಿಗಳು ಸೇರುತ್ತಿದುದರಿಂದ ತಮ್ಮ ಅಸ್ತಿತ್ವ ಸ್ಥಾಪನೆಗಾಗಿ ಕಾದಾಟ ಸದಾ ನಡೆಯುತ್ತಿತ್ತು. ದನಗಳೆಲ್ಲ ಸಾಮಾನ್ಯವಾಗಿ ಈ ಉಸಾಬರಿಗೆ ಹೋಗುತ್ತಿದ್ದುದು ಕಡಿಮೆ. ಸೊಕ್ಕಿ ಬೆಳೆದ ಗೂಳಿಗಳು ಗದ್ದೆಗಿಳಿಯುತ್ತಿದ್ದಂತೆ ಗುಟುರು ಹಾಕಿ…”

Read More

ಮರಾಠವಾಡಾದ ದಲಿತನ ಆತ್ಮಕಥನ ಕುರಿತು ಸುಧಾ ಆಡುಕಳ ಬರಹ

“ಪರಲಾದನಿಗೆ ಇನ್ನೊಂದು ಅಕ್ಕ ಇದ್ದಳಾದರೂ ಅವಳ ಗಂಡ ಸಾಕ್ಷಾತ್ ಯಮಸ್ವರೂಪಿ! ಅವನಿಗಂಜಿ ಅವಳ ಊರಿಗೆ ಹೋದರೂ ಈ ಹುಡುಗ ಮನೆಯವರೆಗೆ ಹೋಗಲಾರ. ಊರ ಮುಂದಿನ ಗುಡಿಯಲ್ಲಿಯೇ ಕುಳಿತು, ಮಲಗಿ ಕಾಲ ಕಳೆಯುವ ಇವನನ್ನು ಕಂಡು ಮಂದಿ ಅಕ್ಕನಿಗೆ ಸುದ್ದಿ ಮುಟ್ಟಿಸಬೇಕು. ಅವಳು ಬಂದು ಸಮಯ ನೋಡಿ ಮನೆಗೆ ಕರಕೊಂಡು ಹೋಗಿ ಬಡಿಸಬೇಕು.”
ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಪ್ರ. ಈ. ಸೋನಕಾಂಬಳೆ ಅವರ ಆತ್ಮಕಥನ ‘ನೆನಪಿನ ಹಕ್ಕಿ’ಯ ಕುರಿತು ಸುಧಾ ಆಡುಕಳ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ