Advertisement

ಕ್ಷಮಾ ವಿ. ಭಾನುಪ್ರಕಾಶ್

ಸಾವಿರದ ಮಕ್ಕಳ ಮಹಾಮಾತೆ: ಸುಮಾ ಸತೀಶ್ ಬರಹ

ಪ್ರಕೃತಿಯನ್ನು ತಾಯಾಗಿ ಆರಾಧಿಸುವ ಪರಂಪರೆ ನಮ್ಮದು. ಸುಗ್ಗಿಯ ಆಚರಣೆ, ಗೋಮಾಳಗಳು, ಊರಿಗೊಂದರಂತೆ ಇದ್ದ ಗುಂಡುದೋಪುಗಳು, ಇರುವೆ ಗೂಡಿಗೂ ನುಚ್ಚು ಎರೆವ ಸಂಸ್ಕೃತಿ, ಜಂಗಮಯ್ಯ, ಭಿಕ್ಷುಕ, ಆಯಗಾರರು, ದನಕರು, ಪ್ರಾಣಿ ಪಕ್ಷಿ ತಿಂದುಂಡ ನಂತರ ಮನೆಗೆ ಒಯ್ಯುವ ಸುಗ್ಗಿ ಆಚರಣೆ ಇಂತಹ ಸದಾಚಾರಗಳೆಲ್ಲಾ ನಮ್ಮ ನಡುವಿಂದ ಕಣ್ಮರೆಯಾಗಿದೆ. ಅಂತಹದ್ದರಲ್ಲಿ ಇಲ್ಲಿ ನಮಗೆ ಅನನ್ಯವೆನಿಸುವುದು ತಿಮ್ಮಕ್ಕ ಪ್ರಕೃತಿಯನ್ನು ಕೂಸಾಗಿ ಭಾವಿಸಿದ ಪರಿ. ಇದು ಇನ್ನೂ ಒಂದು ಹೆಜ್ಜೆ ಮಿಗಿಲಾದುದು. ನಮಗೊಂದು ಮಾನವೀಯ ಪರಂಪರೆಯನ್ನು ಹಾಸಿ ಕೊಟ್ಟಿರುವಂತಹದ್ದು.
ಸಾವಿರದ ಮಕ್ಕಳ ಮಹಾಮಾತೆ ಸಾಲುಮರದ ತಿಮ್ಮಕ್ಕನವರ ಕುರಿತು ಸುಮಾ ಸತೀಶ್ ಬರಹ

Read More

ಗೌರಮ್ಮನ ಜತ್ಯಾಗೇ ಬರಾ ಗಣಪ್ಪ: ಸುಮಾ ಸತೀಶ್ ಸರಣಿ

ನಮ್ಮೂರಿನ್ ಗೌರೀಗೆ ಪೂಜೆ ಮಾಡ್ತಿದ್ದಿದ್ದು ವಸಿ ಜನ್ವೇಯಾ. ಆದ್ರೆ ಗಣೇಶುನ್ನ ಬಿಡಾಕೇಂತ್ಲೇ ಊರಿನ್ ಜನ್ವೆಲ್ಲಾ ಮೇಲ್ ಬಿದ್ದು ಕಾದ್ಕಂಡು ಕುಂತಿರ್ತಿದ್ವಿ. ಐದನೇ ದಿನ ಸಂಜೀ ಹೊತ್ನಾಗೆ, ಗೌರಮ್ಮುಂಗೆ ಮಡ್ಲು ತುಂಬಿ, ಮಗುನ್ನ ಮುಂದಿಟ್ಗಂಡು, ಅವ್ವನ್ನ ಹಿಂದ್ ಕುಂಡ್ರಿಸಿ ಮೆರೋಣಿಗೆ ಹೊಂಡುತಿತ್ತು. ರಾಮ ದ್ಯಾವ್ರ ಗುಡೀಗ್ಳಿಂದ ನಮ್ಮನೆ ಆಸಿ, ಕೆರೆ ಏರಿ ಕಡೆ ಊರ ಗಂಡಸರು, ಹೆಂಗಸರು, ಚಳ್ಳೆ ಪಿಳ್ಳೆಗ್ಳು ಜೈಕಾರ ಹಾಕ್ಕಂಡು ಗಣಪತಿ ಬಾಪ್ಪ ಮೋರ್ಯಾ ಅಂತ ಕಿರುಚ್ಕಂಡು ಅವುರ್ ಹಿಂದಿಂದ್ಲೇ ಸಾಗುಸ್ಕಂಡು ಹೋಗ್ತಿದ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಗಣೇಶ ಚತುರ್ಥಿಯ ಆಚರಣೆಯ ಕುರಿತು ಹೇಳುತ್ತಲೇ ಈ ಸರಣಿ ಇಲ್ಲಿಗೆ ಮುಕ್ತಾಯವಾಗುತ್ತದೆ

Read More

ಕದರಪ್ಪನ ಗುಡೀ‌ ಮುಂದ್ಲ ಕಲ್ಲು: ಸುಮಾ ಸತೀಶ್ ಸರಣಿ

ಅವ್ನೂ ಬಂದ. ಚೆಂದಾಗಿ ಕಲ್ಲು ತೊಳುಸ್ದ‌. ಅತ್ಲಾಗೆ ತಿರುಗ್ದ, ಇತ್ಲಾಗೆ ಬಗ್ಗಿದ, ತಲೆ ಕೆರ್ಕಂಡ. ಯೋನೂ ತಿಳೀವಲ್ದು. ಅಂಗಂತ ಯೋಳೀರೆ ಜನ ಏನ್ ಅನ್ಕಂಬಾಕಿಲ್ಲಾ. ನನ್ ಮರ್ವಾದಿ ಮಣ್ಣಾಗಾಕಿಲ್ವೇ ಅಂದಿದ್ದೇ, ಬ್ಯಾರೇನೇ ಯೋಳ್ದ. ಇದು ನರಮನುಸ್ಯರ ಕೈಲಿ ಓದಾಕಾಗಾಕಿಲ್ಲ. ದೇವನಾಗರೀ ಲಿಪಿ ಅಂಬ್ತಾರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ ನಿಮ್ಮ ಓದಿಗೆ

Read More

ರುಕ್ಮಣಮ್ಮಜ್ಜಿಯ ನೆನಪುಗಳು….: ಸುಮಾ ಸತೀಶ್ ಸರಣಿ

ಅಂಗಡೀಗೇ ಮಾರಾಕೆ ಮಾತ್ರ ನಮ್ಮಜ್ಜೀ ತಿಂಡೀಗ್ಳು ಮೀಸ್ಲಲ್ಲ. ಮಾರಾಕಿಂತ ರವಷ್ಟು ಜಾಸ್ತೀನೆ ದಾನ ಮಾಡ್ತಿತ್ತು. ಒಂದು ಬೇಸನ್ ತಿಂಡಿ ಮಾರಾಕಿಟ್ರೆ, ಎಲ್ಡು ಬೇಸನ್ ಅವ್ರಿವ್ರಿಗೆ ಕೊಡೋಕೇ ಸಾಲ್ತಿರ್ಲಿಲ್ಲ. ಆದ್ರೂ ಒಲೆ ಮುಂದೆ ಕುಂತ್ಕಣಾಕೆ ಎಂದ್ರೂ ಬ್ಯಾಸ್ರ ಪಟ್ಟಿದ್ದಿಲ್ಲ. ಪಕ್ಕದ್ ಮನ್ಯಾಗಿದ್ದ ವಾರ್ಗಿತ್ತೀಗೆ ಮನೆ ತುಂಬಾ ಮಕ್ಳು. ಅದ್ರಾಗೂ ಸಾಲಾಗಿ ಒಂಬತ್ತು ಹೆಣ್ಣುಮಕ್ಕಳು. ಅದ್ಕೇಯಾ ತಿಂಡೀ ತೀರ್ಥದಾಗೆ ಕೈ ಬಿಗಿ ಮಾಡ್ತಿದ್ರು. ನಮ್ಮಜ್ಜೀ ಜೀವ ನಿಲ್ತಿರ್ಲಿಲ್ಲ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಅಜ್ಜಿ ರುಕ್ಮಣ್ಣಮ್ಮನವರ ಕುರಿತು ಬರೆದಿದ್ದಾರೆ

Read More

ನಾಟಕಗಳ ನಾಟಕ: ಸುಮಾ ಸತೀಶ್ ಸರಣಿ

ನಮ್ಮಪ್ಪುಂಗೆ ನಾಟಕ ಅಂದ್ರೆ ಹುಚ್ಚು. ನಮ್ಮೂರ್ನಾಗೇನೂ ನಾಟಕದ ಕಂಪನಿ ಇರ್ಲಿಲ್ಲವಲ್ಲ. ವರ್ಸುಕ್ಕೆ ಒಂದೋ ಎಲ್ಡೋ ಆಟೇಯಾ. ಮಾಸ್ಟರ್ ಹಿರಣ್ಣಯ್ಯ ಅವುರ್ದು ಎಲ್ಲಾ ನಾಟಕದ ಕ್ಯಾಸೆಟ್ಟೂ ಇದ್ವು. ಟೇಪ್ ರೆಕಾರ್ಡರ್ ನಾಗೆ ಜಿನಾ ಅದ್ನೇ ಕೇಳೋದು. ಒಂದೊಂದು ನಾಟಕವೂ ನೂರಾರು ಸತಿ ಕೇಳಿದ್ವಿ. ಎಚ್ಚಮ ನಾಯಕ, ಕಪಿಮುಷ್ಟಿ, ಭ್ರಷ್ಟಾಚಾರ, ಲಂಚಾವತಾರ, ಫೋನಾವತಾರ, ದೇವದಾಸಿ, ನಡುಬೀದಿ ನಾರಾಯಣ…ಕೇಳೀ ಕೇಳೀ ನಮ್ಗೆ ಬಾಯಿ ಪಾಟ ಆಗೋಗ್ತಿತ್ತು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮ ಊರಿನಲ್ಲಿ ನಡೆಯುತ್ತಿದ್ದ ನಾಟಕಗಳ ಕುರಿತು ಬರೆದಿದ್ದಾರೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ