Advertisement

ಮಹಾದೇವ್ ಪೊನ್ನಾಚಿ

ಸ್ರೀರಾಮ್ನೋಮಿ: ಸುಮಾ ಸತೀಶ್ ಸರಣಿ

ರಾಮುನ್ನ ಒಲಿಸ್ಕಣಾದು ಕಷ್ಟ. ಹನುಮಂತನ್ನ ಒಲಿಸ್ಕಣಾದು ಸುಲ್ಬ. ರಾಮಾ ಅಂದ್ರೆ ಸಾಕು ಹನುಮ ಓಡೋಡ್ಕಂಡು ಬರ್ತಾನೆ. ಆಗ ಬ್ಯಾರೆ ಆಟ ಕಟ್ದೆ ರಾಮ್ನೂ ಹಿಂದಿಂದ್ಲೇ ಬತ್ತಾನೆ‌ ಅಂಬೋದು ಅಜ್ಜಿ ಯೋಳ್ತಿದ್ದ ಇಚಾರ. ಅಂಗಾಗಿ ರಾಮನ ಹತ್ರುಕ್ಕೆ ಹೋಗಾಕೆ ಸಲೀಸು ಹನುಮಂತನ ಭಜನೆ ಮಾಡೋದು. ಹನುಮ ಕಪಿ ಅಲ್ವೇ. ಕಿಚಪಿಚಾಂತ ನಾವೂ ಕಪಿಗಳಂಗೇ ಭಜನೆ ಹಾಡ್ತಿದ್ವಿ. ಮರದಾಗಿರೋವೂ ಜಾತಿಪ್ರೀತಿಗೆ ಓಡಿಬರೋ ಅಂಗೆ ಇರ್ತಿತ್ತು ನಮ್ಮ ಆಲಾಪ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಯುಗ ಯುಗಾದಿ ಕಳೆದರೂ ಮರೆಯಲಾಗದ ಸಂಭ್ರಮ: ಸುಮಾ ಸತೀಶ್ ಸರಣಿ

ಮನೆ ಹೆಂಗಸರಿಗೆ ಮಧ್ಯರಾತ್ರಿಯಿಂದಲೇ ಸುರುವಾಗ್ತಿತ್ತು. ಬೆಳಗಿನ ಜಾವ ಎರಡು ಗಂಟೆಯಿಂದಲೇ ಹೂರಣ ರುಬ್ಬುವ, ಒಬ್ಬಟ್ಟು ತಟ್ಟುವ, ಬೇಯಿಸುವ ಸದ್ದು. ಹೋಳಿಗೆ ವಾಸನೆಗೆ ಊರೆಲ್ಲಾ ಘಮಗುಡುತ್ತಿತ್ತು. ಒಬ್ಬಟ್ಟು ಸಾರು ಮರಳಿಸುತ್ತಿದ್ದರೆ ಮೂಗಿನ ಹೊಳ್ಳೆಗಳು ಅರಳಿ, ನಿಮಿರುತ್ತಿದ್ದವು. ದೊಡ್ಡ ದೊಡ್ಡ ಬೇಸನ್ನುಗಳಲ್ಲಿ ಒಬ್ಬಟ್ಟಿನ ರಾಶಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಹಳ್ಳಿ ಯುಗಾದಿಯ ಸಂಭ್ರಮಗಳ ಕುರಿತ ಬರಹ ನಿಮ್ಮ ಓದಿಗೆ

Read More

ಮದುವೆಮನೇನೋ ಸಂತೆಕಟ್ಟೇನೋ: ಸುಮಾ ಸತೀಶ್ ಸರಣಿ

ಇಂತಾ ಜೋರಿನ ಅತ್ತೇ ಒಂದು ಪುಂಡ ಹಸಾನ ಪಳಗಿಸಿದ್ಲು. ಆ ಹಸು ಎಷ್ಟು ಜೋರು ಅಂದ್ರೇ ಯಾರಿಗೂ ಹಾಲು ಕರೆಯೋಕೇ ಬಿಡ್ತಿರಲಿಲ್ಲ. ನಮ್ಮತ್ತೇನೂ ಜೋರಲ್ವಾ. ಅದೂ ಜೋರು. ಇಬ್ರಲ್ಲೂ ಬಲು ಸ್ನೇಹ. ನಮ್ಮತ್ತೆ ಹಾಲು ಕರೆದರೆ ಕಮಕ್‌ ಕಿಮಕ್ ಅಂತಿರಲಿಲ್ಲ ತುಡುಗು ಮುಂಡೇದು. ಕೊನೇಗೆ ಮದುವೇ ದಿನ ಹಸೆಮಣೇ ಮೇಲಿದ್ದಾರೆ. ಈ ಹಸಾ ಹಾಲು ಕೊಡಲಿಲ್ಲ ಅಂತಾ ಹೇಳಿದ್ದಾರೆ. ನಮ್ಮತ್ತೆ ಹಸೇಮಣೇ ಮೇಲಿಂದ ಎದ್ದು ಹೋಗಿ ಹಾಲು ಕರೆದುಕೊಟ್ಟು ಬಂದಿದ್ದಾರೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮದುವೆ ಮನೆಯ ಮತ್ತಷ್ಟು ವಿಷಯಗಳ ಕುರಿತ ಬರಹ ನಿಮ್ಮ ಓದಿಗೆ

Read More

ಮದುವೆ ಮನೆ: ಸುಮಾ ಸತೀಶ್ ಸರಣಿ

ನಮ್ಮ‌ ಮನೆಗ್ಳಲ್ಲಿ ಮದ್ವೇ ಗೊತ್ತಾಗಿದ್ ತಕ್ಷಣ ಮಾಡ್ತಿದ್ದ ಏರ್ಪಾಟು ಅಂದ್ರೆ ಹಂಚು ಇಟ್ಟುಕೊಳ್ಳುವುದು. ಒಂದು ತಿಂಗಳ ಮುಂಚೇನೆ ತಯ್ಯಾರಿ ಇರ್ತಿತ್ತು. ದೊಡ್ಡತ್ತೆ, ಸಾವಿತ್ರಮ್ಮತ್ತೆ ಬಂದು ಸೇರುತ್ತಿದ್ದರು. ಅಕ್ಕ ತಂಗೀರ ಮಕ್ಳು ಸಹಾಯುಕ್ಕೆ ಬರ್ತಿದ್ರು. ಸೇರುಗಟ್ಟಲೆ ಅಕ್ಕಿ‌ ತೊಳೆದು ಹಾಕಿ, ರಾಶಿ ರಾಶಿ ಚಕ್ಲಿ ಮಾಡುತ್ತಿದ್ದರು. ಅಕ್ಕಪಕ್ಕದ ‌ಮನೆ‌ ಹೆಣ್ಣುಮಕ್ಕಳೂ ಬಂದು ಸಹಾಯ ಮಾಡುತ್ತಿದ್ದರು. ನಿಪ್ಪಟ್ಟು, ಕೋಡುಬಳೆ, ಗುಂಡು ಅದೂ ಇದೂ ಮಾಡಿಡುತ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಮದುವೆ ಮನೆಯ ಸಡಗರಗಳ ಕುರಿತ ಬರಹ ನಿಮ್ಮ ಓದಿಗೆ

Read More

ಕತೆ ಕಟ್ಟುವ ಕಲೆಗಾರರು: ಸುಮಾ ಸತೀಶ್ ಸರಣಿ

ಆಗೆಲ್ಲಾ ಯರಗುಂಟೇಗೆ ಊರಿನ ತಂಕ ಬಸ್ಸಿರಲಿಲ್ಲ. ಒಂದೋ ಎರಡೊ ಕಿಲೋಮೀಟರ್ ನಡೆದು ಹೋಗಬೇಕಿತ್ತು. ಇನ್ನೂ ಕತೆ‌ ಮುಗಿದಿಲ್ಲ, ಯಾಸೆಟ್ಗೆ ಅತ್ಲಾಗೆ ನಡಿಯಮ್ಮಿ, ಮನೆತಂಕ ಬರ್ತೀನಿ ಅಂತ ಅದೇ ಅವತಾರದಲ್ಲಿ ಮಗಳ‌ಮನೆ ತಂಕಾನೂ ಹೋಗಿದೆ. ಬೀಗರು ಇವ್ರ ಅವತಾರ ನೋಡಿ, ನಕ್ಕಂಡು ಇವತ್ತಿದ್ದು ನಾಳೆ ಹೋಗಿ ಅಂದ್ರಂತೆ. ಈ ಅಜ್ಜಿ, ಹೂ ನನ್ ಕತೆ ಇನ್ನೂ ಮುಗಿದಿಲ್ಲ ಅಂತ ಕತೆ ಪೂರ್ತಿ ಹೇಳಿದ್ದಾದ ಮೇಲೆ ಬೇರೆ ಸೀರೆ ಉಟ್ಕಂಡು ವಾಪಸ್ ಬಂತಂತೆ. ಇದ್ನ ಹೇಳ್ಕಂಡು‌ ನಮ್ಮತ್ತೆದೀರೆಲ್ಲಾ ನಗಾಡ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ