Advertisement

ಕ್ಷಮಾ ವಿ. ಭಾನುಪ್ರಕಾಶ್

“ಆಕಿ” ಅಂದ್ರ ಅಕ್ಷರ ಕಲಿಸಿದಾಕಿ: ಸುವರ್ಣ ಚೆಳ್ಳೂರು ಸರಣಿ

ಫುಲೆ ಶಾಲೆಯಲ್ಲಿ ಕಲಿತಂತಹ ಹೆಣ್ಣು ಮಕ್ಕಳು ವೈಚಾರಿಕವಾಗಿ ಚಿಂತನೆ ಮಾಡುವಷ್ಟು ಬೆಳೆದು ಬರಹಗಾರರಾದ್ರು, ಅದ್ರಲ್ಲಿ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಅವರು ಸಾವಿತ್ರಿಬಾಯಿ ಫುಲೆ ಅವರ ಶಿಷ್ಯೆ ಆಗಿದ್ರು, ಈ ರೀತಿಯಾಗಿ ಅದೆಷ್ಟೋ ವಿರೋಧಗಳ ನಡುವೆ ತಮ್ಮ ಸಮಾಜ ಸುಧಾರಣೆಯನ್ನ ಮುಂದುವರಿಸಿದರು. ಈ ಪಾಠದಿಂದ ಗೊತ್ತಾಗೋದೇನಂದ್ರೆ ಶಿಕ್ಷಣಕ್ಕೆ ಯಾವ ಜಾತಿಯ ಹಂಗೂ ಇಲ್ಲ, ಕಲಿಯುವ ಮನಸ್ಸಿದ್ರೆ ಎಂಥವರೂ ಕಲಿತು ಸಾಧನೆ ಮಾಡಬಹುದು’ ಅಂತ ಹೇಳುವಷ್ಟರಲ್ಲಿ ಬೆಲ್ ಆಗಿ ಊಟಕ್ ಬಿಟ್ಟಿತ್ತು, ಮೇಡಂ ಕೂಡ ಆಫಿಸ್ ರೂಮ್ ಕಡೆ ಹೆಜ್ಜೆ ಹಾಕಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯಲ್ಲಿ ಮೂರನೆಯ ಬರಹ

Read More

ಸಾಲಿಯಂದ್ರ ಕಣ್ಣಾಗ ಕಾಮನಬಿಲ್ಲು…: ಸುವರ್ಣ ಚೆಳ್ಳೂರು ಸರಣಿ

ಮುಂಜೆನೆದ್ದಿದ್ದ ಹಿಂಗ ಅವ್ವ ಬುತ್ತಿ ಕಟ್ಟಿಗ್ಯಂಡು ಹೊಂಟ್ಲಂದ್ರ, ಮನಿಯೆಲ್ಲಾ ನನ್ನ ಮ್ಯಾಗ ಬಿದ್ದೈತೆನೊ ಅನ್ನಿಸ್ತಿತ್ತು. ಬಟ್ಟಿ, ಮುಸುರಿ, ಕಸ, ಅಡಿಗಿ ಎಲ್ಲಾನೂ ನನ್ನ ನೋಡಿ ನಕ್ಕಂಗಾಗ್ತಿತ್ತು. ಅದರ್ ನಡುವು ಮನಿಗೆ ಬಂದಾರೆಲ್ಲ ಅಪ್ಪನ್ನ ನೋಡಿ ‘ಮಗಳ್ ಮನಿ ಕೆಲ್ಸ ಎಲ್ಲಾ ಕಲ್ತಾಳ ಬುಡಪ, ದೊಡ್ಡಾಕ್ಯಾಗ್ಯಾಳನು?’ ಅಂತ ಕೇಳಿದಾಗೆಲ್ಲ, ಒಲ್ಯಾಗಿನ ಬೂದಿ ಅವರ ಮಾರಿಗೆ ಒಗಿಬೊಕು ಅನ್ನಿಸಿದ್ರು, ಒಳಾಗ ಅಡಗಿ ಮನಿಯೊಳಾಗ ಕಂಬಕ್ಕ ಕುಂತಗಂಡು ಚಚ್ಚೌಕ ಇದ್ದ ಕಿಡಕಿ ಮತ್ತ ಅದರ ನಡುವ ನಿಧಾನವಾಗಿ ತೂಗ್ಯಾಡಿದಂಗ ಕಾಣತಿದ್ದ ನೆಲುವು ನೋಡಿಕ್ಯಂತ ಕುಂದ್ರತಿದ್ದೆ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಹೆಣ್ಣಂದ್ರ ರಕ್ತ ಬಸೀಬೇಕು….: ಸುವರ್ಣ ಚೆಳ್ಳೂರು ಸರಣಿ

ಹಿಂಗ ಒಮ್ಮಿ ನಾನು ನಿಮ್ಮವ್ವ ಆ ದೊಡ್ಡ ಹೊಲಕ್ಕ ರಾಶಿ ಮಾಡಕಂತ ಹೋಗಿದ್ವಿ, ಹೊಲದ್ ದಗದಾ ಅಂದ್ರ ತುಸಾss ಇರತೈತ್ಯನು ಮೈ ಬಗ್ಗಿಸಿ ದುಡದ್ರಷ್ಟss ನೀಗತೈತಿ. ಅವತ್ತು ಮಟ ಮಟ ಮಧ್ಯಾಹ್ನದಾಗ ನಾನು ನಿಮ್ಮವ್ವ ಈ ಮ್ಯಾಗಳಮನಿ ಗಂಗಪ್ಪನ ಹೊಲಕ್ಕ ಆರತಾಸಿನ‌ ದಗದಕ್ಕ ಹೋಗಿದ್ವಿ, ಆಕಿ ಕೂಡ ಅದಾ‌ ನೆಲ್ಲು ಕೊಯ್ಯಾ ಕೆಲಸಕ್ಕಂತ ನಮ್ಮ್ ಜೋಡಿ ಬಂದಿದ್ಲು, ಗಂಗಪ್ಪನ ಹೊಲ ಆ‌ ಮ್ಯಾಗಡಿ ಕಡಿ ಐತ್ಯಲಾ ಆ ದುರ್ಗಮ್ಮನ ಗುಡಿತಾಕ ಅಲ್ಲೆ ಒಂದು ಸಣ್ಣ್ ಹಳ್ಳ ಹರಿತೈತಿ ಅಲಾ ಆ ಹೊಲಕ್ಕೊಗಿದ್ವಿ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ” ಇಂದಿನಿಂದ

ಆ ಕತಿ ಮತ್ತೆ ಆ ಬಾಯೊಳಗೆ ಮುರಿದ ಕಾಲಿಟ್ಟ ಚಿತ್ರ ನನ್ನೊಳಾಗ ಒಂದಷ್ಟು ಪ್ರಶ್ನೆಗಳನ್ನ ಹುಟ್ಟಿಸಿತು. ಅದನ್ನೆ ಯೋಚಿಸ್ತಿರುವಾಗ ಊರೊಳಾಗ ದೇವಿ ಮೆರವಣಿಗೆ ಬಂದಿತ್ತು, ನೋಡೊಕಂತ ಹೋದಾಗ ಹಳೆ ಗೆಳತ್ಯಾರೆಲ್ಲ ಸಿಕ್ಕಿದ್ದು, ಮನಿಯೊಳಾಗ ಕೆಲಸ ಮಾಡಿ ಅಲ್ಲೆ ಇರ್ತಿದ್ದ ಹೆಣ್ಮಕ್ಕಳು ಜಾತ್ರಿ ನೆಪದಾಗ ಹೊರಾಗ ಬಂದು ಒಬ್ರನ್ನೊಬ್ರು ಖುಷಿಯಿಂದ ಮಾತಾಡಿಸ್ತಾ ನಿಂತಿದ್ದು, ಊರಿನ ಹಾದಿಯೊಳಾಗ ಜಾತಿ ಜನಾಂಗ ಎಲ್ಲಾ ಮರತು ಎಲ್ಲಾರೂ ಒಟ್ಟಾಗಿ ಸೇರಿ ಒಂದೆ ಮನ್ಯಾರೇನೊ ಅನ್ನುವಂಗ ಜಾತ್ರಿ ಕೆಲಸಾನ ಎಲ್ಲಾರೂ ಸೇರಿ ಹಂಚಿಗ್ಯಂಡು ಮಾಡಿದ್ದು ನೋಡಿ, ಎಲ್ಲಾರೂ ಒಟ್ಟಿಗೆ ಸೇರಾಕ ನಾವೆಲ್ಲಾರೂ ಒಂದSS ಅನ್ನೊದು ಮನದಟ್ಟು ಮಾಡಿಕ್ಯಳಾಕ ಜಾತ್ರಿ ಒಂದು ನೆಪ… ಅದ್ರಲ್ಲಿರೊ ಆಕಿ ಕೂಡ!
ಸುವರ್ಣ ಚೆಳ್ಳೂರು ಹೊಸ ಸರಣಿ “ಆಕಿ”

Read More

ಸುವರ್ಣ ಚೆಳ್ಳೂರು ಅನುವಾದಿಸಿದ ಕಮಲಾ ಭಾಸಿನ್‌ ಕವಿತೆ

“ಬಡತನ ಕಳಚಾಕ, ನಾ ಓದ್ಬೇಕು.
ಸ್ವಾತಂತ್ರ್ಯ ಗೆಲ್ಲಾಕ, ನಾ ಓದ್ಬೇಕು.
ಒತ್ತಡ ಮೆಟ್ಟಿ ನಿಲ್ಲಾಕ, ನಾ ಓದ್ಬೇಕು.
ಪ್ರೇರಣೆಗಳನ್ನ ಹುಡುಕಾಕ, ನಾ ಓದ್ಬೇಕು”- ಸುವರ್ಣ ಚೆಳ್ಳೂರು ಅನುವಾದಿಸಿದ ಕಮಲಾ ಭಾಸಿನ್‌ ಕವಿತೆ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ