Advertisement

ಕೀರ್ತಿ ಬೈಂದೂರ್

ಮಹಿಳಾ ದಿನಾಚರಣೆ ಅಂದರೆ…: ಸುವರ್ಣ ಚೆಳ್ಳೂರು ಸರಣಿ

ಆ ಗ್ವಾಡಿಗಳನ್ನ ಮೇಲಿಂದ ಕೆಳಗ ನೋಡುವಾಗ್ಲೆ ಗೊತ್ತಾದದ್ದು, ಆ ಗ್ವಾಡಿ ನಡಕ ಅವ್ವ, ಅತ್ತಿನೂ ಒದ್ದಾಡತಿದ್ರು. ಆ ಗ್ವಾಡಿಯನ್ನ ನೋಡ್ತಾ ನೋಡ್ತೂ ಅದೆಷ್ಟೊ ಹೆಣ್ಮಕ್ಕಳು ಇದ್ರಲ್ಲೆ ಇರೋದು ನೋಡಿ, ಅವರ ಬಾಯಿಗೆ ಕಟ್ಟಿದ ಹೂವಿನಿಂದ ಸಿಂಗರಿಸಿದ್ದ ಹಗ್ಗ, ದಿನದಿಂದ ದಿನಕ್ಕೂ ಬೆಳಿಯೋದನ್ನ ನೋಡಿ, ಹಗ್ಗದ ಗಂಟು ದಿನ ದಿನಕ್ಕೂ ಬಿಗಿಯಾಗೋದನ್ನ ನೋಡಿ, ಇದ್ಯಾಕೆ ಇದನ್ನ ಯಾರೂ ಬಿಳಸೊಕೆ ಆಗ್ತಿಲ್ಲ? ಯಾರಿದನ್ನ ಹೊರಗಿಂದ ಕಟ್ತಿರೊದು? ಅನ್ನೊ ಪ್ರಶ್ನೆಗಳೆಲ್ಲಾ ತಲೆ ತುಂಬಿದ್ವು. ಆದ್ರ ಇವಾಗ ಸಾಲಿಗೆ ಹೋಗಬಹುದು ಅನ್ನೊದು ನೆನಸ್ಕೊಂಡು ಒಂಥರಾ ಖುಷಿ ಆಯ್ತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಆರನೆಯ ಬರಹ

Read More

ಗೋಡೆಯ ಮೊದಲ ಇಟ್ಟಿಗೆ!: ಸುವರ್ಣ ಚೆಳ್ಳೂರು ಸರಣಿ

ಅವ್ವ ಅತ್ತಿ ಹೇಳಿದ ಮಾತು, ಮೈನೆರೆದ ಮ್ಯಾಗ ಎಲ್ಲಾರೂ ನನ್ನ ಮಾತಾಡಿಸಿದ ರೀತಿ, ನನಗೆ ನನ್ನಲ್ಲಾದ ಬದಲಾವಣೆ, ಇಲ್ಲಿವರೆಗೂ ಇದ್ದ ಶಿವಮ್ಮ ಇಗಿರೊ ಶಿವಮ್ಮ ಬೇರೆನಾ? ಅಂತನ್ನಿಸಿ, ಒಮ್ಮೆಲೆ ನಾಕು ದಿಕ್ಕಿಂದಾನೂ ಒಂದೊಂದಾಗಿ ಇಟ್ಟಿಗೆ ಇಟ್ಟು ಅದ್ಯಾವುದೊ ಗೋಡೆ ನಿಧಾನವಾಗಿ ಕಟ್ಟಾಕತಾರ ಅಂಬಂಗಾತು, ಕಾಣದೆ ಇರೊ ಹಗ್ಗಾನ ನಿಧಾನವಾಗಿ ಹೂವಿಂದ ಸುತ್ತಿ, ಬಾಯಿಗೆ ಬೆನ್ನಿಗೆ ಕೈ ಕಾಲಿಗೆ ಗಟ್ಟಿಯಾಗಿ ಬಿಗದು, ಅದರ ಮ್ಯಾಲೆಲ್ಲ ‘ನೀ ಹೆಣ್ಣು, ನೀ ದೊಡ್ಡಾಕಿ, ನೀ ಹೆಣ್ಣು, ನೀ ಹಿಂಗಿರಬೇಕು, ನೀ ದೊಡ್ಡಾಕಿ’ ಅಂತ ಸೂಕ್ಷ್ಮ ಕುಸುರಿ ಕಲೆ ಮಾಡಿ, ಆ ನಾಲ್ಕು ಗ್ವಾಡಿಯೊಳಗ ಬಂಧಿಸಿದಂಗಾತು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಐದನೆಯ ಬರಹ

Read More

“ಆಕಿ” ಅಂದ್ರ ಅಕ್ಷರ ಕಲಿಸಿದಾಕಿ: ಸುವರ್ಣ ಚೆಳ್ಳೂರು ಸರಣಿ

ಫುಲೆ ಶಾಲೆಯಲ್ಲಿ ಕಲಿತಂತಹ ಹೆಣ್ಣು ಮಕ್ಕಳು ವೈಚಾರಿಕವಾಗಿ ಚಿಂತನೆ ಮಾಡುವಷ್ಟು ಬೆಳೆದು ಬರಹಗಾರರಾದ್ರು, ಅದ್ರಲ್ಲಿ ಭಾರತದ ಮೊಟ್ಟ ಮೊದಲ ಸ್ತ್ರೀವಾದಿ ಲೇಖಕಿ ತಾರಾಬಾಯಿ ಶಿಂಧೆ ಅವರು ಸಾವಿತ್ರಿಬಾಯಿ ಫುಲೆ ಅವರ ಶಿಷ್ಯೆ ಆಗಿದ್ರು, ಈ ರೀತಿಯಾಗಿ ಅದೆಷ್ಟೋ ವಿರೋಧಗಳ ನಡುವೆ ತಮ್ಮ ಸಮಾಜ ಸುಧಾರಣೆಯನ್ನ ಮುಂದುವರಿಸಿದರು. ಈ ಪಾಠದಿಂದ ಗೊತ್ತಾಗೋದೇನಂದ್ರೆ ಶಿಕ್ಷಣಕ್ಕೆ ಯಾವ ಜಾತಿಯ ಹಂಗೂ ಇಲ್ಲ, ಕಲಿಯುವ ಮನಸ್ಸಿದ್ರೆ ಎಂಥವರೂ ಕಲಿತು ಸಾಧನೆ ಮಾಡಬಹುದು’ ಅಂತ ಹೇಳುವಷ್ಟರಲ್ಲಿ ಬೆಲ್ ಆಗಿ ಊಟಕ್ ಬಿಟ್ಟಿತ್ತು, ಮೇಡಂ ಕೂಡ ಆಫಿಸ್ ರೂಮ್ ಕಡೆ ಹೆಜ್ಜೆ ಹಾಕಿದ್ರು.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯಲ್ಲಿ ನಾಲ್ಕನೆಯ ಬರಹ

Read More

ಸಾಲಿಯಂದ್ರ ಕಣ್ಣಾಗ ಕಾಮನಬಿಲ್ಲು…: ಸುವರ್ಣ ಚೆಳ್ಳೂರು ಸರಣಿ

ಮುಂಜೆನೆದ್ದಿದ್ದ ಹಿಂಗ ಅವ್ವ ಬುತ್ತಿ ಕಟ್ಟಿಗ್ಯಂಡು ಹೊಂಟ್ಲಂದ್ರ, ಮನಿಯೆಲ್ಲಾ ನನ್ನ ಮ್ಯಾಗ ಬಿದ್ದೈತೆನೊ ಅನ್ನಿಸ್ತಿತ್ತು. ಬಟ್ಟಿ, ಮುಸುರಿ, ಕಸ, ಅಡಿಗಿ ಎಲ್ಲಾನೂ ನನ್ನ ನೋಡಿ ನಕ್ಕಂಗಾಗ್ತಿತ್ತು. ಅದರ್ ನಡುವು ಮನಿಗೆ ಬಂದಾರೆಲ್ಲ ಅಪ್ಪನ್ನ ನೋಡಿ ‘ಮಗಳ್ ಮನಿ ಕೆಲ್ಸ ಎಲ್ಲಾ ಕಲ್ತಾಳ ಬುಡಪ, ದೊಡ್ಡಾಕ್ಯಾಗ್ಯಾಳನು?’ ಅಂತ ಕೇಳಿದಾಗೆಲ್ಲ, ಒಲ್ಯಾಗಿನ ಬೂದಿ ಅವರ ಮಾರಿಗೆ ಒಗಿಬೊಕು ಅನ್ನಿಸಿದ್ರು, ಒಳಾಗ ಅಡಗಿ ಮನಿಯೊಳಾಗ ಕಂಬಕ್ಕ ಕುಂತಗಂಡು ಚಚ್ಚೌಕ ಇದ್ದ ಕಿಡಕಿ ಮತ್ತ ಅದರ ನಡುವ ನಿಧಾನವಾಗಿ ತೂಗ್ಯಾಡಿದಂಗ ಕಾಣತಿದ್ದ ನೆಲುವು ನೋಡಿಕ್ಯಂತ ಕುಂದ್ರತಿದ್ದೆ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಹೆಣ್ಣಂದ್ರ ರಕ್ತ ಬಸೀಬೇಕು….: ಸುವರ್ಣ ಚೆಳ್ಳೂರು ಸರಣಿ

ಹಿಂಗ ಒಮ್ಮಿ ನಾನು ನಿಮ್ಮವ್ವ ಆ ದೊಡ್ಡ ಹೊಲಕ್ಕ ರಾಶಿ ಮಾಡಕಂತ ಹೋಗಿದ್ವಿ, ಹೊಲದ್ ದಗದಾ ಅಂದ್ರ ತುಸಾss ಇರತೈತ್ಯನು ಮೈ ಬಗ್ಗಿಸಿ ದುಡದ್ರಷ್ಟss ನೀಗತೈತಿ. ಅವತ್ತು ಮಟ ಮಟ ಮಧ್ಯಾಹ್ನದಾಗ ನಾನು ನಿಮ್ಮವ್ವ ಈ ಮ್ಯಾಗಳಮನಿ ಗಂಗಪ್ಪನ ಹೊಲಕ್ಕ ಆರತಾಸಿನ‌ ದಗದಕ್ಕ ಹೋಗಿದ್ವಿ, ಆಕಿ ಕೂಡ ಅದಾ‌ ನೆಲ್ಲು ಕೊಯ್ಯಾ ಕೆಲಸಕ್ಕಂತ ನಮ್ಮ್ ಜೋಡಿ ಬಂದಿದ್ಲು, ಗಂಗಪ್ಪನ ಹೊಲ ಆ‌ ಮ್ಯಾಗಡಿ ಕಡಿ ಐತ್ಯಲಾ ಆ ದುರ್ಗಮ್ಮನ ಗುಡಿತಾಕ ಅಲ್ಲೆ ಒಂದು ಸಣ್ಣ್ ಹಳ್ಳ ಹರಿತೈತಿ ಅಲಾ ಆ ಹೊಲಕ್ಕೊಗಿದ್ವಿ.
ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ