Advertisement

Category: ದಿನದ ಪುಸ್ತಕ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು ಉತ್ತಮ ಮಾಧ್ಯಮ ಎಂದು ನಂಬಿರುವ ಲೇಖಕಿ ಸವಿತಾ ರವಿಶಂಕರ `ಚಿಲಿಪಿಲಿ ಕನ್ನಡ ಕಲಿ’ ಸಂಕಲನದಲ್ಲಿ ಅಂತಹ ಮಕ್ಕಳ ಮನ ತಟ್ಟುವ ರೀತಿಯ ಕನ್ನಡ ಪದ್ಯಗಳನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.
ಸವಿತಾ ರವಿಶಂಕರ `ಚಿಲಿಪಿಲಿ ಕನ್ನಡ ಕಲಿ’ ಮಕ್ಕಳ ಪದ್ಯಗಳ ಸಂಕಲನದ ಕುರಿತು ಮಂಡಲಗಿರಿ ಪ್ರಸನ್ನ ಬರಹ

Read More

“ಚದುರಂಗ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ ಹೇಗೆ ತಮ್ಮ ಸ್ವಾರ್ಥಕ್ಕಾಗಿ ಹೋರಾಟದ ಹೆಸರಲ್ಲಿ ಗದ್ದುಗೆಯನ್ನು ಹೇಗೆ ಹಿಡಿದರು ಎಂಬೆಲ್ಲ ಆಲೋಚನೆ ಮೂಡಿಸುತ್ತ ಸಾಗುತ್ತದೆ. ಈ ರಾಜಕೀಯ ಎನ್ನುವ ಉಸುಕಿನ ಕ್ಷೇತ್ರವು ಒಮ್ಮೆ ಒಳಹೊಕ್ಕವರನ್ನು ತನ್ನ ಕಬಂಧ ಬಾಹುವಿನ ಮೂಲಕ, ಲಾಲಸೆಗಳ ಜಾಲದಿಂದ ಹೇಗೆ ಪಥದಿಂದ ವಿಮುಖವಾಗಿಸುತ್ತದೆ ಎನ್ನುವುದು ತಿಳಿಯದ್ದೇನಲ್ಲ.
ಲತಾ ಗುತ್ತಿ ಕಾದಂಬರಿ “ಚದುರಂಗ” ಕುರಿತು ತೇಜಸ್ವಿನಿ ಹೆಗಡೆ ಬರಹ

Read More

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ ಅವರವರ ಗುಣಾವಗುಣಗಳಿಂದ, ವ್ಯಕ್ತಿತ್ವದಿಂದ ನಿರ್ಧಾರವಾಗುವಂತದ್ದು ಎಂಬುದನ್ನು ಮನಗಾಣುತ್ತಾನೆ. “ಇದುವರೆಗೆ ನಿಮ್ಮ ಮೇಲಾದ ವಿವಿಧ ರೀತಿಯ ದೌರ್ಜನ್ಯಗಳಿಗೆ ನಾವು ಹೊಣೆಯಾಗಿದ್ದು, ಇದರಿಂದ ನನಗೆ ನಾಚಿಕೆ ಬರುತ್ತಿದೆ, ನಿಮಗೆ ಮುಂದೆ ನಮ್ಮಿಂದ ಯಾವ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ” ಎಂದು ಹೇಳುತ್ತಾನೆ.
ಈರಣ್ಣ ಬೆಂಗಾಲಿ ಕಾದಂಬರಿ “ಭೂಮಿ”ಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌ ಅವರು ಅನೇಕ ಸಾರಿ ನನ್ನ ಜತೆಗೆ ಹಂಚಿಕೊಂಡರು. ʻನೋಡಿ, ನೀವು ನಿಮ್ಮ ಚಿತ್ರ ಹಾಕಿಕೊಂಡು ಬರೆಯುತ್ತೀರಿ. ನಮಗೆ ಹೀಗೆ ಬರೆಯಲು ನಮ್ಮ ಕಾಲದಲ್ಲಿ ಅವಕಾಶವೇ ಇರಲಿಲ್ಲʼ ಎಂದು ಅವರು ಹೇಳುತ್ತಿದ್ದರು.
ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿಯವರ ವೃತ್ತಿ ಜೀವನದ ನೆನಪುಗಳ ಕೃತಿ “…ಉಳಿದಾವ ನೆನಪು” ಮೇ ೫ ರಂದು ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದ್ದು, ಅದರ ಅಧ್ಯಾಯದ ಒಂದು ಭಾಗ ನಿಮ್ಮ ಓದಿಗೆ

Read More

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ ಕೂತಿರುವಾಗ “ಮುಚ್ಚಿದ ಕಿಟಕಿಯಿಂದ…. ಸೋರಿ ಅವಳ ಕೂದಲ ಗುಂಗುರುಗಳ ಮೇಲೆ” ಹೊಳಪು ಸುರಿಯುವ ಬಿಸಿಲು ಕೋಲುಗಳು ನೀಡುವ ಹಿತವನ್ನು ಗಮನಿಸದೇ ಇರುವುದಿಲ್ಲ.
ಕಾವ್ಯಾ ಕಡಮೆ ಕಾದಂಬರಿ “ಪುನರಪಿ”ಯ ಕುರಿತು ರಾಮಪ್ರಸಾದ್ ಬಿ.ವಿ. ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ