Advertisement

Category: ದಿನದ ಪುಸ್ತಕ

ಶೋಭಾ ನಾಯಕ ಅನುವಾದಿಸಿದ ಕವನ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

“ವರ್ತಮಾನ ಕಾಲದ ಭಾರತವು ಬಗೆ ಬಗೆಯ ಬಿಕ್ಕಟ್ಟುಗಳಿಂದ ನರಳುತ್ತಿದೆ. ದ್ವೇಷ, ನಿರಾಶೆ, ಸಿನಿಕತನ, ಕೋಮುವಾದ, ಜಾತೀಯತೆ, ಮತಾಂಧತೆ, ಹೋರಾಟ ಮತ್ತಿತರ ಸಮಸ್ಯೆಗಳ ನಡುವೆ ಭಾರತೀಯರು ನಲುಗಿ ಹೋಗುತ್ತಿದ್ದಾರೆ. ಇಂಥ ಸಂಕೀರ್ಣ ಪರಿಸ್ಥಿತಿಯಲ್ಲಿ ಗೋಬಿಂದ ಪ್ರಸಾದರ ಕವಿತೆಗಳು ಆಶಾವಾದ, ನಂಬುಗೆ, ಆಪ್ತತೆ ಮತ್ತು ಪ್ರೀತಿಯನ್ನು ಸೃಷ್ಟಿಸಲು ನೆರವಾಗುತ್ತವೆ. ನಮ್ಮನ್ನು ಆವರಿಸಿಕೊಂಡಿರುವ ಮಡಿ ಮತ್ತು ಮೈಲಿಗೆಗಳೆರಡನ್ನೂ ಕಳೆದು ಹಾಕಲು ಅವರ ಕವಿತೆಗಳು ತವಕಿಸುತ್ತವೆ.”
ಶೋಭಾ ನಾಯಕ ಅನುವಾದಿಸಿದ ಹಿಂದಿ ಕವಿ ಗೋಬಿಂದ ಪ್ರಸಾದರ ಆಯ್ದ ಪದ್ಯಗಳ ‘ವರ್ತಮಾನದ ಧೂಳುʼ ಸಂಕಲನಕ್ಕೆ ಡಾ.ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು

Read More

ಕೇಶವ ಮಳಗಿ ಬರೆದ ‘ಗುಂಡಿಗೆಯ ಬಿಸಿರಕ್ತʼ ಪುಸ್ತಕದ ಪ್ರವೇಶಿಕೆ…

“ದೇಶಭ್ರಷ್ಟತೆಯನ್ನು ಆಯ್ದುಕೊಂಡ ಲೇಖಕರು ದಕ್ಷಿಣ ಆಫ್ರಿಕದ ಕುರಿತು ವಿಫುಲವಾಗಿ ಬರೆಯತೊಡಗಿದರು. ಅದಕ್ಕಾಗಿ ವಿವಿಧ ಪ್ರಕಾರಗಳನ್ನುಆಯ್ದುಕೊಂಡರು. ಅವುಗಳಲ್ಲಿ ಆತ್ಮಚರಿತ್ರೆ ಅತ್ಯಂತ ಪ್ರಿಯವಾದ ಪ್ರಕಾರವಾಯಿತು. ಅನುಭವ ಕಥನವು ಆತ್ಮಚರಿತ್ರೆಯ ರೂಪದಲ್ಲಿ, ಹೊಸ ಪದವಿನ್ಯಾಸದಲ್ಲಿ ಗೋಚರಿಸತೊಡಗಿತು. ಪರದೇಸಿಗರಾದ ದಕ್ಷಿಣ ಆಫ್ರಿಕನ್ ಬುದ್ಧಿಜೀವಿಗಳಿಗೆ ಆತ್ಮಕಥೆ ಹೊಸ ಅಸ್ತಿತ್ವವನ್ನು ನೀಡಿದ ಪ್ರಕಾರವಾಯಿತು. ಇತ್ತ, ತಾಯ್ನೆಲದಲ್ಲಿ ಭಾವಗೀತೆ ಅರಳತೊಡಗಿತ್ತು. ಕಾವ್ಯಾಭಿವ್ಯಕ್ತಿಗೆ ಹೊಸಬರು ಸೇರಿಕೊಂಡಂತೆಲ್ಲ ಅಭಿವ್ಯಕ್ತಿ ರೂಕ್ಷವಾಗತೊಡಗಿತು.”
ಕೇಶವ ಮಳಗಿ ಬರೆದ ‘ಗುಂಡಿಗೆಯ ಬಿಸಿರಕ್ತ: ಆಫ್ರಿಕನ್‌ ಸಂಕಥನ’ ಪುಸ್ತಕದ ಪ್ರವೇಶಿಕೆ ನಿಮ್ಮ ಓದಿಗೆ

Read More

ಡಾ. ಗಜಾನನ ಶರ್ಮ ಬರೆದ ‘ಚೆನ್ನಭೈರಾದೇವಿʼ ಕಾದಂಬರಿಗೆ ಜೋಗಿ ಬರೆದ ಮಾತುಗಳು

“ಇದು ಕೇವಲ ಚೆನ್ನಭೈರಾದೇವಿಯ ಕಥೆಯಷ್ಟೇ ಅಲ್ಲ, ನೂರು ವರುಷಗಳ ಶರಾವತಿ ದಂಡೆಯ ಚರಿತ್ರೆ. ಕರಾವಳಿ-ಪಶ್ಚಿಮ ಮಲೆನಾಡಿನ ವೈವಿಧ್ಯಮಯ ಜೀವನ ಶೈಲಿಯ ಕಷ್ಟಕತೆ, ಜೈನಧರ್ಮೀಯರ ಸಾಹಸ ತ್ಯಾಗದ ಚಿತ್ರ, ಬಿಜಾಪುರದ ಸುಲ್ತಾನರು ಹಾಗೂ ವಿಜಯನಗರದ ಅರಸರೊಂದಿಗಿನ ಸಂಬಂಧ ಕಡಿದುಕೊಳ್ಳದೇ ಒತ್ತೊತ್ತಿ ಬಂದ ಪೋರ್ಚುಗೀಸರಿಂದ ಒಂದಿಡೀ ತಲೆಮಾರನ್ನು ಕಾಪಾಡಿದ ರಾಣಿಯ ಸಾಹಸ, ಪ್ರೇಮ, ತ್ಯಾಗ ಮತ್ತು ಧೀಮಂತ ವ್ಯಕ್ತಿತ್ವದ ಸಮಗ್ರ ಚಿತ್ರ.”
ಡಾ. ಗಜಾನನ ಶರ್ಮ ಬರೆದ ‘ಚೆನ್ನಭೈರಾದೇವಿʼ ಕಾದಂಬರಿಗೆ ಜೋಗಿ ಬರೆದ ಮಾತುಗಳು

Read More

ಅಕ್ಷಯ ಪಂಡಿತ್ ಕಥಾಸಂಕಲನಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು

“ಈ ಹುಡುಗನಿಗೆ ಈ ತೊಟ್ಟಿಲಿನದೇ ಆಕರ್ಷಣೆ. ಜಾತ್ರೆಯನ್ನು ನೋಡಲು ಅಲ್ಲಿ ವ್ಯಾಪಾರ ಮಾಡಲು ಬಂದ ಮಗ ಜಾತ್ರೆಯಲ್ಲಿಯ ಎಲ್ಲವನ್ನ ನೋಡಿ ಸಂತಸ ಪಡುತ್ತಾನೆ. ತಂದೆಯನ್ನ ಕೂಡ ತೊಟ್ಟಿಲಲ್ಲಿ ಕೂರಿಸಿ ಒಂದು ರೈಡ್ ಮಾಡಿಸುತ್ತಾನೆ. ಒಂದು ಹಂತದಲ್ಲಿ ತನ್ನ ಜೇಬಿನಲ್ಲಿ ಇರಿಸಿ ಕೊಂಡ ರೆಕ್ಕೆಯನ್ನ ಹಾರಿಸಿ ಬಿಡುತ್ತಾನೆ. ಆ ರೆಕ್ಕೆ ತಾನು ಕುಳಿತ ತೊಟ್ಟಿಲಿನಷ್ಟು ಎತ್ತರಕ್ಕೆ ಹಾರಿದಾಗ ಮಗ ‘ಅಪ್ಪ ಅಷ್ಟು ಎತ್ರ ಹೋಗೋದು ಹೇಗೆ ?ʼ ಎಂದು ಕೇಳುತ್ತಾನೆ.”
ಅಕ್ಷಯ ಪಂಡಿತ್ ಬರೆದ ‘ಬಯಲಲಿ ತೇಲುತ ತಾನುʼ ಕಥಾಸಂಕಲನಕ್ಕೆ ಡಾ. ನಾ. ಡಿಸೋಜ ಬರೆದ ಮಾತುಗಳು

Read More

ಏ.ಕೆ. ಕುಕ್ಕಿಲ ಪುಸ್ತಕಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿ

“ಇಂಥ ತೀವ್ರತರವಾದ ಕಷ್ಟದ ದಿನಗಳಲ್ಲಿ ಕೆಲವರು ತಮ್ಮ ಗುಪ್ತ ಕಾರ್ಯಸೂಚಿಗಳನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದ ಘಟನೆಗಳೂ ನಡೆದುವು. ಕೊರೋನಾ ಓಡಿಸಲು ಶಂಖ ಜಾಗಟೆಗಳನ್ನು ಬಳಸಲು ಸೂಚಿಸಿದಲ್ಲಿಂದ ಆರಂಭವಾದ ಅದು ದೆಹಲಿಯ ತಬ್ಲೀಗ್ ಜಮಾಅತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರಿಂದ ಕೊರೋನಾ ಹರಡಿದೆ ಎಂದು ಹೇಳುತ್ತಾ ಮಹಾಮಾರಿಗೂ ಕೋಮುವಾದದ ಸೋಂಕು ತಗಲಿಸುವವರೆಗೆ ಮುಂದುವರೆಯಿತು. ಆದರೆ ಕೊರೋನಾಕ್ಕೆ ಹಿಂದು ಮುಸ್ಲಿಂ ವ್ಯತ್ಯಾಸ ಗೊತ್ತಾಗದೆ, ಎಲ್ಲರನ್ನೂ ಬಲಿ ತೆಗೆದುಕೊಳ್ಳಲಾರಂಭಿಸಿದ ಮೇಲೆ ಚಿತ್ರ ಸ್ವಲ್ಪ ಬದಲಾಯಿತು.”
ಏ.ಕೆ. ಕುಕ್ಕಿಲ ಬರೆದ ‘ವೈರಸ್‌ʼ ಕಾದಂಬರಿಗೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ