Advertisement

Category: ಸರಣಿ

ಜೈಲು ಕಟ್ಟಿಸಿ ಬಂಧಿಗಳಾಗಿದ್ದು!: ಪೂರ್ಣೇಶ್‌ ಮತ್ತಾವರ ಸರಣಿ

ಅತ್ತ ನೋಡಿದರೆ ಅದೆಲ್ಲಿ ನಮ್ಮ ಹೆಸರುಗಳು, ಮಾರ್ಕ್ಸ್‌ಗಳು ತಾರೆ ಜಮೀನ್ ಪರ್ ಸಿನಿಮಾದಲ್ಲಿ ಶಿಕ್ಷಕಿ ಸರ್ಪ್ರೈಸ್ ಮ್ಯಾತ್ಸ್ ಟೆಸ್ಟ್ ಕೊಟ್ಟಾಗ, ಶಿಕ್ಷಕರು ನೌನ್, ಪ್ರನೌನ್ ಎಂದಾಗ ಅಂಕಿ ಸಂಖ್ಯೆಗಳು, ಅಕ್ಷರಗಳೆಲ್ಲಾ ಹುಡುಗನೆದುರು ಜೀವ ತಳೆದು ಕುಣಿದಾಡುತ್ತವಲ್ಲ.. ಹಾಗೆಯೇ ನಮ್ಮ ಮುಂದೆ ಜೀವ ತಳೆದು “ಕಾಪಾಡಿ ಕಾಪಾಡಿ ನಮ್ಮನ್ನು ಬಿಟ್ಟು ಹೋಗಬೇಡಿ” ಎಂದು ಕಿರುಚಿಕೊಳ್ಳುತ್ತೇವೆಯೋ, “ಕನಿಷ್ಠ ಪಕ್ಷ ಕೆಲ ಗಣ್ಯ ಅಪರಾಧಿಗಳಂತೆ ಮುಖ ಮುಚ್ಚಿಕೊಳ್ಳಲು ಮಾಸ್ಕ್, ಕರ್ಚೀಪ್‌ಗಳನ್ನಾದರೂ ಕೊಟ್ಟು ಹೋಗಿ” ಎಂದು ಕೇಳುತ್ತೇವೆಯೋ ಎನಿಸಲಾರಂಭಿಸಿತ್ತು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ

Read More

ಒಡೆದದ್ದನ್ನು ಇಡಿಯಾಗಿಸಿಕೋ ಮೆಕ್ಸಿಕೋ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ವಿಶ್ವದಲ್ಲಿ ಅತೀ ಹೆಚ್ಚು ಜ್ವಾಲಾಮುಖಿಗಳಿಗೆ ನೆಲೆಯಾಗಿರುವ ದೇಶ ಮೆಕ್ಸಿಕೋ. ರಾಷ್ಟ್ರದ ಹೆಚ್ಚಿನ ಪರ್ವತ ಪ್ರದೇಶಗಳಲ್ಲಿ ಜ್ವಾಲಾಮುಖಿಗಳು ಕಂಡುಬರುತ್ತವೆ. ಆಶ್ಚರ್ಯದ ಸಂಗತಿಯೆಂದರೆ, ವಿಶ್ವದ ಅತ್ಯಂತ ಚಿಕ್ಕ ಜ್ವಾಲಾಮುಖಿಯೂ ಇರುವುದು ಮೆಕ್ಸಿಕೋದಲ್ಲಿ. ಪ್ಯೂಬ್ಲಾ ಸಮೀಪದಲ್ಲಿರುವ ಕ್ಯುಕ್ಸ್ಕೊಮೇಟ್ ಜ್ವಾಲಾಮುಖಿಯ ಎತ್ತರ ಕೇವಲ 43 ಅಡಿ. ಇದು ಈಗ ನಿಷ್ಕ್ರಿಯವಾಗಿದೆ. 1910ರಲ್ಲಿ ಮೆಕ್ಸಿಕೋದಲ್ಲಿ ಕ್ರಾಂತಿ ನಡೆದಿತ್ತು. ಇದರ ಪರಿಣಾಮವನ್ನು ಈಗಿನ ಕಾಲಘಟ್ಟದಲ್ಲಿಯೂ ಕಾಣುವುದಕ್ಕೆ ಸಾಧ್ಯವಿದೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ನೈಸರ್ಗಿಕ ಜಗತ್ತಿಗೆ ಒಬ್ಬ ಅವಿಶ್ರಾಂತ ಮಾರ್ಗದರ್ಶಿ: ಎಸ್. ಜಯಶ್ರೀನಿವಾಸ ರಾವ್ ಸರಣಿ

ರೆಯ್ನಾಲ್ಡ್ಸ್ ಗಮನಿಸಿದಂತೆ, “ಈ ಸ್ವಯಂ ಪ್ರಜ್ಞೆಯು ಸಮೃದ್ಧವಾದ ಮತ್ತು ಸುಲಲಿತವಾದ ಸೇರ್ಪಡೆಯಾಗಿದೆ.” ಆಲಿವರ್‌-ರ ಕಾವ್ಯದಲ್ಲಿ ಕಂಡುಬರುವ ವಿಷಯಗಳಿಗೆ ಸಂಬಂಧಿಸಿದಂತೆ ವಿಸ್ಮಯದ ವ್ಯಾಪಕ ಸ್ವರವಿದೆ. ಆಲಿವರ್ ಅವರ ಕಾವ್ಯ “ಕವಿ ವಿಲಿಯಮ್ ಬ್ಲೇಕ್-ನ ಕವಿದೃಷ್ಟಿಯ ದಿವ್ಯದರ್ಶನದ ಗುಣ” ಹೊಂದಿವೆ ಎಂದು ರೆಯ್ನಾಲ್ಡ್ಸ್ ಅರಿತರು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಅಮೇರಿಕಾ ದೇಶದ ಕವಿ ಮೇರಿ ಆಲಿವರ್-ರವರ (Mary Oliver, 1935-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಸೀಮೆಯಿಂದ…. ಸುಗ್ಗಿವರೆಗೆ: ಸುಮಾವೀಣಾ ಸರಣಿ

“ನೀವು ತಿಂದದ್ದಕ್ಕೆ ಹಣ ಕೊಡಬೇಕಿಲ್ಲ ಎಂಥಾ ಸೌಲಭ್ಯವಿದು? ಪುಕ್ಕಟೆಯೇ? ಎಂದು ನೀವು ಕೇಳಬಹುದು ಇಲ್ಲ ಇದಕ್ಕೆ ಉದ್ರಿ ಎನ್ನುವರು. ಕೌಂಟರ್ ಮುಂದೆ ‘ನನ್ನ ಹೆಸರ್ಲೆ ಹಚ್ರಿ ಎಂದು ಹೇಳಿದರೆ ಸಾಕು ಹಚ್ಚುವುದೊಂದೇ ಹಳ್ಳಿ ಫಳಾರದಂಗಡಿಯ ಮಾಲಿಕನ ಕರ್ಮ. ಸುಗ್ಗಿಗೊಮ್ಮೆ ನಾಲ್ಕುಚೀಲ ಜೋಳ ತಂದು ಹೋಟೆಲಿಗೆ ಹಚ್ಚಿದರೆ ಬಾಕಿ ಚುಕ್ತಾ ಆಯ್ತು. ವರ್ಷದವರೆಗೂ ಪೂರಿ, ಬಜಿಗಳನ್ನು ತಿನ್ನುತ್ತಾ ಊರಸುದ್ದಿಯನ್ನು, ಮಾತನಾಡುತ್ತಾ ಎದುರಿಗಿರಲಾರದವರ ಗೇಲಿ ಮಾಡುತ್ತಾ ಹೊತ್ತನ್ನು ಕಳೆಯಬಹುದು” ಎಂಬ ಸಾಲುಗಳು ವೀರೆಂದ್ರ ಸಿಂಪಿಯವರ ‘ಹಳ್ಳಿಯ ಚಹಾ ಹೋಟೆಲುಗಳು’ ಲಲಿತ ಪ್ರಬಂಧದ ಸಾಲುಗಳು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ಸಿಕ್ಕೀತೆ ಮುಂದಿನ ದಾರಿ …: ಗುರುಪ್ರಸಾದ ಕುರ್ತಕೋಟಿ ಸರಣಿ

ಅಮೆರಿಕೆಯಲ್ಲಿನ ಸಿರಿತನ ಬಡತನ ಎರಡೂ ನೋಡಿದೆ. ಅತಿಯಾಗಿ ಖರ್ಚು ಮಾಡುವವರನ್ನೂ ಕಂಡೆ, ಮಿತವಾಗಿ ಹಾಸಿಗೆ ಇದ್ದಷ್ಟು ಕಾಲು ಚಾಚುವವರನ್ನೂ ನೋಡಿದ್ದೆ. ನನ್ನ ಜೊತೆಗೆ ಕೆಲಸ ಮಾಡುತ್ತಿದ್ದ ಜಿಮ್ ಎಂಬ ಒಬ್ಬ ಸಹೋದ್ಯೋಗಿ ಹತ್ತು ಡಾಲರ್‌ಗೆ ತೊಳೆದು ಇಸ್ತ್ರಿ ಮಾಡಿ ಮಾರುತ್ತಿದ್ದ ಸಂಸ್ಥೆಯೊಂದರಿಂದ ಸೆಕಂಡ್ ಹ್ಯಾಂಡ್ ಟೀ ಶರ್ಟ್ ಕೊಂಡೆ ಅಂತ ಹೆಮ್ಮೆಯಿಂದ ಬೀಗಿದ್ದನ್ನು ನೋಡಿದ್ದೆ. ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಕೊನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ