Advertisement

Category: ಸಾಹಿತ್ಯ

ರಟ್ಟೀಹಳ್ಳಿ ರಾಘವಾಂಕುರ ಬರೆದ ಈ ವಾರದ ಕಥೆ: ಹೊರೆ

“ತಾನು ಕುಳಿತ ಬೆಂಚಿನ ಹಿಂದಿನಿಂದ ಸರಕ್ಕನೆ ಗಾಳಿ ಬೀಸಿದಂತಾಗಿ ಶಬ್ದವೂ ಆಯಿತು. ನೋಡಿದರೆ ನಾಯಿಯೊಂದು ಏನನ್ನೊ ಅಟ್ಟಿಸಿ ಹೋದಂತಾಯಿತು. ತನ್ನ ಪಾಲಿನ ಆಹಾರವನ್ನು ಇನ್ಯಾವುದೋ ನಾಯಿ ತಿನ್ನುತ್ತಿರುವುದನ್ನು ಕಂಡು ಕೆರಳಿದಂತಿತ್ತು. ಅದರ ನೆಗೆತದ ಓಟ ಹಾಗೂ ಗುರ್‍ಗುಟ್ಟುವ ಆಕ್ರಮಣಕಾರಿ ಶಬ್ದ ವಿರೋಧಿ ಬಣದ ನಾಯಿ ಕೇಳಿಸಿಕೊಂಡಿತು. ಪ್ಲಾಟ್ ಫಾರಂ ನಂಬರ್ ನಾಲ್ಕರಲ್ಲಿ ಮಲಗಿದ…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಅನಿತಾ ಪಿ ಪೂಜಾರಿ ತಾಕೊಡೆ ಬರೆದ ಕಥೆ

“ಕಾವ್ಯಳಿಗೆ ಅಪ್ಪನ ನೆನಪುಗಳು ಅತಿಯಾಗಿ ಕಾಡಿ ನೋಡಬೇಕೆಂದೆನಿಸಿದಾಗಲೆಲ್ಲಾ ಅವಳಾಸೆಯನ್ನು ಪೂರೈಸಲು ಸಹಕರಿಸುವುದು ಸೀತಾಫಲದ ಮರವೇ… ಇಂದವಳಿಗೆ ಅಪ್ಪ ಹೇಗೆ ಕೆಲಸ ಮಾಡುತ್ತಿದ್ದಾರೆಂದು ನೋಡುವ ಆಸೆಯಿತ್ತು. ಮರವನ್ನೇರಿದ ಐದು ನಿಮಿಷದಲ್ಲಿಯೇ ಕಾವ್ಯ ಅಪ್ಪ ಕೆಲಸ ಮಾಡುವ ‘ವುಡ್‌ಲ್ಯಾಂಡ್ಸ್’ ಹೊಟೇಲ್ ಎದುರುಗಡೆ ನಿಂತಿದ್ದಳು. ಅಪ್ಪ ಮಾತ್ರ ಕಾವ್ಯಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ.”

Read More

ಸುವರ್ಣ ಚೆಳ್ಳೂರು ಬರೆದ ಈ ಭಾನುವಾರದ ಕಥೆ ʼಗುರುತುʼ

“ಬಣವಿ ಹಾಕಿ ಕೈ ಸೋತಂಗಾದವು, ಬಿಸಲು ನೆತ್ತಿಗೆ ಬಂದು ನೆರಳೆಲ್ಲ ನೆಟ್ಟಗಾಗಿದ್ವು. ಹೊಲದ ಬದಿಗಿದ್ದ ಒಂದೆರಡು ಸೂರೆಪಾನ ಹೂವ್ವುಗಳಿಗೆ ದಿಕ್ಕು ತಪ್ಪಿದಂಗಾಗಿ ಮ್ಯಾಗ ಮೊಕ ಮಾಡಿಕ್ಯಂದು ನಿಂತಿದ್ವು. ಹುಲ್ಲು ಬಣವಿ ಹಾಕಿ ಸುರುಳಿ ಸುತ್ತಿ ಅವುಗಳ ನಡುವಿಗೆ ಉರಿಕೆನ್ನಿ ಬಿಗುತ್ತನಂಗ ಬಿಗುದು, ಒಂದರ ಮ್ಯಾಗೊಂದು ಹುಲ್ಲಿನ ದಂಡು ಸೇರಿಸಿ ದೊಡ್ಡ ಬಣವಿಗೆ ಕಮಾನಿನ ಆಕಾರ ಕೊಟ್ಟು, ನೆತ್ತಿ ಮ್ಯಾಗಳ ಬೆವರನ್ನ ಬೆರಳಿಂದ ಸವರಿ ಒರೆಸಿಗ್ಯಂದು…”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಆನಂದ ಋಗ್ವೇದಿ ಬರೆದ ಕಥೆ

“ಅದೆಷ್ಟು ಕಣ್ಣೀರು ಹೀಗೇ ಇಂಗಿಹೋಗಿವೆ, ಕಣ್ಣಾಲಿಯ ಒಳಗೇ ಒಣಗಿಹೋಗಿವೆ? ದೇವಸಾಗರದ ಜನ ಕರೆಯುವಂತೆ ಗೋಪಜ್ಜ ಆಗ ಗೋಪಜ್ಜನಾಗಿರಲಿಲ್ಲ. ದೇವರಕೆರೆಯ ಬಿಷ್ಟಪ್ಪನ ಮಗ ಗೋಪಾಲ ಆಗ ಹದಿಹರೆಯದ ಹುಡುಗ. ದೇವರಕೆರೆಯ ತೋಡಿನಿಂದ ಹರಿದ ನೀರನ್ನ ಕಟ್ಟಿಹಾಕಿ, ಒಂದೇ ರಾತ್ರಿಯಲ್ಲಿ ಹೊಲದ ಬದುವಿಗುಂಟ ಹರಿಸಿ, ಇಡೀ ಹೊಲ ನಳನಳಿಸುವಂತೆ ಮಾಡುವ ಕಸುವಿನವ!”

Read More

ಜಯಂತ ಕಾಯ್ಕಿಣಿ ಹೊಸ ಪುಸ್ತಕದಿಂದ ಒಂದು ಕತೆ

“ಅವ್ವನ ಸಿಡಿಮಿಡಿ, ಪ್ರತಿರೋಧ, ಆಘಾತ ಇವ್ಯಾವುದೂ ಕಾಣಿಸುವ ಸ್ಥಿತಿಯಲ್ಲೇ ಚಿತ್ತಿ ಇರಲಿಲ್ಲ. ಆಕಾಶದಿಂದಲೇ ತೂಗುಬಿದ್ದಿದ್ದ ಜೋಕಾಲಿಯೊಂದರ ಮೇಲೆ ಅವಳಾಗಲೇ ಕೂತುಬಿಟ್ಟಿದ್ದಳು. ಅದು ದಾಂಡೇಲಿಯಿಂದ ಬೆಳಗಾಂವ ತನಕ ಜೀಕುತ್ತಿತ್ತು. ನಡುವೆ, ಧಾರವಾಡದ ಕಿಲ್ಲೆಯ ನೆತ್ತಿಯನ್ನು ಚೂರು ಸವರಿ ಹೋಗುತ್ತಿತ್ತು.”
ಇತ್ತೀಚೆಗಷ್ಟೇ ಬಿಡುಗಡೆಯಾದ…

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ