Advertisement

Category: ಸಾಹಿತ್ಯ

ನವೀನ ಗಣಪತಿ ಬರೆದ ಈ ಭಾನುವಾರದ ಕತೆ ಪ್ರಾಣಪಕ್ಷಿ

ಗಾರೇಜಿನಲ್ಲಿ ನೆರವಾಗುತ್ತಿದ್ದ ಪಿಟ್ಟನಿಗೆ ಆ ತಿಂಗಳ ಸಂಬಳ ಕೊಡುವುದಕ್ಕೇ ಸಾಧ್ಯವಾಗಲಿಲ್ಲ ಅಡಿಗರಿಗೆ. ಸಾಧು ಸ್ವಭಾವದವನಾದ, ಯಾವತ್ತೂ ಸಂಬಳಕ್ಕಾಗಿ ಹಾತೊರೆದು ಕೇಳದ ಪಿಟ್ಟ ಆರಂಭದಲ್ಲಿ ಏನೂ ಕೇಳಲಿಲ್ಲ. ಆದರೆ ಕೆಲದಿನಗಳಲ್ಲಿ, ‘ಸ್ವಲ್ಪ ಇದ್ದರೆ ಬೇಕಿತ್ತು’ ಎಂದು ಎರಡು ಮೂರು ಬಾರಿ ಕೇಳಿದ. ನಾಳೆ ಕೊಡುವ ಎಂದು ಅಡಿಗರು ಆಶ್ವಾಸನೆ ಕೊಟ್ಟರೂ, ಹಾಗೆ ಹಣ ಕೊಡುವುದಕ್ಕೆ ಸಾಧ್ಯವಾಗಲಿಲ್ಲ. ಈ ನಡುವೆ ಹುಶಾರು ತಪ್ಪಿದ ಪಿಟ್ಟ, ಆಗಸ್ಟ್ ತಿಂಗಳಲ್ಲಿ ಸಿದ್ಧಾಪುರದ ಆಸ್ಪತ್ರೆಗೆ ಸೇರಿದವನು, ತೀರಿಯೇ ಹೋದ ಸುದ್ದಿ ಬಂದಿತ್ತು.”

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಭದ್ರಪ್ಪ ಶಿ ಹೆನ್ಲಿ ಬರೆದ ಕಥೆ

ಕಣ್ಣುಮುಚ್ಚಿ ಒರಗಿದವನಿಗೆ ನಿದ್ರೆ ಬರಲಿಲ್ಲ. ಬಣ್ಣ ಬಣ್ಣದ ವೇಷ ತೊಟ್ಟ ಯಕ್ಷಗಾನದ ಪಾತ್ರಗಳು ರಿಂಗಣ ಹಾಕಲು ಪ್ರಾರಂಭಿಸಿದಂತೆ ಬದುಕಿನ ಭೂತಕಾಲ ಬೆತ್ತಲೆಯಾಗಿ ನಿಂತಿತು. ಅವನು ತನ್ನ ಅಮ್ಮಿಜಾನಳ ಹೊಟ್ಟೆಯಿಂದ ಈ ಪ್ರಪಂಚಕ್ಕೆ ಬಂದಾಗ ಅಪ್ಪ ಇರಲಿಲ್ಲ. ಅವನ ಅಪ್ಪ ಕಂಕನಾಡಿಯ ವಿಟ್ಟುಪೈಯವರ ಮಂಡಿಯಲ್ಲಿ ಉಪ್ಪು ಮೀನು ಪಡೆದು ಘಟ್ಟದ ಕಡೆಗೆ ಲಾರಿಯಲ್ಲಿ ಸಾಗಿಸಿ, ಮಾರಾಟ ಮಾಡಿ ಮನೆಗೆ ಮರಳಬೇಕಾದರೆ ವಾರವೆರಡು ಕಳೆಯುತ್ತಿದ್ದವು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಭದ್ರಪ್ಪ ಶಿ ಹೆನ್ಲಿ ಬರೆದ ಕತೆ ‘ಎದೆ ಹತ್ತಿ ಉರಿದೊಡೆ’

Read More

ನಾರಾಯಣ ಯಾಜಿ ಈ ಭಾನುವಾರದ ಕಥೆ

ಆತ ಹಿಂದಿಯಲ್ಲಿ “ಮಾಲು ಬೇಕಾ, ಪ್ರೆಶ್ ಇದ್ದಾರೆ” ಎಂದ. ಅನಂತ ಇಲ್ಲಾ ನಾವು ಇಲ್ಲಿ ನಮ್ಮೂರಿನ ಹೋಟೇಲಿನವರನ್ನು ಭೆಟ್ಟಿಯಾಗಲಿಕ್ಕೆ ಬಂದಿದ್ದೇವೆ. ಅಂತಹುದೇನೂ ನಮಗೆ ಆಸೆಯಿಲ್ಲ ಎಂದು ಅವನನ್ನು ಸಾಗಹಾಕಲು ನೋಡಿದ. ಆತನೂ ಬಿಡಲಿಲ್ಲ. “ಸಾಬ್ ನೋಡಿ ಹೋಗಿ, ಅದಕ್ಕೆ ಹಣಕೊಡಬೇಕಾಗಿಲ್ಲ.” ಎಂದು ಒತ್ತಾಯ ಮಾಡಲು ತೊಡಗಿದ. “ನಾವು ಅಂತವರಲ್ಲ ಮರಿ…” ಎಂದು ಮೂರ್ತಿ ಹೇಳುತ್ತಿರುವಂತೆ ಆತ ಮತ್ತೆ ತನ್ನ ವರಾತ ಹಚ್ಚಿ “ನೋಡಿ ಹೋಗಿ ಅವರೆಲ್ಲಾ ತನ್ನ ಅಕ್ಕಂದಿರು” ಎಂದ.

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಬೇಲೂರು ರಘುನಂದನ್‌ ಬರೆದ ಕಥೆ

ಶರಾಬು ಪಾಕೀಟು ಸಿಗೋದು ಶೆಟ್ರು ತೋಟದಿಂದ ಬರೋಬ್ಬರಿ ಐದು ಮೈಲಿ ದೂರ. ಮಳೆ ಬೇರೆ. ನಡ್ಕಂಡು ಹೋಗಿ ಇವಳು ಶರಾಬು ಕುಡ್ದು ಏಡಿ ಹಿಡಿದು ತರೋ ಹೊತ್ಗೆ ಕತ್ತಲು ಕವಿದಿರುತ್ತೆ. ಹಂಗಾದ್ರೆ ರಾತ್ರಿ ಮಿಣಕ ಮಿಣಕ ಅನ್ನೊ ದೀಪದ ಬೆಳಕಲ್ಲಿ ಒಲೆ ಮುಂದೆ ಹೋಗೋದು ಸಾಧ್ಯವಿಲ್ಲ ಅಂತ ಎಣಿಸಿ ಶೆಟ್ರ ಹೆಂಡ್ತಿ ಬರ ಬರ ಒಳಗೋದ್ಲು. ಅಟ್ಟದ ಮೇಲಿಟ್ಟಿದ್ದ ಶೆಟ್ರ ಬಾಟ್ಲಿಲಿ ಅರ್ಧ ಇನ್ನೊಂದು ಬಾಟ್ಲಿಗೆ ಸುರ್ಕಂಡು ಅಮ್ಮಯ್ಯಂಗೆ ತಂದುಕೊಟ್ಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೇಲೂರು ರಘುನಂದನ್‌ ಬರೆದ ಕತೆ ‘ಏಡಿ ಅಮ್ಮಯ್ಯ’

Read More

ಶ್ರೀನಿವಾಸ ಜೋಕಟ್ಟೆ ಬರೆದ ಈ ಭಾನುವಾರದ ಕತೆ

ಅಂತೂ ಎಂದಿಗಿಂತ ಸ್ವಲ್ಪ ಬೇಗನೆ ರೈಲು ಇಳಿದರೂ ಸ್ಟೇಷನ್ ಹೊರಗಡೆ ರಿಕ್ಷಾ ಹಿಡಿಯಲು ಕ್ಯೂ ಬೇರೆ. ಎಂದಿಗಿಂತಲೂ ಕ್ಯೂ ಸ್ವಲ್ಪ ಹೆಚ್ಚೇ ಇತ್ತು. ತೀರಾ ಅಗತ್ಯದ ಸಾಮಾನುಗಳನ್ನು ಹಿಡಿದುಕೊಂಡು ಮನೆಗೆ ಬಂದರೆ ಆಗಲೇ ಚಿಕ್ಕಪ್ಪ, ಚಿಕ್ಕಮ್ಮ ಮನೆಗೆ ಬಂದಿದ್ದರು. “ಹೇಗಿದ್ದೀರಿ? ಪ್ರಯಾಣ ಕಷ್ಟವಾಯಿತಾ…..?” ಇತ್ಯಾದಿ ಔಪಚಾರಿಕವಾಗಿ ವಿಚಾರಿಸಿ ವಿಜಯೇಂದ್ರ ಸ್ನಾನಕ್ಕೆ ಹೋದ. ಸಹನಾ ಎಲ್ಲರಿಗೂ ರಾತ್ರಿಯ ಊಟಕ್ಕೆ ತಯಾರಿ ನಡೆಸಿದಳು. ಇವಳು ಹಪ್ಪಳ ಕಾಯಿಸಿದರೆ ಎಲ್ಲಾ ಅಡುಗೆ ಮುಗಿದಂತೆ ಎಂದು ಚಿಕ್ಕಮ್ಮನಲ್ಲಿ ಹೇಳಿದ.
ಶ್ರೀನಿವಾಸ ಜೋಕಟ್ಟೆ ಬರೆದ ಕತೆ ‘ಗುಡ್ಡ’.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ