Advertisement

Category: ಸಾಹಿತ್ಯ

‘ನಾನು ಮೆಚ್ಚಿದ ನನ್ನ ಕಥೆ’: ಅಜಯ್‌ ವರ್ಮಾ ಅಲ್ಲುರಿ ಬರೆದ ಕಥೆ

“ಪೌಲ್ ಆ ಕಿಟಕಿಯನ್ನೇ ನೋಡುತ್ತಾ ಹೊರಬಂದ. ಅಡುಗೆ ಮನೆಯ ಗೋಡೆಗೆ ಅಂಟಿಕೊಂಡೇ ದೇವರಕೋಣೆಯಿತ್ತು. ಅವನೇ ಬಾಗಿಲು ತಗೆದು ಒಳಗೆ ನಡೆದ ಅದು ಅಡುಗೆ ಮನೆಗಿಂತಲೂ ಚಿಕ್ಕದಾದ ಕೋಣೆ ತುಂಬಾ ಧೂಳು ಹಿಡಿದಿತ್ತು. ಕೋಣೆಯ ನಟ್ಟನಡುವೆ ಏಸುವಿನ ಶಿಲುಬೆಯಿತ್ತು. ಸುತ್ತಲೂ ಗೋಡೆಯ ಮೇಲೆ ಹಿಂದೂ ದೇವರುಗಳ ಪಟಗಳಿದ್ದವು. ಶಿಲುಬೆಯ ಒಂದು ಕೈಗೆ ಜೇಡರ ಬಲೆ ನೇಯ್ದುಕೊಂಡಿತ್ತು.”

Read More

ಬಣ್ಣಗಳಿಗೆ ನಿಲುಕದ ಸೌಂದರ್ಯ!: ಕುಮಾರ ಬೇಂದ್ರೆ ಬರೆದ ಕಥೆ

“ತಲೆಯಿಂದ ಕಾಲವರೆಗೆ ಗಮನಿಸಿದ. ಅದೇ ರಶ್ಮಿ! ಗಾಢ ಹಳದಿ ವರ್ಣದ ಸೆಲ್ವಾರ್ ಕಮಿಜ್ ಧರಿಸಿದ್ದಾಳೆ. ತಲೆಯಿಂದ ನೀಳವಾಗಿ ಚಾಚಿ ಹೆಗಲು ಆವರಿಸಿರುವ ರೇಷ್ಮೆಯಂತಹ ಕೇಶ. ಅದೇ ಆಗ ತೀಡಿರುವ ಹುಬ್ಬು, ತುಟಿಯ ಕೆಂಪು ವರ್ಣ ಬೆಳಗಿನ ತಂಪಿಗೆ ನಳನಳಿಸುತ್ತಿದ್ದವು. ಗುಲಾಬಿ ಪಕಳೆಯಷ್ಟೇ ನಾಜೂಕಾದ ಅವಳ ಕೆನ್ನೆಯ ತ್ವಚೆಯಲ್ಲಿ ಮಂಜಿನ ಹನಿಗಳು ನಿಂತು ಮುತ್ತಿನಂತೆ ಮಿಂಚುತ್ತಿವೆ. ವಿಶಾಲವಾದ ಕಣ್ಣುಗಳಲ್ಲಿ ಆಪ್ತಭಾವ, ಅಂತಃಕರಣ ತುಂಬಿದೆ…”

Read More

“ನಾನು ಮೆಚ್ಚಿದ ನನ್ನ ಕಥೆ” ಕಥಾ ಸರಣಿ ಆರಂಭ

““ನೀನು ಹುಚ್ಚನಂತೆ ಮಾತಾಡಬೇಡ. ನಮ್ಮ ಊರಿನಲ್ಲಿ ಮನುಷ್ಯರು ಮಾತ್ರ ಇದ್ದಾರೆ. ಇಲ್ಲಿ ಯಾವ ಕ್ಷಣಕ್ಕೂ ದೊಂಬಿ, ಗಲಭೆ ನಡೆದಿಲ್ಲ. ಜಾತಿ ಮತ್ಸರದಿಂದ ಹೃದಯಗಳು ಹೊತ್ತಿ ಉರಿದಿಲ್ಲ. ನೀನು ವಿನಾಕಾರಣ ನಮ್ಮಗಳ ಬಾಂಧವ್ಯಕ್ಕೆ ಬೆಂಕಿ ಹಚ್ಚಬೇಡ”
ಸ. ರಘುನಾಥ್‌ ಹಾಗೂ ಆರ್. ವಿಜಯರಾಘವನ್‌ ಅವರ ಸಂಪಾದಕತ್ವದಲ್ಲಿ ರೂಪುಗೊಂಡ “ನಾನು ಮೆಚ್ಚಿದ ನನ್ನ ಕಥೆ” ಪುಸ್ತಕ ನಾಲ್ಕು ಸಂಪುಟಗಳಲ್ಲಿ ಮುದ್ರಣಗೊಂಡಿದೆ. ಈ ಭಾನುವಾರದಿಂದ ಹದಿನೈದು ದಿನಕ್ಕೊಮ್ಮೆ ಈ ಸಂಪುಟಗಳ ಕಥೆಗಳು…”

Read More

ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ಬರೆದ ತೆಲುಗು ಕಥೆ ʼವಾತ್ಸಲ್ಯʼ

““ಈ ಪ್ಲ್ಯಾನ್ ಚೆನ್ನಾಗಿಯೇ ಇದೆ, ಮೊನ್ನೆ ಪ್ಲೇ ಗ್ರೌಂಡಿನಲ್ಲಿ ಪದ್ಮ ಸಿಕ್ಕಿದ್ದಳು, ಅವರ ಮಗಳನ್ನು ಕೂಡ ಇಂಡಿಯಾದಲ್ಲೇ ಬಿಟ್ಟು ಬಂದಿದ್ದಾರಂತೆ. ಅವಳು ಯಾವುದೋ ಕೋರ್ಸ್ ಕೂಡ ಮಾಡಿಕೊಂಡು, ಈಗ ಕೆಲಸಕ್ಕೆ ಟ್ರೈ ಮಾಡುತ್ತಿದ್ದಾಳಂತೆ”, ವೆಂಕಟ್ ಕೊಟ್ಟ ಹಾಲಿನ ಲೋಟ ತೆಗೆದುಕೊಳ್ಳುತ್ತ ಮುಂದುವರಿಸಿ “ಮುಂದಿನ ತಿಂಗಳು ನನಗೆ ಪ್ರಮೋಷನ್ ಬರುವುದಿದೆ, ಈಗ ನಾನು ಕೆಲಸ ಬಿಟ್ಟರೆ ಹೇಗೆ ಎಂದು ಯೋಚಿಸುತ್ತ ನಾನೇ ನಾನೇ ನಿಮಗೆ ಈ ಐಡಿಯಾ ಹೇಳೋಣವೆಂದುಕೊಂಡೆ.”

Read More

ಈ ಕಡಲು ಹೆಂಗಸಾ… ಗಂಡಸಾ….: ನಾಗಶ್ರೀ ಶ್ರೀರಕ್ಷ ಬರೆದ ಕಥೆ

“ಟೆರೇಸಿನ ಮೇಲೆ ತನ್ನ ಉದ್ವಿಗ್ನ ಕಥೆಗಳನ್ನು ಹೇಳುತ್ತಿದ್ದ ನಕುಲನ ಭುಜದ ಮೇಲೆ ಹಾರುತ್ತಿದ್ದ ನೀಳಕೂದಲು, ಕೆಳಗಿಂದ ಕೇಳುತ್ತಿದ್ದ ಮಕ್ಕಳ ಕೇಕೆ, ಮುಳಗುತ್ತಿರುವ ಸೂರ್ಯನನ್ನು ಹಿಂದಿಕ್ಕಿ ಕೆಂಪು ಬೆಳಕಿನಲ್ಲಿ ಪೂರ್ವದ ಕಡೆ ಹಾರುತ್ತಿರುವ ಹೆಸರು ಗೊತ್ತಿಲ್ಲದ ಹಕ್ಕಿಗಳ ಹಸಿವು ಬಾಯಾರಿಕೆ, ಬಣ್ಣಬಣ್ಣದ ರೆಕ್ಕೆಗಳ ಮೈಥುನದ ಆಸೆಗಳು, ಮೆಲ್ಲಗೆ ಪೂರ್ವದ ಕಡೆಯಿಂದ ಉದಯಿಸುತ್ತಿರುವ ಚಂದ್ರನ ಬೆಳಕ ಜೊತೆಯಲ್ಲೇ ಬೀಸಿ ಬರುತ್ತಿರುವ ತಂಗಾಳಿ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ