Advertisement

Category: ಅಂಕಣ

ತೊರೆದು ಜೀವಿಸಬಹುದೇ ನಿಮ್ಮ ಚರಣಗಳ: ಕೃಷ್ಣ ದೇವಾಂಗಮಠ ಅಂಕಣ

“ದೇಹವೇ ಮಣ್ಣು ಹಾಗಾಗಿಯೇ ಮಣ್ಣಿಂದ ಕಾಯ ಮಣ್ಣಿಂದ ಅಂತ ದಾಸರು ಹಾಡಿದ್ದು. ಅಕ್ಕಿ ಬೆಂದು ಹೇಗೆ ತನ್ನ ರೂಪ ಬದಲಿಸುತ್ತದೋ ಹಾಗೆಯೇ ಅನ್ನ ದೇಹವಾಗಿ ಮಾರ್ಪಾಡಾಗುತ್ತದೆ ಅದೇ ಪೃಥ್ವೀ ತತ್ವ. ಇನ್ನು ನಮ್ಮೊಳಗಿರುವ ನೀರು, ಹೊರಬರುವ ಮೂತ್ರ, ವೀರ್ಯ ಎಲ್ಲವೂ ಜಲ ಸ್ವರೂಪವೇ ಆಗಿದ್ದು ಅದನ್ನೇ ಜಲತತ್ವ ಅಂತಾರೆ. ಅಗ್ನಿಯಿಲ್ಲದೆ ನಾವು ತಿಂದ ಅನ್ನ ಹೊಟ್ಟೆಯಲ್ಲಿ ಅರಗುವುದಿಲ್ಲ. ನಮ್ಮೊಳಗಿನ ಜಠರಾಗ್ನಿಯೇ ತಿಂದದ್ದನ್ನು ಕರಗಿಸುವುದು. ಅದೇ ಅಗ್ನಿ ತತ್ವ. “

Read More

ಭೂತದ ತೋಟದಲ್ಲಿ ಬಾಯಿಬಡುಕ ಹಕ್ಕಿ: ಮುನವ್ವರ್ ಜೋಗಿಬೆಟ್ಟು ಕಥನ

“ಅವುಗಳ ತಹತಹಿಕೆ ನೋಡುವಾಗಲೇ ಅಲ್ಲೆಲ್ಲೋ ಗೂಡಿರುವ ಸಂಶಯ ಇನ್ನಷ್ಟು ದಟ್ಟವಾಯಿತು. ಮುಳ್ಳುಗಳೇ ತುಂಬಿ ಹೋಗಿದ್ದ ಆ ಪೊದೆಯಲ್ಲಿ ಗೂಡು ಹುಡುಕುವುದು ಸುಲಭವಿರಲಿಲ್ಲ. ಅಷ್ಟರಲ್ಲೇ ತಾಯಿ ಹಕ್ಕಿಯೊಂದು ಮುಳ್ಳುಗಳೆಡೆಯಿಂದ ಹೊರಬಂತು. ಸಣ್ಣ ರೆಂಬೆಯೊಂದು ಕವಲೊಡೆಯುವ ಮಧ್ಯಕ್ಕೆ ಆಧಾರವಾಗಿ ಕಟ್ಟಿದ ಗೂಡೊಂದು ಕಂಡಿತು. ಅದಾಗಲೇ ಸಣ್ಣ ಕಡಲೆಯಾಕೃತಿಯ ಸಣ್ಣ ಮೊಟ್ಟೆಗಳಿದ್ದವು.”

Read More

ಸುಳಿಗಾಳಿಯಂತಿದ್ದ ಸುಧೀರನ ನೆನಪುಗಳು: ಯೋಗೀಂದ್ರ ಮರವಂತೆ ಅಂಕಣ

“ಕೈಯಲ್ಲಿ ಯಾವ ಆಟಿಕೆ ಅಥವಾ ಅಂತಹ ವಸ್ತು ಇಲ್ಲದೆಯೂ ಮೈಮರೆತು ಆಡುತ್ತಿದ್ದ ಆ ಕಾಲದ ಎಲ್ಲ ಮಕ್ಕಳಂತೆ ನಾವು ಕೂಡ…. ಯಾರಿಂದಲೋ ಕಲಿತ ಆಟಗಳು ನಾವೇ ಕಲ್ಪಿಸಿದ ನೋಟಗಳು ಎಲ್ಲವೂ ಅಲ್ಲಿ ಪ್ರಯೋಗಕ್ಕೆ ಬರುತ್ತಿದ್ದವು. ಹೆಚ್ಚು ಎತ್ತರ ಬೆಳೆಯದ ಕಸೆ ಮಾವಿನ ಮರದ ಗೆಲ್ಲನ್ನು ಏರಿ ಕುಳಿತು ಕಾಲು ಹಿಂದೆ ಮುಂದೆ ಆಡಿಸುತ್ತಾ ಗಂಟೆಗಟ್ಟಲೆ ಪುರಾಣ ಹರಟೆ ಕೊಚ್ಚುತ್ತಿದ್ದೆವು. ಯಸ್ಸಿನಲ್ಲಿ ನನಗಿಂತ ಮೂರು ವರ್ಷ ದೊಡ್ಡವನೂ ಪೇಟೆ ಊರು ಹೆಚ್ಚು ತಿರುಗಿದವನೂ ಆದ ಸುಧೀರ….”

Read More

ಅಗ್ನಿಯಿಂದ ಎದ್ದು ಬಂದ ಬೆಳಕುಗಳು: ಡಾ.ಲಕ್ಷ್ಮಣ ವಿ.ಎ. ಅಂಕಣ

“ಈಗಿರುವ ಮೆಡಿಕಲ್ ಕಾಲೇಜಿಗೆ ಕೊಡುವ ಬಜೆಟ್ಟಿನಲ್ಲೇ ನಾವು ಲಕ್ಷಾಂತರ ತಜ್ಞ ಪರಿಣಿತ ವೈದ್ಯರನ್ನು ತಯಾರಿ ಮಾಡಬಹುದು. ಅದಕ್ಕೊಂದು ಸಿದ್ಧ ಸೂತ್ರವೂ ಅವರ ಬಳಿ ಇದೆ. ಹಳ್ಳಿಯಿಂದ ಬಂದ ಪ್ರತಿ ಮೆಡಿಕಲ್ ವಿಧ್ಯಾರ್ಥಿಯ ಎದೆಯಲ್ಲೊಂದು ಕಿಚ್ಚು ಇರುತ್ತದೆ. ಅವರ ಹೊಟ್ಟೆಯ ಹಸಿವು ದಿನದ ಇಪ್ಪತ್ನಾಲ್ಕು ಗಂಟೆ ದುಡಿಯುವ ಉತ್ಸಾಹ ಪ್ರಚೋದನೆ ನೀಡುತ್ತಿರುತ್ತದೆ.. ಅವಕಾಶ ವಂಚಿತ ಇಂತಹ ಗ್ರಾಮೀಣ ಬಡ ಭಾರತದ ಹುಡುಗ ಹುಡುಗಿಯರಿಗೆ ಬೇಕಿರುವುದು ಒಂದು ಸಣ್ಣ ಸಹಾಯ ಮಾತ್ರ.”

Read More

ರವೀಂದ್ರನಾಥರೊಳಗಿನ “ಅವಳ” ನೆರಳು: ಆಶಾ ಜಗದೀಶ್ ಅಂಕಣ

“ತಂದೆಯಂತಹವನೊಬ್ಬ ವ್ಯಾಪಾರಿ ತನ್ನ ಮಗಳ ವಯಸ್ಸಿನ ಮಗುವಿನಲ್ಲಿ ತನ್ನ ಮಗಳನ್ನು ಕಾಣುವುದನ್ನು ಮನೋಜ್ಞವಾಗಿ ಕಟ್ಟಿಕೊಡುತ್ತಾರೆ ರವೀಂದ್ರರು. ಕಾಬೂಲ್ ಕಡೆಯವನಾದ್ದರಿಂದ ಅವನು ಕಾಬುಲೀವಾಲಾ. ಸಮಯದ ಸಮಯಸಾಧಕತನ ಎನ್ನುವಂತೆ ಕಾಬೂಲೀವಾಲಾ ಜೈಲಿಗೆ ಹೋಗುವ ಪ್ರಸಂಗ ಎದುರಾಗುತ್ತದೆ. ಏಳೆಂಟು ವರ್ಷಗಳ ಸೆರೆವಾಸದ ತರುವಾಯ ಅದೇ ಕಾಬುಲೀವಾಲ….”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ