Advertisement

Category: ಪ್ರವಾಸ

ಬಳ್ಳಿಗಾವೆಯ ತ್ರಿಪುರಾಂತಕೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಒಳಗುಡಿಯ ಮಂಟಪದಲ್ಲಿ ಗರ್ಭಗುಡಿಯ ಶಿವಲಿಂಗದತ್ತ ಮುಖಮಾಡಿ ಕುಳಿತ ನಂದಿ ಆಕರ್ಷಕ. ಬಾಲ, ಗೊರಸು, ಗಂಗೆದೊಗಲು ಮೊದಲಾಗಿ ಸುಸ್ಥಿತಿಯಲ್ಲಿರುವ ಈ ನಂದಿಯ ಶಿಲ್ಪ ನಮ್ಮ ನಾಡಿನಲ್ಲಿರುವ ಈ ಮಾದರಿಯ ಅತ್ಯಾಕರ್ಷಕ ವಿಗ್ರಹಗಳಲ್ಲೊಂದೆಂದು ಹೇಳಿದರೆ ಅತಿಶಯೋಕ್ತಿಯಲ್ಲ. ನಡುಮಂಟಪದ ಕಂಬಗಳ ಬುಡದ ಚೌಕದಲ್ಲಿ ಕೀರ್ತಿಮುಖಗಳೊಳಗೆ ದೇವತೆಯರ…”

Read More

ಮುತುಕೂರಿನ ಕೇಶವ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ವಿಜಯನಗರದ ಕಾಲದಲ್ಲೇ ನಿರ್ಮಾಣವಾದುದೆಂದಿಟ್ಟುಕೊಂಡರೂ ಐದುನೂರು ವರುಷಗಳಿಗೂ ಹಳೆಯದು. ತಿರುಪತಿಯ ವೆಂಕಟೇಶನಂತೆ ಕೊಳಗದ ಕಿರೀಟ ಧರಿಸಿದ ಕೇಶವ ಬಲಗೈಯಲ್ಲಿ ಪದ್ಮ, ಬಲಮೇಲುಗೈಯಲ್ಲಿ ಶಂಖ, ಎಡಮೇಲುಗೈಯಲ್ಲಿ ಚಕ್ರ ಹಾಗೂ ಎಡಗೈಯಲ್ಲಿ ಗದೆಗಳನ್ನು ಧರಿಸಿದ್ದಾನೆ. ಬಲಗೈಯಲ್ಲಿ ಪದ್ಮದ ದೇಟನ್ನು ಹಿಡಿದಿರುವಂತೆಯೇ ವರದಹಸ್ತನೂ ಆಗಿರುವ ಕೇಶವನ ಶಿಲ್ಪವು ವಸ್ತ್ರದ ನಿರಿಗೆಗಳಿಂದ ಮೊದಲುಗೊಂಡು ಕೈಯ ಉಗುರುಗಳವರೆಗೆ ಎಲ್ಲ ಸೂಕ್ಷ್ಮಾಂಶಗಳನ್ನೂ ಸ್ಪಷ್ಟವಾಗಿ ತೋರ್ಪಡಿಸುತ್ತದೆ. ಸೊಂಟಕ್ಕೆ ಕಟ್ಟಿದ ಪಟ್ಟಿಯ ನಡುವೆ… “

Read More

ಉಮ್ಮತ್ತೂರಿನ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಉಮ್ಮತ್ತೂರಿನಲ್ಲಿರುವ ದೇವಾಲಯಗಳ ಸಂಖ್ಯೆಯಿಂದಲೇ ಸ್ಥಳೀಯ ಐತಿಹಾಸಿಕ ಮಹತ್ವವನ್ನು ಅಂದಾಜು ಮಾಡಬಹುದು. ರಂಗನಾಥ, ಭುಜಂಗೇಶ್ವರ, ಆಂಜನೇಯ, ಸಪ್ತಮಾತೃಕಾ, ವೀರಭದ್ರ ಗುಡಿಗಳಲ್ಲದೆ ಹದಿಮೂರನೆ ಶತಮಾನಕ್ಕೆ ಸೇರಿದ ವರ್ಧಮಾನ ಬಸದಿಯೂ ಇಲ್ಲಿ ಕಂಡುಬರುತ್ತವೆ. ಇಪ್ಪತ್ನಾಲ್ಕನೆ ತೀರ್ಥಂಕರನಾದ ವರ್ಧಮಾನ…”

Read More

ಕೋಲಾರದ ಸೋಮೇಶ್ವರ ದೇವಾಲಯ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ದೇಗುಲವನ್ನು ಪ್ರವೇಶಿಸುವುದಕ್ಕೆ ಮುನ್ನವೇ ಮನಸೆಳೆಯುವ ಅಪೂರ್ವನಿರ್ಮಿತಿಯಿದು. ದೇವಾಲಯದ ಸಮೀಪಕ್ಕೆ ಬರುತ್ತಿರುವಂತೆಯೇ ಬೃಹತ್ತಾದ ರಾಜಗೋಪುರ, ಅದಕ್ಕೆ ತಕ್ಕ ಎತ್ತರವಾದ ಪ್ರವೇಶದ್ವಾರಗಳು ನಿಮ್ಮನ್ನು ಸ್ವಾಗತಿಸುತ್ತವೆ. ದ್ವಾರದ ಅಕ್ಕಪಕ್ಕದ ಗೋಡೆಗಳ ಮೇಲಿನ ನಾಟ್ಯಶಿವ, ಭೈರವನ ಮೂರ್ತಿಗಳು ಹಾಗೂ ಗಣಪತಿಯೇ ಮೊದಲಾದ ಶಿವನ ಪರಿವಾರದವರ ಶಿಲ್ಪಗಳ ಕೆತ್ತನೆ ಅತ್ಯಾಕರ್ಷಕವಾಗಿದೆ..”

Read More

ಬಿನ್ನಮಂಗಲದ ಮುಕ್ತೇಶ್ವರ ದೇಗುಲ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ರಾಮಾನುಜಾಚಾರ್ಯರ ವಿರುದ್ಧ ದ್ವೇಷ ಸಾಧಿಸಿ, ವೈಷ್ಣವ ವಿರೋಧಿಗಳೆಂಬ ಅಪಖ್ಯಾತಿಗೆ ಗುರಿಯಾದ ಚೋಳರು ಈ ಅಪವಾದದಿಂದ ಪಾರಾಗುವ ಸಲುವಾಗಿ ತಮ್ಮ ಕಾಲದ ಹಲವು ದೇಗುಲನಿರ್ಮಿತಿಗಳಲ್ಲಿ ವಿಷ್ಣುವಿನ ರೂಪಗಳಿಗೂ ಸ್ಥಾನ ಕಲ್ಪಿಸುವ ಉದ್ದೇಶ ಹೊಂದಿದ್ದಂತೆ ತೋರುತ್ತದೆ. ಈ ಉದ್ದೇಶಕ್ಕೆ ತಕ್ಕಂತೆಯೇ ಬಿನ್ನಮಂಗಲದ ದೇವಾಲಯ ರೂಪುಗೊಂಡಿರುವುದನ್ನು ಕಾಣಬಹುದು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ