Advertisement

Category: ಅಂಕಣ

ಜೋಡಿಯ ಜೊತೆ, ಪ್ರಧಾನಿಯ ಮದುವೆ: ವಿನತೆ ಶರ್ಮ ಅಂಕಣ

ನಮಗೆ ಗೊತ್ತಿರುವ ಹೊಸ ಆಸ್ಟ್ರೇಲಿಯಾದ ಉಧ್ಭವ ಮತ್ತು ಬೆಳೆದಿದ್ದು ಅದೆಷ್ಟು ವಿವಾದಗಳನ್ನೊಳಗೊಂಡಿತ್ತು, ಎಂದು ಒತ್ತಿ ಹೇಳುತ್ತದೆ. ಆಸ್ಟ್ರೇಲಿಯಾದ ಬಗ್ಗೆ ಈಗಲೂ ಇರುವ ಸುಳ್ಳುಪೊರೆಗಳನ್ನು ಛೇದಿಸುತ್ತಾ ಕಾರ್ಯಕ್ರಮವು ವೀಕ್ಷಕರ ಮುಂದೆ ಅನೇಕ ಸಾಕ್ಷ್ಯಗಳನ್ನು ಇಡುತ್ತದೆ. ಹಿಂದಿನ ರಾಜಕೀಯ ನಾಯಕರು, ಪ್ರಮುಖ ಸರ್ಕಾರಿ ಅಧಿಕಾರಿಗಳು, ಚರಿತ್ರೆ-ದಾಖಲೆಗಳನ್ನು ಅಭ್ಯಸಿಸುವ ನಿಪುಣರು, ಅಬೊರಿಜಿನಲ್ ಆಸ್ಟ್ರೇಲಿಯನ್ ವಿದ್ವಾಂಸರು ಮತ್ತು ಹಿರಿಯರು ಎಂಬಂತೆ ನೂರಾರು ಜನರನ್ನು ಸಂದರ್ಶಿಸಿ ಅವರ ದೃಷ್ಟಿಕೋನಗಳನ್ನು ತೋರಿಸಿದ ಈ ಸರಣಿ ಡಾಕ್ಯುಮೆಂಟರಿ ಬಹಳ ಉಪಯುಕ್ತವಾಗಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

 ಬದಲಾಗಿದೆ ಕನ್ನಡ ನಾಡು, ಡಿಜಿಟಲ್ ಕರ್ನಾಟಕದ ಹಾಡು ಪಾಡು: ಎಲ್.ಜಿ.ಮೀರಾ ಅಂಕಣ

ಇಪ್ಪತ್ತೊಂದನೇ ಶತಮಾನದ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ಎಲ್ಲ ನಾಡುಗಳಂತೆ ನಮ್ಮ ಕನ್ನಡ ನಾಡು ಸಹ ಬದಲಾಗುತ್ತಿದೆ. ನಮಗೆ ಬೇಕೋ ಬೇಡವೊ ನಮಗೆ ಪರಿಚಿತವಾಗಿದ್ದ ಬದುಕಿನ ಲಯಗಳು ನಿಧಾನವಾಗಿ ಮರೆಯಾಗುತ್ತಾ, ಅಪರಿಚಿತ, ನೂತನ ಲಯಗಳು ನಮ್ಮ ದಾರಿಯಲ್ಲಿ ಪ್ರತ್ಯಕ್ಷವಾಗುತ್ತಿವೆ. `ಅಯ್ಯೋ, ಹೇಗಿದ್ದದ್ದು ಹೇಗಾಯ್ತಪ್ಪ! ಎಲ್ಲ ಹಾಳಾಗಿ ಹೋಯಿತಲ್ಲ! ಮನುಷ್ಯ ಪ್ರಪಂಚ ಇನ್ನು ಮುಳುಗಿ ಹೋಗುತ್ತೆ! ಪ್ರಳಯವಾಗುತ್ತೆ!!’ ಎಂದು ಗೋಳಾಡುತ್ತಾ ಕೂರುವುದು ವಿವೇಕದ ಆಯ್ಕೆಯಲ್ಲ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತೆರಡನೆಯ ಬರಹ

Read More

ಮಳೆ, ನೆನಪು ಮತ್ತು ಸಂಬಂಧ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಯಾವುದೂ ಕಳೆದು ಹೋಗದ ಹೊರತಾಗಿ ಅದರ ಮೌಲ್ಯ ನಮಗೆ ಗೊತ್ತಾಗುವುದಿಲ್ಲ ಅನ್ನುವುದೇ ಈ ಬದುಕಿನ ಅತಿದೊಡ್ಡ ವಿಪರ್ಯಾಸ. ಪ್ರತೀ ಕ್ಷಣವನ್ನೂ ಉತ್ಕಟವಾಗಿ ಜೀವಿಸಬೇಕು ಅಂದುಕೊಳ್ಳುವ ಒಂದು ಫಿಲಾಸಫಿ ಶುರು ಆಗುವುದೇ ಈ ಕಳೆದುಹೋದ ಫೀಲ್ ಬಂದ ನಂತರವೇ. ಅಷ್ಟರಲ್ಲಾಗಲೇ ನಮ್ಮ ಅರ್ಧ ಆಯುಷ್ಯ ಮುಗಿದುಹೋಗಿರುತ್ತದೆ. ಇನ್ನು ದಿನಗಳು ಕಮ್ಮಿ ಅನ್ನುವ ಅರಿವಾಗುವಾಗ ಈ ಪ್ರತೀಕ್ಷಣವನ್ನೂ ಉತ್ಕಟವಾಗಿ ಬದುಕುವ ಆಸೆಯೊಂದು ಹುಟ್ಟಿಕೊಳ್ಳುತ್ತದೆ. ಆದರೆ ಹಾಗೆ ಬದುಕುತ್ತೇವಾ? ಹೇರಿಕೊಂಡ ಜವಾಬ್ದಾರಿಯ ಮೂಟೆಗಳನ್ನು ಇಳಿಸಿ ಹಗುರ ಆಗುವುದು ಸಾಧ್ಯನಾ?
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಮೂರನೆಯ ಬರಹ

Read More

ಆಧ್ಯಾತ್ಮಿಕ ಶಿಬಿರ-ಮಹಿಳೆಯರಿಗೆ: ಸುಕನ್ಯಾ ಕನಾರಳ್ಳಿ ಅಂಕಣ

ನಾನು ನೋಡಿದ್ದ ಒಂದು ಅದ್ಭುತ ತಾಳಮದ್ದಳೆ ನೆನಪಿಗೆ ಬಂತು. ಕೃಷ್ಣ ತಾನು ಸಂಧಾನಕ್ಕೆ ಹೋಗುವ ಮುನ್ನ ದ್ರೌಪದಿಯನ್ನು ಭೇಟಿ ಮಾಡುತ್ತಾನೆ. ತುಂಬಿದ ಸಭೆಯಲ್ಲಿ ತನಗೆ ಆದ ಅವಮಾನದ ಗತಿ ಏನು? ಬಿಚ್ಚಿದ ಮುಡಿಯ ಗತಿಯೇನು? ಈಗ ಆ ಗಂಡ ಧರ್ಮರಾಜ ನಿನ್ನನ್ನ ಸಂಧಾನಕ್ಕೆ ಕಳುಹಿಸುತ್ತಿದ್ದಾನೆ. ಯಾಕೆಂದರೆ ಅದು ಕೇವಲ ಹೆಣ್ಣಿಗಾದ ಅವಮಾನ ಅಲ್ಲವಾ ಕೃಷ್ಣ? ನೀನೂ ಆರಾಣೆ ಗಂಡಸಾಗಿಬಿಟ್ಟೆಯಾ? ಎಂದು ಚುಚ್ಚಿ ಕೇಳುತ್ತಾಳೆ. ಸುಮಾರು ಒಂದು ಗಂಟೆ ಅವರ ನಡುವೆ ಸಂವಾದ ನಡೆಯುತ್ತದೆ. ಅವರ ನಡುವಿನ ಆತ್ಮೀಯ ಸಲಿಗೆ, ಒಬ್ಬರಿಗೊಬ್ಬರು ಸ್ಪಂದಿಸುವ ರೀತಿ, ಚತುರ ಸಂಭಾಷಣೆಗಳನ್ನು ಬಿಟ್ಟ ಬಾಯಿ ಬಿಟ್ಟಂತೆಯೇ ನೋಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕಾಫಿ ಮತ್ತು ಕಾಫಿರರ ಕಥೆ!: ದರ್ಶನ್‌ ಜಯಣ್ಣ ಸರಣಿ

ಕ್ರಿಶ್ಚಿಯನ್ ದೇಶವಾದ ಇಥಿಯೋಪಿಯಾದಲ್ಲಿ ಕಾಫಿ ಉಗಮವಾದರೂ ಅದು ಪ್ರವರ್ಧಮಾನಕ್ಕೆ ಬಂದದ್ದು ಇಂದಿನ ಕಾಫಿಯಾಗಿ ರೂಪುಗೊಂಡಿದ್ದು ಮಾತ್ರ ಇಸ್ಲಾಮಿಕ್ ದೇಶಗಳಲ್ಲಿ ಅಂದರೆ ದಕ್ಷಿಣ ಅರೇಬಿಯಾ ಇಂದಿನ ಯೆಮೆನ್, ಸೌದಿಯ ದಕ್ಷಿಣನ ಅಭಾ ಪ್ರಾಂತ್ಯಗಳಲ್ಲಿ. ಒಟ್ಟೋಮನ್ ಸುಲ್ತಾನ ಕಾಫಿಯ ಶಕ್ತಿಯನ್ನು ಬಲ್ಲವನು ಈ ಬೀಜಗಳನ್ನು ರಫ್ತು ಮಾಡಬೇಕಾದರೆ ಹುರಿದೇ ಮಾಡಬೇಕೆಂಬ ಗಟ್ಟಿ ಫರ್ಮಾನು ಹೊರಡಿಸಿದ್ದ ಮತ್ತದು ಶತಮಾನಗಳ ಕಾಲ ಚಾಲ್ತಿಯಲ್ಲಿತ್ತು. ಇದಕ್ಕೆ ಕಾರಣ ಕಾಫಿ ಬೇರೆಲ್ಲೂ ಬೆಳೆಯಲು ಆಗಬಾರದು ಎಂಬ ಆಲೋಚನೆ.
ದರ್ಶನ್‌ ಜಯಣ್ಣ ಬರೆಯುವ “ಸೌದಿ ಡೇಟ್ಸ್”‌ ಸರಣಿಯ ಹನ್ನೆರಡನೆಯ ಕಂತು

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ