Advertisement

Category: ಸಂಪಿಗೆ ಸ್ಪೆಷಲ್

ಮುದ್ದೆಯಾದ ಕಾಗದ!

ಮರುದಿನ ಅಜ್ಜಿಯ ಆರೋಗ್ಯ ಮತ್ತಷ್ಟು ಹದೆಗೆಟ್ಟಿತು. ಅವಳಿಗೆ ಎದ್ದು ತಿರುಗಾಡಲು ಆಗಲಿಲ್ಲ. ಮಲಗಿದ್ದಲ್ಲೇ ಮಲಗಿ ಒಂದೇ ಸವನೆ ನರಳತೊಡಗಿದಳು. ಆಗಲೂ ಅಮ್ಮನ ಮನಸ್ಸು ಕರಗಲಿಲ್ಲ. ಊಟ ತಿಂಡಿಯೂ ಹಾಕಲಿಲ್ಲ. ಇವಳಿಗೆ ಮನೆಯಲ್ಲಿಟ್ಟುಕೊಂಡರೆ ನಮಗೂ ರೋಗ ಬರಬಹುದು ಅಂತ ಯೋಚಿಸಿ ಮನೆಯ ಅಂಗಳದಲ್ಲಿ ಮಲಗಲು ಖಡಕ್ಕಾಗಿ ಸೂಚಿಸಿ ಅವಳ ಹಾಸಿಗೆ ಹೊಚ್ಚಿಗೆ ತಾಟು ತಂಬಿಗೆ ಎಲ್ಲವೂ ಬೇರ್ಪಡಿಸಿ ಕೈ ತೊಳೆದುಕೊಂಡಳು. ಈ ಎಲ್ಲ ದೃಶ್ಯಾವಳಿ ನೋಡಿ ರಾಜೂನ ದುಃಖ ಉಕ್ಕಿ ಬಂದಿತು. ಮಲ್ಲಿಕಾಳ ಕರುಳು ಹಿಂಡಿದಂತಾಯಿತು.
ಶರಣಗೌಡ ಬಿ ಪಾಟೀಲ ತಿಳಗೂಳ ಪ್ರಬಂಧ

Read More

ನೆನಪಿನ ಮಳೆ ಹನಿಗಳು…

ಬದುಕು ಎಲ್ಲವನ್ನು ಮರೆಸುತ್ತದೆ ನೆನಪಿಸುತ್ತದೆ ಕೂಡ. ಭೂಮಿ ಗುಂಡಾಗಿದೆ ಅಲ್ಲವೇ. ತಿರುಗುವ ಭೂಮಿಯಲ್ಲಿ ಒಬ್ಬರಿಗೊಬ್ಬರು ಸಂದಿಸಲೇಬೇಕು. ನಮ್ಮಿಬ್ಬರ ಬೇಟಿಯಾಗಿ ಎರಡು ವರ್ಷಗಳು ಕಳೆದಿರಬೇಕು ಆಕಸ್ಮಿಕವಾಗಿ ಬಸ್ಸಿನಲ್ಲಿ ಸಿಕ್ಕಾಗ ಇಬ್ಬರು ಒಬ್ಬರಿಗೊಬ್ಬರು ನೋಡಿದರೂ ನೋಡಿಲ್ಲವೆಂಬಂತೆ ದೃಷ್ಟಿ ಬದಲಿಸಿದ್ದು ಬದುಕಿನಲ್ಲಿ ಹೀಗೂ ನಡೆಯಬಹುದು ಅನ್ನಿಸಿದ್ದು ನಿಜ. ನನ್ನೊಳಗಿನ ಮನಸ್ಸು ಯೋಚನೆಯಲ್ಲಿ ಮುಳುಗಿತ್ತು ಇಬ್ಬರಲ್ಲೂ ಗುರುತು ಸಿಗಲಾರದಷ್ಟು ಬದಲಾವಣೆಗಳೇನು ಆಗಿರಲಿಲ್ಲ.
ಮಾರುತಿ ಗೋಪಿಕುಂಟೆ ಬರಹ

Read More

ಮಗಳು ಇಂದಿರಾಗೆ ನೆಹರೂ ಬರೆದ ಮೂರು ಪತ್ರಗಳು

ನಗರಗಳು ಬೆಳೆಯುತ್ತಾ ಹೋದಂತೆ, ಪಟ್ಟಣಗಳು ಮತ್ತು ದೇಶಗಳು ರೂಪುಗೊಳ್ಳತೊಡಗಿದವು. ಒಂದೇ ದೇಶದಲ್ಲಿ ಹತ್ತಿರ ವಾಸಿಸುವ ಜನರು ಪರಸ್ಪರರನ್ನು ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳತೊಡಗಿದರು. ಅವರು ತಮ್ಮಿಂದ ದೂರದಲ್ಲಿ ಬೇರೆ ದೇಶಗಳಲ್ಲಿ ವಾಸಿಸುವ ಜನರಿಗಿಂತ ತಾವೇ ಶ್ರೇಷ್ಟರು ಎಂದು ಯೋಚಿಸತೊಡಗಿದರು. ಜವಾಹರಲಾಲ್‌ ನೆಹರೂ ತಮ್ಮ ಮಗಳು ಇಂದಿರಾಗಾಂಧಿಗೆ ಬರೆದಿದ್ದ ಪತ್ರಗಳನ್ನು ಸುಧಾ ಆಡುಕಳ ಕನ್ನಡಕ್ಕೆ ಅನುವಾದಿಸಿದ್ದು, ಮಕ್ಕಳ ದಿನಾಚರಣೆಯ ಈ ದಿನ ಅವುಗಳಲ್ಲಿನ ಮೂರು ಪತ್ರಗಳು ನಿಮ್ಮ ಓದಿಗೆ ಇಲ್ಲಿವೆ…

Read More

ಕನಕದಾಸರು ಕಟ್ಟಿದ ‘ಕಲ್ಯಾಣ’

ಗುಣ ಕರ್ಮಕ್ಕೆ ಅನುಸಾರಿಯಾಗಿ ವರ್ಣ ಸೃಷ್ಟಿಯಾಗಿದೆ ಅನ್ನುತ್ತದೆ ಭಗವದ್ಗೀತೆ. ಆದರೆ ಇಲ್ಲಿ ಗುಣ ಕರ್ಮ ಹುಟ್ಟುವ ಮೊದಲೇ ನಿಶ್ಚಯವಾಗಿರುತ್ತದೆ, ಎಂಬುದನ್ನು ಕಾಣಿಸಿಕೊಟ್ಟ ವಚನ ಚಳುವಳಿ ಇದಕ್ಕೊಂದು ಹೊಸ ಭಾಷ್ಯ ಬರೆಯಿತು. ‘ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ’ ಎನ್ನುತ್ತ ಜಾತಿ ಸಾಂಸ್ಥಿಕತೆಗೆ ಪ್ರತಿಭಟನೆ ತೋರಿತು. ‘ಉಳ್ಳವರು ಶಿವಾಲಯ ಮಾಡುವರು’ ಎನ್ನುತ್ತ ಸಾಂಸ್ಕೃತಿಕ ರೂಪದ ಪ್ರತಿಭಟನೆಯನ್ನೂ ರೂಪಿಸಿತು. ‘ಕೊಲುವವನೆ ಮಾದಿಗ’ ಎನ್ನುತ್ತ ಪಂಪನಕಾಲದ ಕುಲದ ಮರು ವ್ಯಾಖ್ಯಾನವನ್ನು ಮುಂದುವರಿಸಿತು.
ಕನಕ ಜಯಂತಿಯಂದು ಡಾ. ಶ್ರೀಪಾದ ಭಟ್ ಬರಹ

Read More

ನಡುಗನ್ನಡ ಕಾಲದ ಶತಕ ಸಾಹಿತ್ಯ ಸಮೀಕ್ಷೆ

ಶತಕಸಾಹಿತ್ಯವು ಪ್ರಾಕೃತ ಸಾಹಿತ್ಯದಲ್ಲಿ ಉದಯಗೊಂಡು ಸಂಸ್ಕೃತ ಸಾಹಿತ್ಯದಲ್ಲಿ ಸರ್ವತೋಮುಖವಾಗಿ ಬೆಳೆದು ದ್ರಾವಿಡ ಭಾಷೆಗಳಲ್ಲಿ ತನ್ನ ತಣಿಯಾದ ಫಲಗಳನ್ನು ನೀಡಿದೆ. ಸಂಸ್ಕೃತ ಶತಕಗಳ ಪ್ರೇರಣೆಯಿಂದ ಉಭಯಭಾಷಾವಿಶಾರದರಾದ ಕನ್ನಡದ ಅನೇಕ ಮಹಾಕವಿಗಳು ಶತಕಗಳನ್ನು ಬರೆದು ಇದಕ್ಕೊಂದು ಮೆರುಗು ಕೊಟ್ಟಿದ್ದಾರೆ. ಸಂಸ್ಕೃತ ಸಾಹಿತ್ಯದಲ್ಲಿ ಶತಕಗಳು ಕೇವಲ ವೃತ್ತ ರೂಪದಲ್ಲಿ ಕಾಣಿಸಿಕೊಂಡಿವೆ.
ನಡುಗನ್ನಡ ಕಾಲದ ಶತಕ ಸಾಹಿತ್ಯದ ಕುರಿತು ಡಾ. ರಾಜಶೇಖರ ಜಮದಂಡಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ