Advertisement

Category: ಸಂಪಿಗೆ ಸ್ಪೆಷಲ್

ಬದುಕಿನ ಪಲಕುಗಳನ್ನು ಹಾಡಾಗಿಸಿದ ಕವಿ: ಶಿವ ಹಿತ್ತಲಮನಿ ಬರಹ

ಸಂಸಾರದ ಏರಳಿತದ ನೋವು ನಲಿವುಗಳ ಗಳಿಗೆಗಳನ್ನು ವಿವರವಾಗಿ ಹೇಳದೆಯೇ ಎಲ್ಲವನ್ನೂ ಅದೆಷ್ಟು ಸೂಕ್ಷ್ಮವಾಗಿ ತೆರೆದಿಟ್ಟರು ಹೆಚ್.ಎಸ್.ವಿ… ಸಮಯ ಹೋದಂತೆ ಸಂಸಾರ ಬೆಳೆದು, ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳಿಟ್ಟು ಮನೆ ತುಂಬಾ ಓಡಾಡಿ ತುಂಟಾಟ ಮಾಡುವಾಗ ಕವನ ಕಟ್ಟಿಕೊಟ್ಟಿದ್ದು ಮತ್ತೆ ಹೆಚ್.ಎಸ್.ವಿ.
ಎಚ್.‌ ಎಸ್.‌ ವೆಂಕಟೇಶಮೂರ್ತಿಯವರ ಕವಿತೆಗಳು ಹೇಗೆ ಬದುಕಿನ ಬೇರೆಬೇರೆ ಘಟ್ಟಗಳ ಕನ್ನಡಿಯಾಗಿದ್ದವು ಎಂಬುದರ ಕುರಿತು ಶಿವ ಹಿತ್ತಲಮನಿ ಬರಹ ನಿಮ್ಮ ಓದಿಗೆ

Read More

ನನ್ನಜ್ಜಿ ಬದುಕಿರುವುದು ಅವಳ ಹಾಡುಗಳಲ್ಲಿ: ಅನನ್ಯ ತುಷಿರಾ ಬರಹ

ಎಷ್ಟೋ ಬಾರಿ ಸಣ್ಣ ಪುಟ್ಟ ಸಂಗತಿಗಳಿಗೆ ಸೋತು ಹೋದಂತಾಗುತ್ತದೆ. ಏರಿ ನಿಂತ ಎತ್ತರ ಸುಲಭಕ್ಕೆ ದಕ್ಕಿಲ್ಲವಾದರೂ ನಿಭಾಯಿಸುವಲ್ಲಿ ಅಲುಗಾಡಿದಂತಾಗುತ್ತದೆ. ಅಂಥ ಸಂದರ್ಭದಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ಬೆಳಕು ಕಾಣುವುದು ನನ್ನಜ್ಜಿಯ ಬದುಕಿನಿಂದ. ಅವಳ ಹಾಡುಗಳಿಂದ. ಬದುಕು ಕಟ್ಟುವ ಹೊತ್ತಿಗೆ ಸಂಗಾತಿಯ ಸಾವು ಕಂಡೂ ಕೂಡ ಬದುಕ ಹಾಡು ಕಟ್ಟಿದವಳು ನನ್ನಜ್ಜಿ. ‘ನನ್ನಜ್ಜಿಯ ಜೀವನವನ್ನೂ, ಜನಪದ ಹಾಡುಗಳನ್ನೂ ಬಿಡಿಸಿ ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ ನನ್ನಿಂದ’ ಎನ್ನುವಷ್ಟು ಆ ಪದಗಳು ಅವಳ ಹಾದಿಯಲ್ಲಿ ಬೆರೆತು ಹೋಗಿವೆ.
ಅನನ್ಯ ತುಷಿರಾ ಬರಹ ನಿಮ್ಮ ಓದಿಗೆ

Read More

ಊರು ಕೇರಿ ಬಿಟ್ಟು ಬಂದು…: ಶುಭಶ್ರೀ ಭಟ್ಟ ಬರಹ

ತುಸುವೂ ಪರಿಚಯವೇ ಇಲ್ಲದ ಹೊಸ ಬೀದಿಯ ಅಪರಿಚಿತ ಸದ್ದಿಗೆ, ಆ ರಾತ್ರಿಯ ನೀರವತೆಗೆ, ಪರಿಮಳವಿಲ್ಲದ ಹಗಲಿಗೆ, ನಮ್ಮವರೇ ಕಾಣಿಸದ ಆಗಂತುಕ ರಸ್ತೆಯ ಚಲನೆಗೆ ವಿನಾಕಾರಣ ನಿಟ್ಟುಸಿರು ಉಮ್ಮಳಿಸಿ ಬರುತ್ತಿತ್ತು. ಅಡುಗೆ ಮನೆಯ ಬಿಡುವಿಲ್ಲದ ಕೆಲಸ, ಮಾಡಲೇ ಬೇಕಾದ ಕೆಲವು ಮನೆ ಕೆಲಸ, ಆಫೀಸಿನ ಹೊಸ ಪ್ರಾಜೆಕ್ಟಿನ ಶೆಡ್ಯೂಲ್, ಮಗನನ್ನು ಹೊಸ ಶಾಲೆಗೆ ರೂಢಿ ಮಾಡಿಸಬೇಕಾದ ಅಗತ್ಯ, ಬಿಡಲಾರದ ಬರವಣಿಗೆ-ಓದು ಹೀಗೆ ದಿನದ ಅರೆ ಕ್ಷಣವನ್ನೂ ವ್ಯಯಿಸದೆ ಎಲ್ಲವನ್ನೂ ನಿಭಾಯಿಸುತ್ತಾ ದಿನ ಕಳೆಯುತ್ತಿತ್ತು. ಆದರೂ ಕೆಲವೊಮ್ಮೆ ಸಂಜೆಯಾಗುವಷ್ಟರಲ್ಲಿ ಖಾಲಿತನ ಆವರಿಸಿಕೊಳ್ಳುತ್ತಿತ್ತು.
ಮಹಾನಗರದ ಭಾಗವಾಗಿ ವಾಸಿಸುವ ಅನುಭವದ ಕುರಿತು ಶುಭಶ್ರೀ ಭಟ್ಟ ಬರಹ ನಿಮ್ಮ ಓದಿಗೆ

Read More

ಹುಬ್ಬಳ್ಳಿಗರ ಇಂಗ್ಲೀಷ್ ವ್ಯಾಮೋಹ: ರೂಪಾ ಜೋಶಿ ಬರೆದ ಲಲಿತ ಪ್ರಬಂಧ

ಇಲ್ಲಿಯ ಭಾಷೆಯಲ್ಲಿ ಎಲ್ಲರಿಗೂ “ರೀ”…. ಎಂಬ ಅಕ್ಷರ ಹಚ್ಚಿಯೇ ಮಾತಾಡುವ ರೂಢಿಯಿದೆ. ಅಪ್ಪಾರು, ಅವ್ವಾರು, ಅಕ್ಕಾರು, ಮಾಮಾರು, ಅಣ್ಣಾರು, ಅಜ್ಜಾರು ಹೀಗೇ. ಎಲ್ಲರನ್ನೂ ಬಹುವಚನದಲ್ಲೇ ಹೆಸರಿಸುವ ಈ ಪದ್ಧತಿ ನಿಜಕ್ಕೂ ಒಳ್ಳೆಯದೇ. ಅದೇ ಕಾರಣಕ್ಕೆ ಆಂಗ್ಲ ಪದ ಬಳಕೆ ಮಾಡಿದಾಗಲೂ ಅವರು ಅದಕ್ಕೆ ಕನ್ನಡದ ‘ರೀ’ ಮತ್ತೂ ‘ರು’ ಪದ ಹಚ್ಚಿ, ” ಮೇಡಮ್ರಿ, ಸರ್ರೀ, ಮಮ್ಮೀರೀ…. ಡ್ಯಾಡಿರೀ, ಅಜ್ಜಾರ್ರೀ, ಅಂಕಲ್ರೀ ಅಂತ ರೂಪಾಂತರಿಸಿ, ಅದು ನಮ್ಮ ಕನ್ನಡದ್ದೇ ಅನ್ನುವಷ್ಟು ಸಲೀಸಾಗಿ ಬಳಸುವುದನ್ನು ನೋಡಿ, ನನಗೆ ಮೊದ ಮೊದಲು ತುಂಬಾ ವಿಸ್ಮಯವೆನ್ನಿಸುತ್ತಿತ್ತು.
ರೂಪಾ ರವೀಂದ್ರ ಜೋಷಿ ಬರೆದ ಪ್ರಬಂಧ

Read More

ಪಿತೃಪ್ರಧಾನತ್ವದ ಗೋಚರ-ಅಗೋಚರ ಹೊರೆಗಳು: ನಮ್ರತಾ ಪೊದ್ದಾರ್ ಬರಹ

ಪಿತೃಪ್ರಧಾನ ವ್ಯವಸ್ಥೆಯಿಂದ ಮಹಿಳೆಯರಿಗೆ ಹಾನಿಯಾಗುವಂತೆಯೇ ಪುರುಷರೂ ಇದರ ಹೊರೆಯನ್ನು ಅನುಭವಿಸುತ್ತಾರೆ. ಇಂದಿಗೂ ಕೂಡ ಹುಡುಗರು ಅಥವಾ ಪುರುಷರೆಂದರೆ ಭಾವನಾತ್ಮಕವಾಗಿ ಗಟ್ಟಿಯಾಗಿರಬೇಕು; ಭಾವನಾಜೀವಿಯಾಗುವುದು ಅಥವಾ ಬಹಿರಂಗವಾಗಿ ಅಳುವುದು ಇವೆಲ್ಲಾ ದೌರ್ಬಲ್ಯದ ಲಕ್ಷಣಗಳು ಎಂದೇ ಭಾವಿಸಲಾಗುತ್ತದೆ. ಇಂದು ಅನೇಕ ಹುಡುಗರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಹುಡುಗ ಎಂದರೆ ಅಷ್ಟೇ ದುಡಿಯಬೇಕು; ಇಷ್ಟೇ ದುಡಿಯಬೇಕು ಎನ್ನುವ ಅವಾಸ್ತವಿಕ ನಿರೀಕ್ಷೆಗಳನ್ನು ಪೋಷಿಸಿ ಮದುವೆಯನ್ನೇ ವ್ಯಾಪಾರದ ಸರಕನ್ನಾಗಿ ಪರಿವರ್ತಿಸಿರುವುದು ಪಿತೃಪ್ರಧಾನ ವ್ಯವಸ್ಥೆಯ ಚಿಂತನೆಯೇ!
ಮಹಿಳೆ ಮತ್ತು ಪುರುಷರ ಮೇಲಾಗುವ ಪಿತೃಪ್ರಧಾನ ವ್ಯವಸ್ಥೆಯ ಹೊರೆಗಳ ಕುರಿತು ನಮ್ರತಾ ಪೊದ್ದಾರ್‌ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ