Advertisement

Category: ಸರಣಿ

ಐಕ್ಯಗಾನ ಮೊಳಗಿಸಿದ, ಜನಪರ ಕವಿ ಕಯ್ಯಾರ ಕಿಞ್ಞಣ್ಣ ರೈ

1933 ರ ಹೊತ್ತಿಗಾಗಲೇ ಹದಿನೆಂಟರ ಯುವಕ ಕಯ್ಯಾರರು ಒಳ್ಳೆಯ ಕವಿಯಾಗಿ ಗುರುತಿಸಿಕೊಂಡದ್ದಕ್ಕೆ ಒಂದು ಉದಾಹರಣೆ: ಪುತ್ತೂರಿನಲ್ಲಿ ಕಾರಂತರು ನಡೆಸುತ್ತಿದ್ದ ನಾಡಹಬ್ಬದಲ್ಲಿ ಬೇಂದ್ರೆಯವರ ಅಧ್ಯಕ್ಷತೆಯ ಕವಿಗೋಷ್ಠಿಯಲ್ಲಿ ಅವರು ‘ಊರ್ಮಿಳಾ’ ಎಂಬ ಕವನ ಓದಿದರು. ಅದನ್ನು ಕೇಳಿದ ಬೇಂದ್ರೆಯವರು ಕಯ್ಯಾರ ಅವರಿಂದ ಇನ್ನೊಂದುಕವಿತೆಯನ್ನು ಓದಿಸಿದರು.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

Read More

ಭರಣಿ ಕೃತಿಕೆ ನಂಬಿದ ಅಪ್ಪ, ಪಡಿಪಾಟಲು ಅನುಭವಿಸಿದ ನಾನು

ಊರಿನಿಂದ ಬೆಳಿಗ್ಗೆ ಪ್ರಯಾಣಮಾಡಿ ಕಾಲೇಜಿನಲ್ಲಿ ಓಡಾಟ, ಹಾಸ್ಟೆಲ್ಲಿನ ಜಂಜಾಟ, ಎಲ್ಲಾ ಆಗುವಾಗ ಅಂದು ರಾತ್ರಿ ನನಗೆ ಬಂದದ್ದು ತಡೆಯಲಾರದ ತಲೆನೋವು. ಪರಿಚಯ ಇಲ್ಲದ ಜನ, ಗೊತ್ತಿಲ್ಲದ ಮನೆ.. ಇತ್ತ ತಲೆನೋವು ಜೋರಾಗಿ ವಾಂತಿ ಬರುತ್ತಿದೆ. ಯಾರಲ್ಲಿ ಹೇಳಿಕೊಳ್ಳುವುದು ನನ್ನ ಪರಿಸ್ಥಿತಿ. ಬಾತ್ರೂಮಿನಲ್ಲಿ ಹೋಗಿ ವಾಂತಿ ಮಾಡುತ್ತಿದ್ದ ನನ್ನನ್ನು ಕಂಡ ದೊಡ್ಡಗೌಡ್ರು ಕೂಡಲೇ ಬಂದು ನನ್ನ ತಲೆಯನ್ನು ಹಿಡಿದುಕೊಂಡರು. ಸ್ವಲ್ಪ ಹೊತ್ತಿಗೆ ವಾಂತಿ ಆಗಿ ತಲೆನೋವು ಸ್ವಲ್ಪ ಕಡಿಮೆಯಾದಂತೆ ಅನ್ನಿಸಿತು. ಪಾಪದ ಜನ ಅವರು.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

Read More

ಸ್ನೇಹದ ದೋಣಿಯಲಿ ಆನೆಗಳ ನೆನಪಿನ ಪಯಣ

ಜೆನ್ನಿ ಮತ್ತು ಷರ್ಲಿ ಒಂದೇ ಲಾಯದಲ್ಲಿದ್ದರೂ, ಅಕ್ಕ-ಪಕ್ಕದ ಸ್ಟಾಲ್‌ಗಳಲ್ಲಿ ಇರಲಿಲ್ಲ. ಮಧ್ಯದಲ್ಲಿ ಕಬ್ಬಿಣದ ಗೇಟುಗಳು ಇದ್ದವು. ಜೆನ್ನಿಯ ಚಡಪಡಿಕೆಯನ್ನು ಕೇಳಿದ ಷರ್ಲಿ ತಾನೂ ಚಡಪಡಿಸತೊಡಗಿದಳು. ತಮ್ಮ ಸ್ಟಾಲ್‌ಗಳ ನಡುವೆ ಇದ್ದ ಗೇಟುಗಳ ಸಂದಿಗಳ ಮೂಲಕ ತಮ್ಮ ಸೊಂಡಿಲುಗಳನ್ನು ಚಾಚಿ ಹೇಗಾದರೂ ಮಾಡಿ ಒಂದನ್ನೊಂದು ಮುಟ್ಟಲು ಎರಡೂ ಆನೆಗಳು ಪ್ರಯತ್ನ ಪಡಲಾರಂಭಿಸಿದವು. ಗೇಟುಗಳ ತಳ್ಳುವಿಕೆ, ಜೋರಾದ ಘರ್ಜನೆ-ಘೀಳಿಡುವಿಕೆಗಳೂ ಪ್ರಾರಂಭವಾದವು.

Read More

ಅಲ್ಲೀಬಾದಿಯ ಋಣ ತೀರಿತು

ಹಳ್ಳಿಯ ಹೆಣ್ಣುಮಕ್ಕಳು ಗಂಡಸರಿಗಿಂತ ಹೆಚ್ಚಿಗೆ ದುಡಿಯುತ್ತಿದ್ದರು. ಅವರು ಹೊಲದ ಕೆಲಸದ ಜೊತೆ ಮನೆಯ ಕೆಲಸವನ್ನೂ ಮಾಡಬೇಕಾಗಿತ್ತು. ತುರಿಸಿಕೊಳ್ಳಲೂ ಸಮಯವಿಲ್ಲದ ಬದುಕು ಅವರದು. ರಾತ್ರಿಯಲ್ಲಿ ಅವರು ಬೇರೆ ಹೆಂಗಸರ ಜೊತೆಗೂಡಿ ಬಯಲುಕಡೆಗೆ ಹೊರಟಾಗ ಮಾತ್ರ ಊರ ಸುದ್ದಿ ಮಾಡನಾಡಲು ಅವಕಾಶ ಸಿಗುತ್ತಿತ್ತು! ಜೊತೆಗೂಡಿ ಗುಡಿಗೆ ಇಲ್ಲವೆ ದರ್ಗಾಕ್ಕೆ ಹೋಗುವುದು ಅವರ ಖಾಸಗಿತನಕ್ಕೆ ಪೂರಕವಾಗಿತ್ತು. ಮನೆಗೆ‘ಅರಿಷಿಣ ಕುಂಕುಮ’ ಕೊಡಲು ಹೋಗುವ ಸಂದರ್ಭದಲಿ ಅವರು ತಮ್ಮ ಓರಿಗೆಯ ಹೆಣ್ಣುಮಕ್ಕಳನ್ನು ಭೇಟಿಯಾಗುತ್ತಿದ್ದರು.
ರಂಜಾನ್ ದರ್ಗಾ ಬರೆಯುವ ಸರಣಿಯ ಎಂಟನೆಯ ಕಂತು.

Read More

ʻಲೋಕ ಸಿನಿಮಾ ಟಾಕೀಸ್‌ʼನಲ್ಲಿ ಫ್ರಾನ್ಸ್‌ ನ ʻಕ್ಯಾಶ್ʼ ಸಿನಿಮಾ

ಈ ಚಿತ್ರದ ಕಥಾಹಂದರ ನವೀನ ಮತ್ತು ಸಂಕೀರ್ಣ ಸ್ವರೂಪದ್ದು. ಪ್ಯಾರಿಸ್‌ನಲ್ಲಿ ಟಿವಿ ಕಂಪೆನಿಯಲ್ಲಿ ಸಾಹಿತ್ಯ ವಲಯದಲ್ಲಿನ ಪುಸ್ತಕಗಳನ್ನು ಕುರಿತಂತೆ ಕೆಲಸ ಮಾಡುವ ಜಾರ್ಜ್, ಪ್ರಕಾಶನ ಸಂಸ್ಥೆಯಲ್ಲಿ ಕೆಲಸ ಮಾಡುವ ಹೆಂಡತಿ ಆನ್‌ ಮತ್ತು ಮಗ ಫಿರಟ್ ಜತೆಗೂಡಿ ಮಧ್ಯಮ ದರ್ಜೆಯ ಮೇಲ್ವರ್ಗದ ಜೀವನ ನಡೆಸುತ್ತಿರುತ್ತಾನೆ. ಅವನಿಗೆ ಯಾರೋ ಗುಪ್ತವಾಗಿರಿಸಿದ ಕ್ಯಾಮೆರಾದಿಂದ ಅವನ ಮನೆ ಇತ್ಯಾದಿಯ ವಿಡಿಯೋ ಟೇಪುಗಳನ್ನು ಕಳಿಸುತ್ತಿರುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಫ್ರಾನ್ಸ್‌ ನ ʻಕ್ಯಾಶ್ʼ(ಹಿಡನ್‌) ಸಿನಿಮಾದ ವಿಶ್ಲೇಷಣೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ