Advertisement

Tag: ಓ ಎಲ್ ನಾಗಭೂಷಣ ಸ್ವಾಮಿ

ಅರಳುವ ಭಾವಲೋಕ: ದೀಪಾ ಗೋನಾಳ ಕವನ ಸಂಕಲನಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮಾತುಗಳು

ಪ್ರೇಮವೇ ಗೆಲುವುದು ಅನ್ನುವ ಶೀರ್ಷಿಕೆಯನ್ನೇ ನೋಡಿ. ಪ್ರೇಮ ಗೆಲ್ಲುವುದು ʻನಾನುʼ ನೋತಾಗ ಅಲ್ಲವೇ!. ಪ್ರೇಮ ಗೆದ್ದಿತು ಅನ್ನುವುದು ಬರಿಯ ಒಬ್ಬರ, ಪುಣ್ಯವಿದ್ದರೆ ಪಾಲ್ಗೊಂಡ ಇಬ್ಬರ ಮೈಮನಸುಗಳಿಗೆ ಮಾತ್ರ ಗೊತ್ತಿರುವ ಸಂಗತಿಯಾಗಬಹುದು, ಭಾಷೆಯನ್ನು ಬಲ್ಲ ಎಲ್ಲರಿಗೂ ಇದನ್ನು ಮನದಟ್ಟು ಮಾಡಿಸುವುದು ಎಷ್ಟು ಕಷ್ಟ. ಪ್ರೀತಿ ಶೃಂಗಾರದ ಬಯಕೆ, ತವಕ, ನೆನಪು, ಅವನ್ನೆಲ್ಲ ನುಡಿಯಾಗಿ ಕಾಣುವ ಹಂಬಲ ಇವೆಲ್ಲವೂ ಓದುಗರಲ್ಲೂ ಇರಬೇಕು. ಅಂದರೆ ಪ್ರೇಮವನ್ನು ಬಯಸುವ ಓದುಗ ಮನಸೂ ಬೇಕು.
ದೀಪಾ ಗೋನಾಳ ಕವನ ಸಂಕಲನ “ನಿನ್ನ ನೆನಪ ಕುಡಿದವಳು” ಕುರಿತು ಓ.ಎಲ್.‌ ನಾಗಭೂಷಣ ಸ್ವಾಮಿ ಬರಹ

Read More

‘ದಾರಿ ತಪ್ಪಿಸುವ ಗಿಡʼಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ.
ಕತೆಗಾರ ಸ್ವಾಮಿ ಪೊನ್ನಾಚಿ ಹೊಸ ಕಥಾ ಸಂಕಲನ “ದಾರಿ ತಪ್ಪಿಸುವ ಗಿಡ”ಕ್ಕೆ ಓ ಎಲ್‌ ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ

Read More

ಅಪರಾಧ ಮತ್ತು ಶಿಕ್ಷೆ: ಇದು ಯಾವ ಪಾಪಕ್ಕೆ…?

ಸಿಡಿಲು ಬಡಿದವಳ ಹಾಗೆ ಕ್ಯಾತರೀನ ಸುಮ್ಮನೆ ನಿಂತಳು. ಪೀಟರ್ ಪೆಟ್ರೊವಿಚ್ ಅದು ಹೇಗೆ ಉಪ್ಪಿನ ಋಣ ಮರೆಯಬಲ್ಲ ಅನ್ನುವುದು ಅರ್ಥವೇ ಆಗಲಿಲ್ಲ ಅವಳಿಗೆ. ನಮ್ಮಪ್ಪನ ಉಪ್ಪಿನ ಋಣ ಅವನಮೇಲಿದೆ ಎಂದು ಒಮ್ಮೆ ಕಲ್ಪನೆ ಮಾಡಿಕೊಂಡ ನಂತರ ಆ ಕಲ್ಪನೆಯನ್ನೇ ಅವಳು ನಿಷ್ಠೆಯಿಂದ ನಂಬಿಕೊಂಡಿದ್ದಳು. ಪೀಟರ್ ಪೆಟ್ರೊವಿಚ್‌ನ ಮಾತಿನ ದನಿಯೂ ಆಘಾತ ತಂದಿತ್ತು. ತೀರ ವ್ಯಾವಹಾರಿಕವಾದ, ನಿರ್ಭಾವವಾದ, ಭಯಹುಟ್ಟಿಸುವಂಥ ತಿರಸ್ಕಾರ ಅವನ ದನಿಯಲ್ಲಿತ್ತು.
. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

Read More

ಶ್ರೀಧರ ಬಳಗಾರ ಕಾದಂಬರಿಗೆ ಓ. ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

“ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು…”

Read More

ಕುಂವೀಯವರ “ನಿಜಲಿಂಗ” ಕಾದಂಬರಿಯ ಕುರಿತು ಓ.ಎಲ್.ನಾಗಭೂಷಣ ಸ್ವಾಮಿ

“ಓದುಗರು ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ