Advertisement

Tag: ಕೆ.ಆರ್.ಉಮಾದೇವಿ ಉರಾಳ

ಆರೋಗ್ಯಕ್ಕಾಗಿ “ಆರೋಗ್ಯ ದೀವಿಗೆ”…: ಕೆ.ಆರ್.ಉಮಾದೇವಿ ಉರಾಳ

. ಸಾಹಿತ್ಯಾಸಕ್ತೆ ವೈದ್ಯೆ ವಿನಯಾರಿಗೆ ಇರುವ ಭಾಷೆಯ ಮೇಲಿನ‌ ಹಿಡಿತದಿಂದಾಗಿ ವೈದ್ಯ ಸಾಹಿತ್ಯದ ಈ ಕೃತಿ ಸುಲಲಿತವಾದ ಭಾಷಾ ಪ್ರಯೋಗದಿಂದ ಆಹ್ಲಾದಕರವಾದ ಓದನ್ನು ಸಾಧ್ಯವಾಗಿಸಿದೆ. ಪ್ರತಿಯೊಂದು ಲೇಖನದಲ್ಲೂ ಆರೋಗ್ಯಕರ ಜೀವನ ರೂಪಿಸಿಕೊಳ್ಳಲು ವ್ಯಕ್ತಿ ಹೊಂದಿರಬೇಕಾದ ಮೂಲಭೂತವಾದ ವೈಜ್ಞಾನಿಕ ಅರಿವನ್ನು ಮೂಡಿಸಲು ಲೇಖಕಿ ಪ್ರಾಂಜಲ ಮನದಿಂದ ಯತ್ನಿಸಿದ್ದಾರೆ. ಇದಕ್ಕಾಗಿ ಅವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಎದುರಾಗುವ ಸಹಜ ಸನ್ನಿವೇಶಗಳನ್ನು ಬಳಸಿಕೊಂಡು ಸೋದಾಹರಣವಾಗಿ ವೈಜ್ಞಾನಿಕ ವಿಷಯಗಳನ್ನು ಆಪ್ತವಾಗಿ ಲೇಖನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಡಾ. ವಿನಯ ಶ್ರೀನಿವಾಸ್‌ ವೈದ್ಯಕೀಯ ಬರಹಗಳ ಕೃತಿ “ಆರೋಗ್ಯ ದೀವಿಗೆ” ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

Read More

ಮೌಲ್ಯಗಳನ್ನು ಎತ್ತಿ ಹಿಡಿವ ಕಾದಂಬರಿ: ಕೆ.ಆರ್.ಉಮಾದೇವಿ ಉರಾಳ ಬರಹ

ಕೌಟುಂಬಿಕ ಜೀವನದ ಮಹತ್ವ, ಇತರರನ್ನು ಕ್ಷಮಿಸುವಂತೆಯೇ ನಮ್ಮನ್ನೇ ನಾವು ಕ್ಷಮಿಸಿಕೊಳ್ಳುವುದರ ಮಹತ್ವವನ್ನು ಮನಗಾಣಿಸಿದರು, ಗುರುಗಳು. ಸಮಾಜದಲ್ಲಿ ನಮ್ಮಲ್ಲಿರುವ ಭಿನ್ನತೆಗಳನ್ನು ಅನಗತ್ಯವಾಗಿ ಉತ್ಪ್ರೇಕ್ಷಿಸಿ ಶ್ರೀಮಂತ ಬಡವ ಸ್ತ್ರೀ ಪುರುಷ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ಬ್ರಾಹ್ಮಣ ದಲಿತ ಎಂದೆಲ್ಲಾ ಅಡ್ಡ ಗೋಡೆಗಳನ್ನು ಕಟ್ಟಿಕೊಳ್ಳುವುದಕ್ಕಿಂತ ಭಿನ್ನತೆ ಪ್ರಭೇದತೆಗಳು ಸಮಾಜದ ಲಕ್ಷಣ ಎಂದರಿತು ನಮ್ಮಲ್ಲಿರುವ ಸಾಮ್ಯತೆಗಳನ್ನು ಗುರುತಿಸುತ್ತಾ ಇಡೀ ಜಗತ್ತೇ ನಮ್ಮ ಕುಟುಂಬ ಎಂಬ ಪ್ರೀತಿ ಬೆಳೆಸಿಕೊಳ್ಳಬೇಕಾದ ಮಹತ್ವವನ್ನು ಮನಗಾಣಿಸುತ್ತಾರೆ.
ದೀಪ್ತಿ ಎಸ್. ರಾವ್ ಬರೆದ “ಸಾವಿನಂಚಿನ ಸಂವಾದ” ಕಾದಂಬರಿಯ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

Read More

“ಪಲಾಯನ”ದ ಕತೆಗಳು…

ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ.
ಶಾರದಾ ಮೂರ್ತಿ ಬರೆದ “ ಪಲಾಯನ ಮತ್ತು ಇತರೆ ಕಥೆಗಳು” ಕಥಾಸಂಕಲನದ ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ

Read More

ಜಗವ ಸುತ್ತುವ ಮಾಯೆ….

ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು.
ಸುಚಿತ್ರಾ ಹೆಗಡೆ ಪ್ರವಾಸ ಕಥನ “ಜಗವ ಸುತ್ತುವ ಮಾಯೆ” ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ

Read More

ಪಾಗಾರದಲ್ಲೊಂದು ಸೃಜನಾತ್ಮಕ ಕಲಾಕೃತಿ

ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.
ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ

Read More
  • 1
  • 2

ಜನಮತ

ಕಾಲಗಳಲ್ಲಿ ನನಗೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿಗಾಡಿನ ಹೊಸ ಕತೆಗಳು: ಸಂಗೀತ ರವಿರಾಜ್ ಬರಹ

ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ.... ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು…

Read More

ಬರಹ ಭಂಡಾರ