Advertisement

Tag: ಕೆ. ಸತ್ಯನಾರಾಯಣ

ಚರ್ಚ್, ಸಂಜೀವ, ಫ್ರೆಂಚ್ ಕನ್ನಡತಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಾವು ನಮ್ಮ ಬೆಂಗಳೂರಿನ ಮನೆಯ ಬಗ್ಗೆ ತಿಳಿಸಿದಾಗ, ನಾನು HSR ಬಡಾವಣೆಯಲ್ಲಿ ನಾಲ್ಕು ವರ್ಷ ಇದ್ದೆ. ಕನ್ನಡಿಗನನ್ನೇ ಮದುವೆ ಆಗಿದ್ದೇನೆ. ಆತ ಯೋಗ ಶಿಕ್ಷಕ ಎಂದು ತುಂಬಾ ಖುಷಿಯಿಂದ ಹೇಳಿದಳು. ಅವಳ ಮುಖದಲ್ಲಿ ಭಾರತೀಯ ಕಳೆ ಇದೆ ಎಂದು ನನಗೂ ಅನ್ನಿಸಿತು. ಹಾಗಾದರೆ, ನೀವು ಅರ್ಧ ಕನ್ನಡಿಗರಲ್ಲವೇ ಅಂದರೆ. ಬಾಯಿ ತುಂಬಾ ನಗುತ್ತಾ, ಇಲ್ಲ ನಾನು French, ನನ್ನ ಹೊಟ್ಟೆಯಲ್ಲಿರುವ ಮಗು ಅರ್ಧ ಕನ್ನಡಿಗ ಎಂದು ತನ್ನ ಉಬ್ಬಿದ ಹೊಟ್ಟೆಯ ಮೇಲೆ ಕೈ ಹೊಡೆದುಕೊಂಡು ನಕ್ಕಳು.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

Read More

ಅಂಪೈರ್‌ ಮೇಡಂ: ಕೆ. ಸತ್ಯನಾರಾಯಣ ಕಾದಂಬರಿಯ ಪುಟಗಳು…

ಹುಡುಗನ ತಮ್ಮನಿಗೆ ಪೋಲಿಯೋದಿಂದ ಕಾಲು ತಿರುಚಿಕೊಂಡು ಪೇಟೆ ಬೀದಿಯ ಒಳ ಓಣಿಯ ಬಲಗಡೆ ಕ್ರಾಸಿನಲ್ಲಿ ಒಂದು ಕಾಂಡಿಮೆಂಟ್‌ ಸ್ಟೋರ್ಸ್‌ ಹಾಕಿಕೊಟ್ಟಿದ್ದು ವ್ಯಾಪಾರ ಚೆನ್ನಾಗಿ ನಡೆಯುತ್ತಿತ್ತು. ಶ್ರೀದೇವಿಯ ಗಂಡನಾಗುವವನು ಕೂಡ ಲ್ಯಾಂಡ್‌ ಬ್ಯಾಂಕ್‌ ಕೆಲಸದಲ್ಲಿ ಎಷ್ಟೇ ಹೊತ್ತು ತಡವಾದರೂ ಒಂದು ಸಲ ಸಂಜೆ ಅಂಗಡಿಗೆ ಹೋಗಿ, ಸಾಮಾನು, ಕ್ಯಾಶ್‌ ಎಲ್ಲ ಲೆಕ್ಕ ನೋಡಿ ತಮ್ಮನಿಗೆ ಸಹಾಯ ಮಾಡುತ್ತಿದ್ದ. ನೋಡಿ, ಈಗಿನ ಕಾಲದಲ್ಲೂ ಇಂತಹ ಗುಣವಂತ, ನೀತಿವಂತ ಹುಡುಗರು ಇರುತ್ತಾರಾ ಅಂತ ಕಿರಂಗೂರಿನ ಸಮಸ್ತ ಪ್ರಜೆಗಳಿಗೆ ಕೊನೇ ಪಕ್ಷ ಮೂರು ನಾಲ್ಕು ಸಲವಾದರೂ ಗೋದಾದೇವಿ ಹರಿಕತೆ ಮಾಡಿ ತಿಳಿಸಿದ್ದಳು.
ಕೆ. ಸತ್ಯನಾರಾಯಣ ಹೊಸ ಕಾದಂಬರಿ “ಅಂಪೈರ್‌ ಮೇಡಂ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ನಾನು ಸುರೀನಾಮಿಯಾದೆ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಆತಂಕದಲ್ಲೋ, ಆಸೆಯಲ್ಲೋ ತಮ್ಮ ಹಾಗೆಯೇ ಕಾಣುವ ಭಾರತೀಯರನ್ನು ಸುರೀನಾಮಿಗಳು ಎಂದು ಭಾವಿಸುತ್ತಾರೆ. ಡಚ್ಚರು ಅವರು ಭಾರತೀಯರಲ್ಲ, ಕೇವಲ ಸುರೀನಾಮಿಗಳು ಎಂದು ಪ್ರವಾಸಿ ಭಾರತೀಯರನ್ನು ಎಚ್ಚರಿಸುತ್ತಾರೆ. ಕೆಲವರನ್ನು ಕಂಡಾಗ ಅವರು ಭಾರತೀಯರಾಗಿದ್ದರೆ ಎಂದು ನಮಗೂ ಆಸೆಯಾಗುತ್ತದೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹನ್ನೆರಡನೆಯ ಬರಹ

Read More

ಮಕ್ಕಳು ಮತ್ತು ಮಾತೃಭೂಮಿ: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ನಮ್ಮದು ಅನಗತ್ಯ ಭಯ, ಆತಂಕ. ನಮ್ಮದೆಲ್ಲವೂ ಕಲ್ಪಿತ ಭಯ ಎಂಬ ಅರಿವು ಕೂಡ ಕೆಲವು ಪೋಷಕರಲ್ಲಿ ಕಂಡು ಬಂತು. ನಮ್ಮ ಆತಂಕ, ಭಯಗಳು ಮಕ್ಕಳ ಭವಿಷ್ಯದ ಜೀವನಕ್ಕೆ ಅಡ್ಡಿಯಾಗಬಾರದು, ನಾವಿಲ್ಲದ ನಾಳಿನ ಬದುಕಿನಲ್ಲಿ ಅವರು ಹೇಗಿರಬೇಕು, ಹೇಗೆ ಬಾಳಬೇಕು ಎಂಬುದನ್ನು ನಿರ್ಧರಿಸುವ ಹಕ್ಕೂ ನಮಗಿಲ್ಲ ಅಲ್ಲವೇ ಎಂದು ಪೋಷಕರು ಅವರವರಲ್ಲೇ ಪರಸ್ಪರ ಚರ್ಚಿಸಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಈ ಯಾವ ಆತಂಕಗಳೂ ಮಕ್ಕಳಿಗಿಲ್ಲ ಎಂಬ ಅರಿವು ಕೂಡ ಈ ಸಮಾಧಾನದ ಹಿಂದಿದೆ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

Read More

ಮೊಮ್ಮಕ್ಕಳಿಂದ ಕಲಿಯುವುದು: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಮಕ್ಕಳನ್ನು ಪ್ರಬುದ್ಧರನ್ನಾಗಿ ಮಾಡುವ ನಮ್ಮ ಆತುರದಲ್ಲಿ ಅವರ ಬಾಲ್ಯದ ಸಂತೋಷಕ್ಕೆ ನಾವು ಅಡ್ಡ ಬರಬಾರದಷ್ಟೇ. ಈ ಎಚ್ಚರ ನನಗೆ ಯಾವಾಗಲೂ ಇತ್ತು. ನನಗೆ ಎಚ್ಚರವಿಲ್ಲದಿದ್ದರೂ ಏನೂ ತೊಂದರೆ ಆಗುತ್ತಿರಲಿಲ್ಲ. ಏಕೆಂದರೆ, ಅವನು ಪುಸ್ತಕಗಳಿಗಿಂತ ಹೆಚ್ಚಾಗಿ ತನ್ನ ವಯಸ್ಸಿನ ಮಕ್ಕಳ ಜೊತೆ ಬೆರೆಯುವುದನ್ನೇ, ಅವರೊಡನೆ ಆಟವಾಡುವುದನ್ನೇ ತುಂಬಾ ಇಷ್ಟಪಡುತ್ತಿದ್ದ. ದಣಿಯುವ ತನಕ ಅಡುತ್ತಿದ್ದ.
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಹತ್ತನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ