Advertisement

Tag: ಹೇಮಾ.ಎಸ್.

ಚಕ್ರವ್ಯೂಹ: ಕುರಸೋವ ಆತ್ಮಕತೆಯ ಕಂತು

“ಸಾಹಿತ್ಯ ಮತ್ತು ಸಿನೆಮಾ ಕುರಿತ ಒಳನೋಟಗಳನ್ನು ನನಗೆ ಒದಗಿಸಿದ್ದು ನನ್ನ ದೊಡ್ಡಣ್ಣ. ಅವನು ಹೇಳುತ್ತಿದ್ದ ಪ್ರತಿ ಸಿನಿಮಾವನ್ನು ತಪ್ಪದೇ ನೋಡುತ್ತಿದ್ದೆ. ಅವನು ಚೆನ್ನಾಗಿದೆ ಎಂದು ಹೇಳಿದ ಸಿನಿಮಾ ಎಷ್ಟೇ ದೂರವಿರಲಿ ಹೋಗಿ ನೋಡುತ್ತಿದ್ದೆ. ಅಸೂಕಾವರೆಗೂ ನಡೆದು ಸಿನಿಮಾ ನೋಡಿಬರುತ್ತಿದ್ದೆ. ಅಲ್ಲಿ ಏನು ನೋಡಿದೆ ಎನ್ನುವುದು ನೆನಪಿಲ್ಲ. ಆದರೆ ಅದೊಂದು ಒಪೆರ ಥಿಯೇಟರ್ ಅನ್ನುವುದು ನೆನಪಿದೆ. ತಡರಾತ್ರಿಯ ಶೋಗಳಿಗೆ ಸಿಗುತ್ತಿದ್ದ ರಿಯಾಯ್ತಿ ಟಿಕೇಟು ಕೊಳ್ಳಲು ಉದ್ದ ಸಾಲುಗಳಲ್ಲಿ ನಿಲ್ಲುತ್ತಿದ್ದದ್ದು ನೆನಪಿದೆ.”

Read More

ನನ್ನ ಮೆಚ್ಚಿನ ಓಹರಾ ಯೋಯಿಚಿ ಗುರುಗಳು: ಕುರಸೋವ ಆತ್ಮಕತೆಯ ಕಂತು

“ನಮ್ಮ ಕಾಲದಲ್ಲಿ ವ್ಯಕ್ತಿಯ ಸ್ವತಂತ್ರ ಚೇತನಕ್ಕೆ ಹಾಗೂ ವೈಯುಕ್ತಿಕ ವಿಶಿಷ್ಟತೆಗಳಿಗೆ ಮನ್ನಣೆ ನೀಡುವ ಶಿಕ್ಷಕರಿದ್ದರು. ಇವತ್ತಿನ ಶಿಕ್ಷಕರಿಗೆ ಅವರನ್ನು ಹೋಲಿಸಿದಾಗ ಇಂದು ಬಹಳ ಮಂದಿ ಕೇವಲ “ಸಂಬಳ”ಕ್ಕಾಗಿ ಶಿಕ್ಷಕರಾದವರಿದ್ದಾರೆ. ಈ ರೀತಿಯ ಬ್ಯೂರೊಕ್ರೆಸಿಯ ಸ್ವಭಾವದವರು ಶಿಕ್ಷಕರಾಗಿ ಮಾಡುವ ಪಾಠ ನಿಜಕ್ಕೂ ಏನನ್ನೂ ಕಲಿಸುವುದಿಲ್ಲ. ಆ ಪಾಠಗಳಲ್ಲಿ ಸತ್ವವಿರುವುದಿಲ್ಲ. ಇಂದಿನ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಕಾಮಿಕ್ ಪುಸ್ತಕಗಳನ್ನು ಓದುವುದರಲ್ಲಿ ಕಳೆಯುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.”

Read More

ಭೂಮಿಯ ಮೇಲಿದ್ದವರೆಲ್ಲಾ ಚೆಲ್ಲಾಪಿಲ್ಲಿಯಾದ ಆ ದಿನ…

“ಆ ಭೀಕರ ಭೂಕಂಪದ ದಿನ ಮೋಡಗಳಿಲ್ಲದೆ ಕತ್ತಲಾವರಿಸಿತು. ಉರಿಯುತ್ತಿದ್ದ ಬೇಸಿಗೆಯ ಬೇಗೆಯಲ್ಲಿ ಜನ ಬೇಯುತ್ತಿದ್ದರು. ಆದರೆ ಶುಭ್ರ ನೀಲಾಕಾಶ ಕಣ್ಮರೆಯಾಗಿ ಶರತ್ಕಾಲದ ಆಗಸವನ್ನು ನೆನಪಿಸುವಂತಿತ್ತು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಯಾವುದೇ ಬಗೆಯ ಮುನ್ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ಭೀಕರ ಬಿರುಗಾಳಿ ಎದ್ದಿತು.”

Read More

ಕೆಂಪು ಕಲ್ಲಿನ ದೊಡ್ಡ ಗೋಡೆ:ಕುರಸೋವ ಆತ್ಮಕತೆಯ ಕಂತು.

“ಈಗಲೂ ನನಗದು ಅಮೂಲ್ಯ ನೆನಪು. ಇಂದು ಅದನ್ನು ಓದಿದರೂ ನಾಚಿಕೊಳ್ಳುತ್ತೇನೆ. ಬೆಳಗಿನ ಹೊತ್ತು ಎಡದಲ್ಲಿಯೂ ಮಧ್ಯಾಹ್ನದ ಹೊತ್ತು ಬಲದಲ್ಲಿಯೂ ತೊರೆಯಂತೆ ಕಾಣುತ್ತಿದ್ದ ಆ ಕೆಂಪು ಕಲ್ಲಿನ ದೊಡ್ಡ ಗೋಡೆಯ ಬಗ್ಗೆ ನಾನಾಗ ಯಾಕೆ ಬರೆಯಲಿಲ್ಲ ಅಂತ ಆಶ್ಚರ್ಯವಾಗುತ್ತದೆ. ಆ ಗೋಡೆ ಚಳಿಗಾಲದಲ್ಲಿ ತಣ್ಣಗಿನ ಗಾಳಿಯಿಂದ ನನ್ನನ್ನು ರಕ್ಷಿಸಿತ್ತು. ಆದರೆ ಬೇಸಿಗೆಯಲ್ಲಿ ಸೂರ್ಯನ ಧಗೆಯನ್ನು ಮತ್ತಷ್ಟು ಹೆಚ್ಚಿಸಿ ಬೇಯಿಸಿತ್ತು.”

Read More

ನನ್ನನ್ನು ದುರ್ಬಲನಂತೆ ಕಾಣುತ್ತಿದ್ದ ಸಹಪಾಠಿಗಳು: ಕುರಸೋವ ಆತ್ಮಕತೆಯ ಕಂತು.

ನಾನು ಮೊದಲ ಸಾರಿ ಓಡಲು ಶುರುಮಾಡಿದಾಗಿನಿಂದ ಪ್ರತಿಬಾರಿ ಓಡುವಾಗಲೂ ಮುಸಿನಗುತ್ತಿರುವ ಸದ್ದು ಕೇಳುತ್ತಿತ್ತು. ನನ್ನ ಮುಖದಲ್ಲೊಂದು ವಿಲಕ್ಷಣ ಭಾವ ಹಾದುಹೋಗಿರಬೇಕು. ಈಗಲೂ ಅದರ ಬಗ್ಗೆ ಯೋಚಿಸಿದಾಗ ನನಗದು ಅರ್ಥವಾಗಿಲ್ಲ. ಅದು ಕನಸೇ? ಪ್ರತಿ ದೈಹಿಕ ಶಿಕ್ಷಣದ ತರಗತಿಯಲ್ಲಿ ಎಲ್ಲರಿಗೂ ನಗೆಯ ವಸ್ತುವಾಗಿದ್ದ ಹುಡುಗ ತನ್ನ ಗೆಲುವನ್ನು ಕುರಿತು ಕಂಡ ಕನಸೇ?

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ