Advertisement

Tag: ಆರ್. ವಿಜಯರಾಘವನ್

ಚಂದಿರನ ಕುವರಿಯರು ಕತೆಯೋದುವ ಮೊದಲು..

ಜಗತ್ತಿನ ಎಲ್ಲ ಭಾಷೆಗಳ ಉತ್ಕೃಷ್ಟ ಕೃತಿಗಳೂ ಪರಸ್ಪರ ಅನುವಾದಗೊಂಡಿವೆ. ಸ್ವತಂತ್ರಕೃತಿಗಳಿಗೆ ಇರುವಷ್ಟೇ ಮರ್ಯಾದೆ ಅನುವಾದ ಕೃತಿಗಳಿಗೂ ಇದೆ. ವಿಶ್ವಸಂಸ್ಕೃತಿಯ ವಿಕಾಸದಲ್ಲಿ ಭಾಷಾಂತರವೂ ನಿರ್ಮಾತೃಶಕ್ತಿ ಆಗಿರುವುದರಿಂದ ಅದರ ಅಗತ್ಯ ನಮ್ಮೆಲ್ಲ ಭಾಷೆಗಳಿಗೂ ಇದೆ. ಈ ದಿಸೆಯಲ್ಲಿ ಆರ್ ವಿಜಯರಾಘವನ್ ಅವರ ‘ಚಂದಿರನ ಕುವರಿಯರು’ ಕಥಾಸಂಕಲನದ ಕಥೆಗಳು ಕನ್ನಡದ ಸಂದರ್ಭದಲ್ಲಿ ಬಹಳ ಮುಖ್ಯವೆನಿಸುತ್ತವೆ. ಭಾಷೆ ಮತ್ತು ಸಂಸ್ಕೃತಿಗಳು ನಾಗರಿಕತೆಯ ಹೆಸರಿನಲ್ಲಿ ಜಾಗತೀಕರಣಕ್ಕೆ ಒಳಗಾಗಿರುವ ಈ ಸನ್ನಿವೇಶದಲ್ಲಿ ಅನುವಾದಗಳಿಗೆ ಮಡಿ-ಮೈಲಿಗೆಯ ಸೋಂಕು ಹತ್ತಿಸಬೇಕಿಲ್ಲ.
ಆರ್ ವಿಜಯರಾಘವನ್ ಅನುವಾದಿತ ಕತೆಗಳ ಸಂಕಲನ ‘ಚಂದಿರನ ಕುವರಿಯರು’ ಪುಸ್ತಕಕ್ಕೆ ಎನ್. ನರಹರಿ ಬರೆದ ಮುನ್ನುಡಿ

Read More

ಆರ್. ವಿಜಯರಾಘವನ್ ಅನುವಾದಿಸಿದ ಕಂಬ ರಾಮಾಯಣದ ಆಯ್ದ ಭಾಗ

“ಅವಳಿಗೆ ಮತ್ತೆ ನೆನಪಿಸು ಹನುಮ
ಎಳೆಮಿಂಚಿನಂತೆ ನಾನವಳ ರೂಪವನೆಂತು ಕಂಡೆ,
ಅದೇನು ಗಾಂಭೀರ್ಯ, ಅದೆಂಥ ಚೆಲುವು
ಜನಕನರಮನೆಯ ಸಭಾಂಗಣದಿ
ಅವಳ ಹಿರಿಸಂಕಲ್ಪವನು ನಾನು ಮರೆತವನಲ್ಲ,”- ಆರ್. ವಿಜಯರಾಘವನ್ ಅನುವಾದಿಸಿದ ಕಂಬ ರಾಮಾಯಣದ ಆಯ್ದ ಭಾಗ

Read More

ಗುರುಗಣೇಶ ಭಟ್‌ ಪುಸ್ತಕದ ಕುರಿತು ಆರ್.‌ ವಿಜಯರಾಘವನ್‌ ಬರಹ

“ಈ ಕವಿಯ ನೋಟ ನೆಟ್ಟಿರುವುದು ಯಾವುದರ ಮೇಲೆ? ಮೊದಲ ಓದಿಗೇ ನಮಗೆ ತೋರುವುದು ಈತ ಬಿಟ್ಟ ಕಣ್ಣ ಮುಚ್ಚದ ಹುಡುಗನೆಂದು. ತನ್ನ ಸುತ್ತಲಿನ ಎಲ್ಲ ವಿದ್ಯಮಾನಗಳನ್ನೂ ಗಮನಿಸುತ್ತಲೇ, ತನಗೇನೂ ಆಗಬೇಕಿಲ್ಲವೆಂಬಂತೆ ನಟಿಸುತ್ತಲೇ ಈ ಬಗೆಯ ನಿರ್ಲಿಪ್ತತೆಯು ಆತ್ಮಘಾತುಕವೆಂಬ ಎಚ್ಚರವನ್ನು ಪ್ರಕಟಿಸುತ್ತಲೇ ಇರುವ ಕವಿ ಈತ.”

Read More

ಮೌಲ್ಯ ಸ್ವಾಮಿ ಪುಸ್ತಕದ ಕುರಿತು ಆರ್. ವಿಜಯರಾಘವನ್ ಬರಹ

“ಸುಮ್ಮನೆ ಬಿದ್ದಿರುವ ಬಿಕ್ಕುಗಳು ಎಂಬ ಪುಸ್ತಕದ ಶೀರ್ಷಿಕೆಯೇ ಬೆರಳು ತೋರುತ್ತಿದೆ: ಅಲ್ಲಿ ಬಿಕ್ಕುಗಳೆಲ್ಲ ಸದ್ದಡಗಿ ಬಿದ್ದಿವೆ. ಇಲ್ಲಿ ಕವಿತೆಗಳಿಲ್ಲ. ಆದರೆ ನಮ್ಮೊಳಗಿನ ಮಾತಾಗದ ಬಿಕ್ಕುಗಳ ರಾಶಿಯಿದೆ. ಇದು ರಾಮರಾಜ್ಯದಲ್ಲಿ ಸೀತೆ ಬೆಂದದ್ದಕ್ಕೂ ಮೊದಲಿಂದಲೇ ಬಿದ್ದು ಸಂಚಯಿಸಿಕೊಳ್ಳುತ್ತಿರುವ ಬಿಕ್ಕುಗಳು. ಇವು ಹಳತಾಗಿಲ್ಲ, ಕೊಳೆತಿಲ್ಲ, ಕೊಚ್ಚಿ ಹೋಗಿಲ್ಲ, ಹಾಗೇ ಇವೆ. ನಿರಂತರವಾಗಿ ಬೆಳೆದುಕೊಂಡು. ಇದಕ್ಕೆ ಕಾರಣವೂ ಇಲ್ಲದಿಲ್ಲ. ‘ಕಾಣದ ಹಾಗೆ ಹರಿಯುವ ನಯವಂಚಕತೆಯನ್ನು’ ಹೊಂದಿಲ್ಲದ ಬದುಕುಗಳ ಹರಿವು ಮರೆಯಲ್ಲಿರುವುದಿಲ್ಲ.”

Read More

‘ನಾನು ಮೆಚ್ಚಿದ ನನ್ನ ಕಥೆʼ ಕಥಾ ಸಂಪುಟಗಳ ಸಂಪಾದಕರ ಮಾತು

“ನಮ್ಮ ಗ್ರಾಮೀಣ ಕತೆಗಾರರಿಗೆ ದೇವರು ಒಂದು ಮುಖ್ಯ ಸೌಕರ್ಯವಾಗಿ ಕಂಡಿದ್ದರೆ, ನಗರ ಕತೆಗಾರರಿಗೆ ಶಾಸ್ತ್ರೀಯ ಪರಿಜ್ಞಾನ ಸೌಕರ್ಯವಾಗಿ ಕಂಡಿದೆ. ಈ ಎರಡೂ ಸಂಪರ್ಕ ಅನುಕೂಲತೆಯಿಂದ ಅತ್ತಿಂದಲಿತ್ತ ಇತ್ತಿಂದಲತ್ತ ಪ್ರವಹಿಸಿರುವುದುಂಟು. ಇಂತಹ ಕಥೆಗಳಲ್ಲಿ ಅಸ್ತಿತ್ವದ ಪ್ರಶ್ನೆಗಳು, ಉತ್ತರಗಳು ಇವೆ. ಕಥನ ಶಿಲ್ಪದಲ್ಲಿ ಇವನ್ನು ಕಾಣಬಹುದು. ಗ್ರಾಮೀಣ ದೇವರುಗಳು ಆಚರಣೆಗಳು ನಂಬಿಕೆಯ ಮೂಲಕ ನಿಲ್ಲುತ್ತವೆ.”
ಇತ್ತೀಚೆಗೆ ಬಿಡುಗಡೆಯಾದ ʼನಾನು ಮೆಚ್ಚಿದ ನನ್ನ ಕಥೆʼ, ನಾಲ್ಕು ಸಂಪುಟಗಳ..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ