Advertisement

Tag: ಕೆ ವೈ ನಾರಾಯಣಸ್ವಾಮಿ

ಎಲ್ಲರವ…. ಈ ಲೆಬನಾನಿನವ…

ಗಿಬ್ರಾನ್‌ನಂತವರ ಬದುಕು ಉರಿವ ಮೇಣದ ಬತ್ತಿಯಂತೆ ಬೆಳಕನ್ನು ಕೊಡುತ್ತಲೇ ತನ್ನನ್ನು ತಾನು ಸುಟ್ಟುಕೊಳ್ಳುವ ನೋವನ್ನು ಒಡಲುಗೊಂಡಿರುವ ಜೀವನವಾಗಿದೆ. ಬದುಕು ಎಂದರೆ ಪ್ರೀತಿಯನ್ನು ಹುಡುಕಲು ಸಿಕ್ಕಿರುವ ಅಪರೂಪದ ಅವಕಾಶವೆಂಬುದು ಗಿಬ್ರಾನನ ನಂಬಿಕೆಯಾಗಿರುವಂತಿದೆ. ಆತ ಬರೆದಿರುವ ಆದಿಮವೂ ನಿತ್ಯ ನೂತನವೂ ಆಗಿರುವ ಪ್ರಾಫೆಟ್‌ ಕಾವ್ಯದ ಕಲ್ಪನೆಯು ಆತನ ಹದಿನಾಲ್ಕನೇ ವಯಸ್ಸಿಗೆ ಆರಂಭವಾಯಿತು ಎಂಬ ಸಂಗತಿ ಮಹದ್‌ಅಚ್ಚರಿಯ ವಿಷಯವಾಗಿದೆ.
ಸಂಧ್ಯಾರಾಣಿ ಅನುವಾದಿಸಿರುವ ಬಾರ್ಬರಾ ಯಂಗ್‌ ಬರೆದ ಖಲಿಲ್‌ ಗಿಬ್ರಾನ್‌ ಕುರಿತ ಪುಸ್ತಕ “ಇವ ಲೆಬನಾನಿನವ”ಕ್ಕೆ ಕೆ.ವೈ. ನಾರಾಯಣಸ್ವಾಮಿ ಬರೆದ ಮುನ್ನುಡಿ

Read More

ಮಿಂಚುಹುಳಗಳ ದೊಂದಿ: ಶಿವಪ್ರಕಾಶರ ಕಾವ್ಯ

ಶಿವಪ್ರಕಾಶರು ತಮ್ಮ ಕವಿತೆಗಳಲ್ಲಿ ನಡೆಸಿರುವ ಭಾಷಿಕ ಪ್ರಯೋಗಗಳು ಅವರನ್ನು ನಿಸ್ಸಂದೇಹವಾಗಿ ಕನ್ನಡದ ವರ್ತಮಾನದ ದೊಡ್ಡಕವಿಯನ್ನಾಗಿ ಮಾಡಿವೆ. ಅನೇಕ ಜನ ಕವಿಗಳು ಒಂದೇ ಬಗೆಯ ಭಾಷಾ ಪ್ರಯೋಗದಸಿದ್ಧ ಏಕತಾನತೆಗೆ ಸಿಕ್ಕಿಕೊಂಡುಬಿಟ್ಟಿರುತ್ತಾರೆ. ವೈವಿಧ್ಯಮಯವಾದ ವಸ್ತುಗಳನ್ನು ಕುರಿತು ಕವಿತೆ ಬರೆಯುತ್ತಿದ್ದರೂ ಅವರ ಕಾವ್ಯಶಿಲ್ಪದ ಕಟ್ಟೋಣದಲ್ಲಿ ಮಾತ್ರ ಏಕರೂಪಕಾತ್ಮಕತೆಯು ಉಳಿದುಬಿಟ್ಟಿರುತ್ತದೆ. ಆದರೆ ಸಮರ್ಥ ಕವಿ ಮಾತ್ರ ಈ ಸಮಸ್ಯೆಯನ್ನುತಮ್ಮ ಭಾಷರೂಢಿಗಳನ್ನು ತಾವೇ ಮುರಿಯುವ ಮೂಲಕ ಮೀರುತ್ತಿರುತ್ತಾರೆ.
ಎಚ್.ಎಸ್. ಶಿವಪ್ರಕಾಶರ ನಾಲ್ಕುದಶಕದ ಕವಿತೆಗಳನ್ನು ಒಟ್ಟಾಗಿ ‘ಹೋಗಿ ಬನ್ನಿ ಋತುಗಳೇ’ ಎಂಬ ಪುಸ್ತಕದಲ್ಲಿ ಕೆ ವೈ ನಾರಾಯಣಸ್ವಾಮಿ ಅವರು ಸಮಗ್ರವಾಗಿ ಸಂಪಾದಿಸಿದ್ದು ಅವರ ಮಾತುಗಳು ಇಲ್ಲಿವೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ