Advertisement

Tag: ವಾಸುದೇವ ನಾಡಿಗ್

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವಾಸುದೇವ ನಾಡಿಗ್ ಕತೆ

ಸುನಂದಕ್ಕಗೆ ಮದುವೆಯಾಗಿ ಒಂದು ವಾರವೂ ಆಗಿರಲಿಕ್ಕಿಲ್ಲ. ದಿವಾಕರ ಭಾವ ಅವಳಿಗೆ ಉದ್ದದ ಹೆರಳನ್ನು ಕತ್ತರಿಸಲು ಆಜ್ಞೆಮಾಡಿದ್ದು! ನಗುವನ್ನೆ ಕಳೆದುಕೊಂಡಂತಿದ್ದ ಸುನಂದಕ್ಕ ತನ್ನ ಹೆರಳನ್ನು ಮೋಟು ಜಡೆ ಮಾಡಿಸಿಕೊಂಡು ‘ಅನೂ ಪುಟ್ಟಾ’ ಎಂದು ಯಾವತ್ತೂ ಕರೆವಂತೆ ‘ಅಮ್ಮಗೆ ಹೇಳು ಇನ್ನು ಮುಂದೆ ನನಗೆ ಜಡೆಹಾಕುವಾಗ ಯಾವತ್ತೂ ಕೈ ಸೋಲು ಬರುವುದಿಲ್ಲ’ ಅಂದಿದ್ದಳು.
ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ವಾಸುದೇವ ನಾಡಿಗ್ ಕತೆ “ಅರ್ಥವಾಗುತ್ತಿದೆ ಎಲ್ಲ ಮೆಲ್ಲ ಮೆಲ್ಲನೆ”

Read More

ಕವಿತೆಯೂ ಉಪ್ಪು ನೀರಲ್ಲಿ ಹಾಕಿದ ಮಾವಿನ ಮಿಡಿ ಹೃದಯ

ಸದ್ಯ ಬಹಳ ದಿನಗಳಿಂದ ನನ್ನ ಅಂತರಂಗಕ್ಕೆ ಸುರಿದುಕೊಂಡ ಕವಿತಾ ಅವರ ಕವಿತೆಗಳು ಕೊಟ್ಟ ಸಂವೇದನೆಗಳಿಗೆ ಇಲ್ಲಿ ಶಬ್ದ ರೂಪ ಕೊಡಲು ಕೂತಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದ ಕೇವಲ ಕವಿತೆಗಳನ್ನೆ ನಚ್ಚಿಕೊಂಡು ಕೂತ ನನಗೆ ಚೆನ್ನಾಗಿ ಬರೆವ ಹೊಸಬರ ಪದ್ಯಗಳು ಅವು ಪಠ್ಯವಾಗೇ ಕಾಣಿಸುತ್ತದೆ. ಗೋಚರಿಸದ ಲೋಕವೊಂದು ನನಗೆ ನೀಡಬಹುದಾದ ಅಸೀಮ ಅನುಭವಗಳಿಗೆ ಕಾಯುತ್ತಲೇ ಓದುತ್ತೇನೆ. ಕವಿತಾ ಹೆಗಡೆ ಅವರ ಇಲ್ಲಿನ ರಚನೆಗಳು ನನಗೆ ಹೊಸ ಪಠ್ಯವಾಗೇ ಅನುಭವಕ್ಕೆ ಬಂದವು.
ಕವಿತಾ ಹೆಗಡೆ ಅಭಯಂ ಅವರ “ಮಂಜಿನ ಮನೆ ಹೊಕ್ಕ ಮನ” ಕವನ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

Read More

ವಾಸುದೇವ ನಾಡಿಗ್ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

ನಾಡಿಗರ ಕಾವ್ಯಪ್ರೇಮಕ್ಕೆ ಯಾವ ಸಾಕ್ಷಿಯೂ ಬೇಕಿಲ್ಲ. ಅವರನ್ನು ಓದಿದ ಪ್ರತಿಯೊಬ್ಬನಿಗೂ ಗೊತ್ತು, ಬದುಕನ್ನು ಬಂಧಿಸಿರುವ ಎಲ್ಲ ಭಾವಗಳನ್ನೂ ಧಾರಾಳವಾಗಿ ಸುರಿಸುವ ಈ ಭಾವುಕ ನಿಗೂಢ ಮೌನಕ್ಕೆ ಶರಣಾದರೆ ಮರೆಯಲಾಗದ ಕವನವೊಂದು ಮೈತಳೆಯುವುದು ಖಚಿತ. ಒಂದು ಅನೂಹ್ಯ ವಿಷಾದದಲ್ಲಿ ಮುಳುಗಿದರೆಂದರೆ ಬದುಕಿನ ಪರಮ ಸತ್ಯದ ಮಗ್ಗುಲೊಂದನ್ನು ನಮ್ಮತ್ತ ಹೊರಳಿಸಿಬಿಡುವ ಮಾಯಕಾರ. ಒಲವು ಎದೆಯನ್ನು ಹೊಕ್ಕರೆ ಅದನ್ನು ಮೊಗೆ ಮೊಗೆದು ಇತರರಿಗೆ ಸುರಿವ ಪ್ರೇಮಮಯಿ.
ವಾಸುದೇವ ನಾಡಿಗ್‌ ಬರೆದ ‘ಬಂದರಿಗೆ ಬಂದ ಹಡಗು’ ಕವನ ಸಂಕಲನದ ಕುರಿತು ಕವಿತಾ ಹೆಗಡೆ ಬರಹ

Read More

ನಿರಾಡಂಬರ ಕಥನ ಕ್ರಮದಲ್ಲಿ ಸಾಗುವ ‘ಸೂತ್ರಧಾರ..’

“ಫಣೀಂದ್ರನ ಗಲಿಬಿಲಿ ಸಂಸಾರ, ಕಾಣದ ಕೈ, ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ, ಹೃದಯಾಂತರಾಳದಲಿ, ತ್ಯಾಗ, ದೊಡ್ಡವರೆಲ್ಲ ಜಾಣರಲ್ಲ, ಕಂದಾ ನೀ ನಗುತಿರು ಮತ್ತು ಸೂತ್ರಧಾರ ಮತ್ತು ಇತರ ಕಥೆಗಳು ಇಲ್ಲಿ ತಮ್ಮ ವಸ್ತು ವಿಷಯಗಳಿಂದ ಗಮನ ಸೆಳೆಯುತ್ತವೆ. ಹೃದಯಾಂತರಾಳದಲ್ಲಿ ಮತ್ತು ಕಂದ ನೀನು ನಗುತಿರು ಕತೆಗಳು ಮಾನವೀಯತೆಯ ಆರ್ದ್ರವಾದ ದನಿಯನ್ನು ಬಿಂಬಿಸಿದರೆ, ದೂರದ ಬೆಟ್ಟ ಮತ್ತು ಕಾಣದ ಕೈಗಳು ಆ ಬಾಳಿನ ಸಹಜವಾದ ಚಿತ್ರವನ್ನು ನೆಚ್ಚಿಕೊಂಡಿವೆ.”
ಶೈಲಜಾ ಸುರೇಶ್‌ ರಾವ್‌ ನಾಯಕ್ ಕಥಾ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ

Read More

ವಾಸುದೇವ ನಾಡಿಗ್ ಕವನ ಸಂಕಲನಕ್ಕೆ ದಿಲೀಪ್ ಕುಮಾರ್ ಮುನ್ನುಡಿ.

“ಕರವಸ್ತ್ರದ ಅನನ್ಯತೆ ತಿಳಿಯುವುದು ಹಿಂದಿನ ಸಂಕಲನಗಳಲ್ಲಿನ ಭಾಷೆ-ಬಂಧ-ಪ್ರತಿಮೆಗಳಲ್ಲಿಂದ ಬಿಡುಗಡೆ ಹೊಂದದೆ ಇಂದಿಗೆ ತೆರೆದುಕೊಂಡಿರುವ ತೀವ್ರವಾದ ಭಾವದ ಅಭಿವ್ಯಕ್ತಿಯ ಸ್ಥಿತಿಗೆ ಬಾಯಾಗುವ ಹಂಬಲದಿಂದ. ಎಲ್ಲ ಕಾವ್ಯಗಳೂ ತೀವ್ರವಾದ ಭಾವದ ಅಭಿವ್ಯಕ್ತಿಗೆ ತುಡಿಯುತ್ತಿದ್ದರೂ ಒಂದು ಸಂಕಲನದಿಂದ ಮತ್ತೊಂದು ಸಂಕಲನಕ್ಕೆ ಬೆಳೆದಿರುವ ಇವರ ಕಟ್ಟುವಿಕೆಯಿಂದ.”

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ