Advertisement

Tag: ಸುಮಾವೀಣಾ

ಪ್ರಕೃತಿಯ ರಿಯಲ್ ಡೆಮೋ: ಸುಮಾವೀಣಾ ಸರಣಿ

ಇಲ್ಲಿನ ಜನರು ಮಳೆಗಾಲಕ್ಕೆ ಪ್ರತ್ಯೇಕ ಶಾಪಿಂಗ್ ಮಾಡಬೇಕು. ಜರ್ಕಿನ್ಸ್, ರೇನ್ಕೊಟ್, ಕೊಡೆಗಳು, ಸ್ಕಾರ್ಫ್‌ಗಳು, ಸ್ವೆಟರ್‌ಗಳು, ಟೋಪಿಗಳು, ಟಾರ್ಪಲ್ಸ್ ಮೆಡಿಸಿನ್ಸ್, ಜೇನು ಇತ್ಯಾದಿ. ಇದರ ಜೊತೆಗೆ ಸೌದೆಯನ್ನು ಹಾಕಿಸಿಕೊಳ್ಳುವುದು. ಒಂದು ಜೀಪ್ ಇಲ್ಲವೆ ಮಿನಿ ಲಾರಿಯಲ್ಲಿ ಒಂದು ಅಟ್ಟಿ ಎರಡು ಅಟ್ಟಿ ಸೌದೆ ಹೀಗೆ ಹಾಕಿಸಿಕೊಂಡರೆ ಅದನ್ನು ಒಡೆಯಲು ಜನ ಇರುತ್ತಿದ್ದರು. ‘ಕೊಡ್ಲಿ ಸೌದೆಯನ್ನು ಒಡೆಯಲು ಬಳಸುವ ಪರಿಕರ. ‘ಕೊಡ್ಲಿ’ ಪದದಲ್ಲಿ ಒತ್ತಕ್ಷರ ಬಿಡಿಸಿ ಹೊಸದೊಂದು ‘ಅ’ ಸ್ವರವನ್ನು ಸೇರಿಸಿದರೆ ‘ಕೊಡಲಿ’ ಆಗುತ್ತದೆ ನಮ್ಮ ಶಿಷ್ಟ ಭಾಷೆಯನ್ನು ‘ಕೊಡಲಿ’ ಎಂದರೆ ‘ನೀಡಲಿ’ ಎಂದರ್ಥ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಬಿಡದೇ ಸುರಿವ ಮಳೆಯೂ.. ಜೊತೆಗೆ ಕೊಡೆಯೂ: ಸುಮಾವೀಣಾ ಸರಣಿ

ಮಧ್ಯಾಹ್ನ ಶಾಲೆಯಲ್ಲಿ ಮಕ್ಕಳು ಪಾಠ ಕೇಳಬೇಕು. ಆಗ ಈ ರೌದ್ರಮಳೆಯಾಗಮನವಾಗುತ್ತಿತ್ತು. ನಾವು ಶಾಲೆಗೆ ಹೊರಡುವ ಸಮಯಕ್ಕೆ ಸರಿಯಾಗಿ ಶಾಲೆ ಬಿಡುವ ಕಡೆಯ ಅವಧಿಯಲ್ಲಿ ಮಳೆ ಹಾಜರಿ ಹಾಕುತ್ತಿತ್ತು. ಜೊತೆಗೆ ಮೈ ಕೊರೆಯುವ ಚಳಿ. ಈ ಕಾರಣಕ್ಕೆ ಮೊದಲ ಬೆಂಚ್ ಬೇಡ ಅನ್ನಿಸುತ್ತಿತ್ತು ಹಿಂದಿನ ಬೆಂಚ್ ಆದರೆ ಕಾಲ ಮೇಲೆ ಕಾಲು ಹಾಕಿ ಚಳಿ ಕಡಿಮೆ ಮಾಡಿಕೊಳ್ಳಬಹುದಲ್ಲ ಅನ್ನುವ ಉಪಾಯ ಅಷ್ಟೇ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ

Read More

ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿ ಆರಂಭ

ಒಂದು ಕಾಲಕ್ಕೆ ಭರ್ಜರಿ ಭತ್ತ ಬೆಳೆಯುತ್ತಿದ್ದ ಗದ್ದೆಗಳು ಈಗ ವಾಸದ ಮನೆಗಳಾಗಿವೆ. ತಿಳಿ ನೀರು ಹರಿಯುತ್ತಿದ್ದ ತೋಡು ಮನುಷ್ಯನ ಕೊಳಕು ಆ ತೋಡನ್ನು ಸೇರಿ ಸೇರಿಸಿಕೊಂಡು ಕಪ್ಪಗೆ ಹರಿಯುತ್ತಿದ್ದರೆ ಇದು ಮನುಷ್ಯನ ನಾಗರೀಕತೆಯ ಹಂಬಲದ ಮುಖವಾಣಿ ಅನ್ನಿಸುತ್ತದೆ. ಒಟ್ಟು ನಮ್ಮೂರು ಮಡಿಕೇರಿ ಅಲ್ಲ ಮಡಿಯಾದಕೇರಿ ಈಗ ನಗರೀಕರಣಕ್ಕೆ ಒಳಗುಗೊಳ್ಳುವ ಹಂಬಲದಲ್ಲಿ ಮೂಲ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.
ಸುಮಾವೀಣಾ ಬರೆಯುವ ಮಡಿಕೇರಿಯಲ್ಲಿ‌ ಕಳೆದ ಬಾಲ್ಯದ‌ ನೆನಪುಗಳ ಸರಣಿ “ಕೊಡಗಿನ ವರ್ಷಕಾಲ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ಅಡ್ಮಿನ್ ಸೂತ್ರಧಾರಿ, ನಾವ್ ಪಾತ್ರಧಾರಿ

ಸಮಾನ ಮನಸ್ಕರ ನಡುವೆ ಸಂವಹನ ಸಾವಧಾನವಾಗಿ ಆದಾಗ ಒಳ್ಳೆಯದೆ ಆಗುತ್ತದೆ. ಅಲ್ಲಿಯೇ ಆರೋಗ್ಯಕರ ಚರ್ಚೆಗಳು ಪ್ರಾಂಭವಾಗುತ್ತವೆ. ಗುಂಪಿನಲ್ಲಿ ನಡೆಯುವ ಚರ್ಚೆಗಳು ಅನ್ಯ ಗುಂಪಿಗೂ ಹರಿಯಬಹುದು. ಪರಸ್ಪರ ಅಭಿನಂದನೆಗಳಿಗೆ ಧನ್ಯವಾದಗಳು ಒಂದು ಹಂತಕ್ಕೆ ಇದ್ದರೆ ಚಂದ ಅತಿಯಾದರೆ ಅಸಹ್ಯ! ಕ್ಷಮಿಸಿ ‘ಅಸಹ್ಯ’ ಎಂದರೆ ‘ಹೊಲಸು’ ಎಂದಲ್ಲ ಇತ್ತೀಚೆಗೆ ಹೀನಾರ್ಥ ಪಡೆದುಕೊಂಡಿರುವುದು ಅ-ಸಹ್ಯ ಎಂದರೆ ಸಹಿಸಲು ಸಾಧ್ಯವಾಗದೆ ಇರುವುದೆಂದು. ಸಂದೇಶಗಳು, ಸುತ್ತೋಲೆ, ಜ್ಞಾಪಕ ಇದ್ದಂತೆ, ಏಕ ಕಾಲಕ್ಕೆ ಅನೇಕರಿಗೆ ಸಂದೇಶ ರವಾನೆಯಾಗುತ್ತದೆ ಉದಾಹರಣೆಗೆ, ಸರಕಾರದ ಆದೇಶ ಮದುವೆ ದಿನಾಂಕ, ಕೆಲಸಗಾರರಿಗೆ ಏಕ ಕಾಲದಲ್ಲಿ ಸಂದೇಶ ತಲುಪಿಸಲು ಬಹಳ ಅನುಕೂಲವಾಗಿದೆ ಇತ್ಯಾದಿ.
ಸುಮಾವೀಣಾ ಬರಹ ನಿಮ್ಮ ಓದಿಗೆ.

Read More

ಪ್ರಜ್ಞೇನ ಸುಪ್ತಪ್ರಜ್ಞೆ ಓವರ್ ಟೇಕ್ ಮಾಡಿದೆ…..

ಮನಸ್ಸಿನ ಅಹಂಕಾರ ಮೊದಲು ಅಮಲು ಆನಂತರ ಚಟ ನಂತರ ಅಧೋಗತಿ. ಈ ಅಧೋಗತಿ ಎಂಬ ಹಂತ ಅಲ್ಲಿಯವರೆಗೆ ವ್ಯಕ್ತಿ ಪರಿವರ್ತನೆ ಆಗಲಿಲ್ಲ ಎಂದರೆ ಆತ ವೃತ್ತಿ, ವೈಯಕ್ತಿಕ ಎರಡೂ ಕಡೆ ಮುಳುಗಿದಂತೆಯೇ ಸರಿ. ಇಲ್ಲಿ ಮೊಹಂತಿ ಹೆಂಡತಿಗೆ ವಿಚ್ಛೇದನ ಕೊಡುತ್ತಾನೆ. ಆಕೆ ನೀರಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಳ್ಳಲು ನೇರ ಕಾರಣನಾಗುತ್ತಾನೆ. ಆನಂತರ ಇತರ ಮಕ್ಕಳನ್ನು ನೋಡಿ ನನಗೂ ಇದ್ದಿದ್ದರೆ ಅನ್ನುವುದು, ಅವಳು ಇನ್ನೊಮ್ಮೆ ಬಂದರೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಕೇವಲ ಮನಸ್ಸಿನಲ್ಲಿ ಮಾತ್ರ ತೀರ್ಮಾನ ಮಾಡಿಕೊಂಡರೆ ಸಾಕೆ ಅದನ್ನು ಬಾಯಂಗಳದಲ್ಲೇ ಇರಿಸಿಕೊಂಡರೆ ಎದುರಿಗಿರುವವರ ಮನದಂಗಳ ತಲುಪುವುದು ಹೇಗೆ?
ಕೆ.ವಿ. ತಿರುಮಲೇಶರ ಕಾದಂಬರಿಗಳ ಕುರಿತು ವಿಶ್ಲೇಷಿಸಿದ್ದಾರೆ ಸುಮಾವೀಣಾ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ