Advertisement

Tag: ಸ್ವಾಮಿ ಪೊನ್ನಾಚಿ

ಸ್ವಾಮಿ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ವೃತ್ತ”

ಭಯಗೊಂಡ ವೆಂಕಯ್ಯ ಪಂಜು ಬಿಸಾಡಿ ದೂರ ಓಡಿದ. ಪಂಜು ಕಂಡ ಮಸೀದಿಯವರು ಇದು ಮೇಲಿನ ಕೇರಿಯವರದ್ದೇ ಕಿತಾಪತಿ ಎಂದು ತಾವೂ ನಾಲ್ಕಾರು ಕೊಳ್ಳಿ ತೆಗೆದುಕೊಂಡು ಮೇಲಿನ ಕೇರಿಯತ್ತ ಧಾವಿಸಿದರು. ಹಿಂದೂ ಮುಸ್ಲಿಂ ಕೋಮುಗಲಭೆ ಎಂದು ಪ್ರಚಾರಗೊಂಡ ಅದು ಟೀವಿ ಪೇಪರಿನಲ್ಲಿ ಸುದ್ದಿಯಾಯಿತು. ಯಾವ ಯುದ್ಧಕ್ಕೆ ತಾನೆ ಕೊನೆಯಿರುವುದಿಲ್ಲ? ಮತ್ತೆ ಯಾವ ಯುದ್ಧಕ್ಕೆ ತಾನೆ ನಿರ್ಧಿಷ್ಟವಾದ ಕಾರಣ ಬೇಕಿದೆ? ಕಾರಣವಿಲ್ಲದೆ ಎಷ್ಟೋ ಯುದ್ಧಗಳಾಗಿಲ್ಲವೇ? ಮತ್ತು ಅವು ಇದ್ದಕ್ಕಿದ್ದಂತೆ ನಿಂತೂ ಹೋಗಿಲ್ಲವೇ ?
ಸ್ವಾಮಿ ಪೊನ್ನಾಚಿ ಬರೆದ ಕತೆ “ವೃತ್ತ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

“ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕತೆಗಳಾದರೂ ಉಳಿಯುತ್ತವೆ”: ಹೃದಯ ಶಿವ ಕಥಾಸಂಕಲನಕ್ಕೆ ಸ್ವಾಮಿ ಪೊನ್ನಾಚಿ ಬರಹ

ಹೃದಯಶಿವ ಅವರ ಕಥೆಗಳನ್ನು ಓದುವ ಕುತೂಹಲದ ಮಜವೇ ಬೇರೆ. ಕನಕಪುರದ ಕೆಬ್ಬರೆ ಗ್ರಾಮದಲ್ಲಿ ಶುರುವಾದ ಕಥೆ ಬೆಂಗಳೂರಿನ ಸಿನಿಮಾರಂಗದಲ್ಲಿ ಬಂದು ನಿಲ್ಲುತ್ತದೆ. ವೈಯಕ್ತಿಕ ದನಿಯ ಆಚೆಗೆ ಕತೆಗಳು ವಿಸ್ತಾರಗೊಳ್ಳುತ್ತಾ ಸಮಷ್ಟಿಯೆಡೆಗೆ ಹೋಗುತ್ತವೆ. ಬದುಕಿನ ಪರಸ್ಪರ ವೈರುಧ್ಯಗಳೇ ಹೆಚ್ಚು ಕಥೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಥೆ ಓದುವಾಗ ಶುರುವಾಗುವ ನೆಗೆಟಿವ್ ಕಾಂಪ್ಲೆಕ್ಸ್ ಕೊನೆಯಲ್ಲಿ ಪಾಸಿಟಿವ್ ಆಗಿರುತ್ತದೆ. ಭರವಸೆ, ಆಶಾಭಾವ ಕಥೆಗಳಲ್ಲಿ ವ್ಯಕ್ತವಾಗುತ್ತವೆ.
ಹೃದಯ ಶಿವ ಹೊಸ ಕಥಾಸಂಕಲನ “ಸೂಪರ್ ಗಾಡ್ ಸಣ್ಣಯ್ಯ” ಕೃತಿಗೆ ಸ್ವಾಮಿ ಪೊನ್ನಾಚಿ ಮುನ್ನುಡಿ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ

“ಆ ಧೂಪದ ಹೈಕಳನ್ನು ಯಾರೂ ಹತ್ತಿಸಿಕೊಂಡು ಹೊಬ್ಗ್ಯಾಡ್ರಿ” ಎಂದು ಹೇಳಿದರೆ; ಎರಡು ದಿನ ಹೈಕಳು ಇಸ್ಕೂಲಿಗೆ ಬಂದರೆ ಮೂರನೆ ದಿನಕ್ಕೆ ಮತ್ತೆ ಅದೇ ರಾಗ ಅದೇ ಹಾಡು. ರೋಸಿ ಹೋದ ಮೇಷ್ಟ್ರು ಒಮ್ಮೆ ಬೆಟ್ಟದ ಇನ್ಸಪೆಕ್ಟ್ರು ಊರಿಗೆ ಬಂದಾಗ “ಯಾರಿಗೂ ಹೆದರದ ಇವರು ಪೋಲಿಸ್ನೋರ‍್ಗೆ ಖರೇ ಹೆದ್ರೂದು” ಎಂದು ಸ್ವಾಲಿಗ್ರ ಕೇರಿಗೆ, ಹೊಲೇರಕೇರಿಗೆ ಕರ್ಕೊಂಡೋಗಿ “ಮಕ್ಕಳನ್ನ ತಾಳುಬೆಟ್ಟಕ್ಕೆ ಧೂಪ ಮಾರುವುದಕ್ಕೆ ಕಳುಹಿಸಿದರೆ ಜೇಲಿಗೆ ಹಾಕಿಸ್ತೀನಿ ಎಂದು ರೋಪ್ ಹೊಡೆಸಿದರು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಸ್ವಾಮಿ ಪೊನ್ನಾಚಿ ಕತೆ “ಧೂಪದ ಮಕ್ಕಳು”

Read More

‘ದಾರಿ ತಪ್ಪಿಸುವ ಗಿಡʼಕ್ಕೆ ಓ.ಎಲ್. ನಾಗಭೂಷಣ ಸ್ವಾಮಿ ಮುನ್ನುಡಿ

ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ.
ಕತೆಗಾರ ಸ್ವಾಮಿ ಪೊನ್ನಾಚಿ ಹೊಸ ಕಥಾ ಸಂಕಲನ “ದಾರಿ ತಪ್ಪಿಸುವ ಗಿಡ”ಕ್ಕೆ ಓ ಎಲ್‌ ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ