Advertisement

Tag: kendasampige

“ಸರ್ವೆ” ಜನಾಃ ದುಃಖಿನೋಭವಂತು!

ಅಂತೂ ಇಂತೂ ಅಲ್ಲಿನ ಸೊಸೈಟಿಯಲ್ಲಿ ನಮ್ಮ ಖಾತೆ ತೆರೆದಿದ್ದು ಆಯ್ತು. ಬೆಳೆ ಸಾಲವಂತೂ ಸಿಕ್ಕಿತು. ಸ್ವಲ್ಪ ಉಸಿರಾಡುವಂತಾಯ್ತು. ಬೇಲಿ ಕಟ್ಟಲು ಸಾಲವನ್ನು ಮುಂದಿನ ವರ್ಷ ಕೊಡುತ್ತೇವೆ ಅಂತ ಅಲ್ಲಿನವರು ಹೇಳಿದರಾದರೂ ಒಂದು ಹೆಜ್ಜೆಯಾದರೂ ಮುಂದೆ ಬಂದೆನಲ್ಲ ಅಂತ ಖುಷಿಯಾಗಿತ್ತು. ಈ ಎಲ್ಲ ಪ್ರಕ್ರಿಯೆಗಳಲ್ಲಿ ಶಂಭುಲಿಂಗ ಹೆಗಡೆ ಮಾವನ ಪಾತ್ರ ತುಂಬಾ ದೊಡ್ಡದು. ಅವರಿಲ್ಲದಿದ್ದರೆ ನನಗೆ ಇಷ್ಟೆಲ್ಲ ಸುಲಭದಲ್ಲಿ ಸೊಸೈಟಿ ಸಾಲ ಸಿಗುತ್ತಿರಲಿಲ್ಲ.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ

Read More

ಸೀರೆಯ ಸೆರಗಿನಲ್ಲಿ ಅನ್ನ-ಸಾರು….!

ಹೊಸಪೇಟೆಯ ಬಡತನ ನನ್ನನ್ನು ದಿಗಿಲು ಬಡಿಸಿತು. ಬೆಳಗಿನ ನಾಷ್ಟಾ ಮತ್ತು ಮಧ್ಯಾಹ್ನದ ಊಟದ ವೇಳೆ, ತಂತಿಬೇಲಿಯ ಆಚೆ ಬಡವರು ಅನ್ನಕ್ಕಾಗಿ ಕಾಯುತ್ತಿದ್ದರು. ನಮಗೆ ಇಲ್ಲಿ ಬೇಕಾದಷ್ಟು ಆಹಾರ ನೀಡುತ್ತಿದ್ದರು. ನನ್ನ ಕೆಲವರು ಗೆಳೆಯರಿಗೆ ಆ ನಿರ್ಗತಿಕರ ಬಗ್ಗೆ ತಿಳಿಸಿ ಒಂದು ಯೋಜನೆ ರೂಪಿಸಿದೆ. ನಾವೆಲ್ಲ ಹೆಚ್ಚಿಗೆ ಅನ್ನ ಹಾಕಿಸಿಕೊಳ್ಳುವುದು. ಸ್ವಲ್ಪ ತಿಂದ ಹಾಗೆ ಮಾಡಿ ಅವರ ಬಳಿ ಹೋಗುವುದು. ಆ ಬಡ ಹೆಣ್ಣುಮಕ್ಕಳು ಸೆರಗೊಡ್ಡುವುದು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 62ನೇ ಕಂತು ನಿಮ್ಮ ಓದಿಗೆ.

Read More

ಗಾಢವಾಗಿ ಆವರಿಸಿಕೊಂಡ ಸಾವಿನ ಚಾದರದೊಳಗಿಂದ…

ಸಾವೇ ಹಾಗೆ ಅದು ಉಂಟು ಮಾಡು ಪರಿಣಾಮವೂ ತೀವ್ರತರವಾದದ್ದು. ಹತ್ತಿರದವರ ಸಾವು ನಮ್ಮ ಬದುಕನ್ನು ಪಲ್ಲಟಗೊಳಿಸುವ ರೀತಿ ಎಂಥವರನ್ನೇ ಆಗಲಿ ಮಾನಸಿಕವಾಗಿ ಕುಗ್ಗಿಸಿಬಿಡುತ್ತದೆ. ಅದು ಸಹಜವಾದ ಸಾವಾದರೆ ಅದನ್ನು ಸಹಜವಾಗಿಯೇ ಸ್ವೀಕರಿಸಲು ಪ್ರಯತ್ನಿಸಬಹುದು. ಆದರೆ ಅದು ಕೊಲೆಯೋ, ಆತ್ಮಹತ್ಯೆಯೋ ಆಗಿದ್ದರೆ, ನಿಜಕ್ಕೂ ಅದನ್ನು ಮನಸ್ಸು ಒಪ್ಪಲು, ನಂಬಲು ಸಿದ್ಧವಿರುವುದೇ ಇಲ್ಲ.
ಅಕಾಲಿಕ ಸಮಯದಲ್ಲಿ ಸಾವಿನ ಬಾಗಿಲು ತಟ್ಟಿದ ಹಲವು ಲೇಖಕಿಯರ ಕುರಿತು ಆಶಾ ಜಗದೀಶ್‌ ಬರಹ ನಿಮ್ಮ ಓದಿಗೆ

Read More

‘ಮುಂಬಯಿ ಕನ್ನಡ ಲೋಕʼದ ಅನಾವರಣ

ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ.
ಡಾ. ಕೆ. ರಘುನಾಥ್‌ ಬರೆದ ‘ಮುಂಬಯಿ ಕನ್ನಡ ಲೋಕʼ ಕೃತಿಯ ಕುರಿತು ದಯಾನಂದ ಸಾಲ್ಯಾನ್‌ ಬರಹ

Read More

ತೆರೆಮರೆಯ ಅಂತರಂಗದ ಕಥೆ…

ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ..
ಆಶಾ ರಘು ಹೊಸ ಕಾದಂಬರಿ “ಚಿತ್ತರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ