Advertisement

Tag: Kuvempu

ಕುವೆಂಪು – ಕನ್ನಡದ ಭಾವಸೆಲೆ ಹಾಗೂ ವೈಚಾರಿಕ ದಿಕ್ಸೂಚಿ: ಎಲ್.ಜಿ.ಮೀರಾ ಅಂಕಣ

ಕವಿಯಲ್ಲದವರ ಮಟ್ಟಿಗೆ ಸಾಧಾರಣ ಬೆಟ್ಟಗುಡ್ಡ ಅನ್ನಿಸಿಬಿಡಬಹುದಿದ್ದ ಕುಪ್ಪಳ್ಳಿಯ ಒಂದು ಸ್ಥಳವು ಈ ರಸಋಷಿಯ ಕಣ್ಣಲ್ಲಿ ಅತ್ಯಂತ ಪ್ರೀತಿಯ `ಕವಿಶೈಲ’ವಾದದ್ದು ಅವರಿಗಿದ್ದ ಅಮಿತ ಪ್ರಕೃತಿಪ್ರೇಮಕ್ಕೆ ಸಾಕ್ಷಿ. ಅವರೆಲ್ಲೇ ಇದ್ದರೂ ಅವರ ಮನಸ್ಸು ಸದಾ ಕಾಲ ತಮ್ಮ ಪ್ರೀತಿಯ ಮಲೆನಾಡನ್ನು ಧ್ಯಾನಿಸುತ್ತಿತ್ತು. “ನಾನು ಭೌತಿಕವಾಗಿ ಮೈಸೂರಿನಲ್ಲಿದ್ದರೂ ಮಾನಸಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಮಲೆನಾಡಿನಲ್ಲಿರುತ್ತೇನೆ. ಪ್ರತಿ ನಿತ್ಯ ಹಲವು ಸಾರಿ ನವಿಲುಕಲ್ಲಿಗೆ ಹೋಗಿ ಬರ್ತೀನಿ, ಕವಿಶೈಲದಲ್ಲಿ ಕುಳಿತು ಧ್ಯಾನ ಮಾಡ್ತೀನಿ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ಮೂರನೆಯ ಬರಹ

Read More

ಕಥೆಗಾರ ಕುವೆಂಪು: ಆಶಾಜಗದೀಶ್ ಅಂಕಣ

“ಇದೇ ಹೊತ್ತಿನಲ್ಲಿ ತನಗೆ ಅನ್ನಕೊಟ್ಟು ಕಾಪಾಡಿದ ಧಣಿಗಳ ಕುಟುಂಬವನ್ನು ಉಳಿಸಬೇಕೆಂದು ನಿಶ್ಚಯ ಮಾಡಿಕೊಂಡ ಲಿಂಗ, ತನ್ನ ತಬ್ಬಲಿ ಮಗನನ್ನು ನೆನೆಸಿಕೊಳ್ಳುತ್ತಲೇ ಯಾರಿಗೂ ತಿಳಿಯದಂತೆ ಹೊಳೆಗೆ ಹಾರಿಕೊಂಡುಬಿಡುತ್ತಾನೆ. ಭಯದಲ್ಲಿದ್ದ ಸುಬ್ಬಣ್ಣನ ಮನೆಯವರಿಗೆ ಅದು ತಿಳಿಯುವುದಿಲ್ಲ. ದೋಣಿ ಪಕ್ಕದೂರನ್ನು ತಲುಪುತ್ತದೆ. ಆಗ ಲಿಂಗ ಇಲ್ಲದಿರುವುದು ಗೊತ್ತಾಗಿ ಎಲ್ಲರೂ ಅವನನ್ನು ಹುಡುಕುತ್ತಾರೆ ಮತ್ತು ಅವನಿಗಾಗಿ ಕಣ್ಣೀರಿಡುತ್ತಾರೆ. ಕೊನೆಗೆ ಅವನ ಆಸೆ ಬಿಡುತ್ತಾರೆ. ಆದರೆ ಮರುದಿನ ಆಶ್ಚರ್ಯವೆಂಬಂತೆ.. “

Read More

ರಾಮಾಯಣ ನೇಯ್ಗೆಯಲ್ಲಿ ಏಸೊಂದು ಜೀವಗಳು:ಸುಜಾತಾ ತಿರುಗಾಟ ಕಥನ

“ಇದು ಕುವೆಂಪು ಎಂಬ ಅಕ್ಕಸಾಲಿಗನ ಕೈಯ್ಯಲ್ಲಿ ವಾಲ್ಮೀಕಿಯ ಚಿನ್ನ ಕರಗಿ ವರ್ತಮಾನದ ಅಪರಂಜಿಯಾಗಿ ಮಿಂಚಿದ ಕಣ್ಣೋಟ. ಕ್ರೌಂಚಪಕ್ಷಿಗಳ ಒಡನಾಟವನ್ನು ಮುರಿಯದೆ ಬದುಕಿಸುವ ಕುವೆಂಪು ಪರಿಕಲ್ಪನೆಯೇ ಜೀವಪರ. ಇದು ರಾಮನ ಓಟವಾದರೂ ಅಪ್ಪಟ ಮಾನವನ ನಿಜನಾಯಕನ ರಾವಣನೊಳಗಿನ ಮನಃಪರಿವರ್ತನೆಯ ಪಾಠ.”

Read More

ಪ್ರವಾಸವೆಂಬ ‘ದರ್ಶನ’:ಸುಜಾತಾ ತಿರುಗಾಟ ಕಥನ

ಇದನ್ನು ಬರೆಯುತ್ತಿರುವಾಗಲೇ ಯಾವುದೋ ಹಕ್ಕಿಯೊಂದು ಸ್ವರ ಹಿಡಿಯಲಾರದ ಸದ್ದನ್ನು ಮಾಡುತ್ತಿದೆ. ಅರೆಬರೆ ಕೂಗುವ ಕಪ್ಪೆಯಂತೆ. ಇನ್ನೊಂದು ಹಕ್ಕಿಯ ಸದ್ದು ಗಂಟಲಲ್ಲಿ ಸ್ವರವೇಳಿಸುತ್ತಿದೆ. ಜೀರುಂಡೆ ಸದ್ದು ಕಿವಿಗಪ್ಪಳಿಸುತ್ತಿದೆ. ಮಳೆ ಬರುವುದೇನೋ….

Read More

ಕವಿಶೈಲದ ಅಂದಿನ ಸಂಜೆ: ನಾಗಶ್ರೀ ಅಂಕಣ

ಹೀಗೆ ಸಿಕ್ಕಿದವರೊಡನೆ ಮಾತಾಡುತ್ತಾ, ಏನೋ ಸುಖದಲ್ಲಿ ಅಲ್ಲೆಲ್ಲಾ ನೋಡಿಕೊಂಡು ಕವಿಶೈಲಕ್ಕೆ ಹೋದಾಗ ಈ ಮಾನಪ್ಪ, ಕವಿಶೈಲಕ್ಕೆಂದೇ ಇರುವ ಕಾವಲುಗಾರನೋ  ಅಥವಾ ಯಾವುದಕ್ಕೂ ಸಂಬಂಧಪಡದೆ ಸುಮ್ಮನೆ ತನ್ನ ಪಾಡಿಗಿರುವ ಜೀವವೋ ತಿಳಿಯಲಿಲ್ಲ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ