Advertisement
ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ಗೀತಾ ಹೆಗಡೆ ಬರೆದ ಈ ದಿನದ ಕವಿತೆ

ವ್ಯಕ್ತಮಧ್ಯ

ಅವರವರ ಅಂತರಿಕ್ಷದಲಿ
ವಿಕಲ್ಪವೃಕ್ಷದ ಕಣೆಗೆ ನೇತು
ಹಾಕಿದ-
ತೂಗುತೊಟ್ಟಿಲು

ಅಂತಿಂಥ ಅಂತರ್ಮುಖಿಯಲ್ಲ
ನಿಂತ ಜೋಕಾಲಿ;
ಯಾರಾದರೊಬ್ಬರು ತಳ ಊರುವವರೆಗೆ-
ಸರದಿಯಲ್ಲಿ

ಬಿಚ್ಚುಗೈಯಿಂದ ಒಂದು ಮೀಟು
ನೆಲ ಸರಿದರೆ ಒಂದು ದಾಟು
ಭೂಮ್ಯಾಕಾಶಕೆ ಅಲೆಯುವಂತೆ-
ಜೀಕು..ಜೀಕು..
ಜೀಕು!

ಹಿಂದಿನದೆಲ್ಲವ ಬಿಟ್ಟೇ-
ಬಿಡುವ ಸ್ವಗತ;
ಮುಂದಿನದೆಲ್ಲವ ಮುಟ್ಟೇ-
ಬಿಡುವ ಎನುತ

ಪ್ರತಿ ಜೀಕಿಗೆ ಪ್ರಗತಿ-
ಯ ಶ್ರುತಿ ಭಾವಿಸುತ
ಅಲ್ಲಲ್ಲೇ ವಿಸ್ತಾರ- ಕೆರೆ-
ಗೆಸೆದ ಕಲ್ಲು!

ಲೋಲಕದ ಗಿರಕಿಗಳ
ಅಣಕಿಸುತ ಜೋಕಾಲಿ
ಲಂಬ ಲಂಬಿಸುತ
ಊರ್ಧ್ವಕೇರಿಸುತ.. ಗಡಿ-
ಯಾರದಾಗಿರಲಿ
ಪರಿಧಿಯೊಂದಿದೆಯಲ್ಲಿ..!

ಕ್ಷಣ-ಕ್ಷಣಕೂ ಜರುಗುವ
ಕೇಂದ್ರಬಿಂದುವಿನಹವಾಲು
ಮೂಲಾಧಾರಕೆ
ಸೇರಲು ತವಕಿಸುವ ಅತಿಮಂದ್ರ-
ನಾದವೊಂದು
ಇಹದಲ್ಲೆ ಪರಮಪದ
ಶೋಧಿಸಲು
ಅಣುಗಾಲ
ಗಾಳಿಗೊಡ್ಡಿದ
ಅಹಮಿಕೆಯ ಕಂದೀಲು.

ಆದಿ ಅಜ್ಞಾತ
ಅನುವಾದಿ ಉಪೋದ್ಘಾತ
ವ್ಯಕ್ತಮಧ್ಯದಿ
ಜೀಕುಬಿದ್ದಿದೆ
ಜೋಕಾಲಿ-
ಅವ್ಯಾಹತ..

About The Author

ಗೀತಾ ಹೆಗಡೆ, ದೊಡ್ಮನೆ

ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ