Advertisement
ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಇಳವಾಯಿ ವಿಜಯೇಂದ್ರನ್ ಅವರ ತಮಿಳು ಕವಿತೆ

ನರೇಂದ್ರಬಾಬು ಶಿವನಗೆರೆ ಅನುವಾದಿಸಿದ ಇಳವಾಯಿ ವಿಜಯೇಂದ್ರನ್ ಅವರ ತಮಿಳು ಕವಿತೆ

ಕಳೆದು ಹೋದವರು

ಆಲದ ಮರಕ್ಕೆ ಜೋತು ಬಿದ್ದ
ಉದ್ದುದ್ದ ಬಿಳಿಲುಗಳು
ಆ ಕಾಲಕ್ಕೆ ಅವನ್ನು ಹಿಡಿದು ಜೋಕಾಲಿ ಆಟ ಆಡುತ್ತಿದ್ದ ನಾವು.
ಅನತಿ ದೂರದ, ಪೊನ್ನೊಚ್ಚಿ ಮರ
ನಗುತ್ತಿರುವ ಅದರ ಹೂಗಳು.
ಪೂರ್ವಕ್ಕೆ, ಮುಂಗಾರು ಮಳೆಯಿಂದ ಉಕ್ಕಿ ನಿಂತ
ವಿಶಾಲ ಕೆರೆ.

ಮುಪ್ಪಾಗಿ ಬಿದ್ದ ತಾಳೆ ಮರದ ಬುಡದಿಂದ ಮಾಡಿದ್ದ ದೋಣಿಯಲ್ಲಿ
ಸಮಯವೇ ಹುಟ್ಟಾಗಿ, ಆ ದಡಕ್ಕೆ ಸಾಗುತ್ತಿದ್ದ
ಮಕ್ಕಳಷ್ಟೆ, ಕಣ್ಮರೆ!

– ಈ ಯುದ್ದದ ಎಲ್ಲ ಬಾಂಬುಗಳಿಗೂ ತಲೆಯನ್ನು ತಗ್ಗಿಸದೇ ಹೋದ-
ತಾಳೆ ಮರ ಹತ್ತಿ
ತೋಡಿ ಇಳಿಸುತ್ತಿದ್ದ ಮುದುಕನನ್ನು ಕೇಳಿದೆ.
ಇವರೆಲ್ಲ ಎಲ್ಲಿ?

ಉದ್ವೇಗದಿಂದ ಅವನು ಹೇಳಿದ,
“ಅವರೆಲ್ಲಾ ಕೆನಡಾ ದೇಶದ
ಹಣದ ಹೊಲಗಳನ್ನು ಕಟಾವು ಮಾಡಲು ಹೋಗಿದ್ದಾರೆ.”

ತಮಿಳು ಮೂಲ: ಇಳವಾಯಿ ವಿಜಯೇಂದ್ರನ್
ಇಂಗ್ಲೀಷ್ ಗೆ: ಲಕ್ಷ್ಮಿ ಹಾಲ್ಸ್ಟ್ರಾಮ್

About The Author

ನರೇಂದ್ರ ಶಿವನಗೆರೆ

ವೃತ್ತಿಯಲ್ಲಿ ವಿಜ್ಞಾನದ ಮೇಸ್ಟ್ರು, ಸಾಹಿತ್ಯ ಮತ್ತು ಪ್ರಪಂಚದ ಸಿನಿಮಾ ಬಗ್ಗೆ ತುಂಬಾ ಆಸಕ್ತಿ. ಕಳೆದ ಹತ್ತು ವರ್ಷಗಳಿಂದ ದೇಶ ಬಿಟ್ಟು ಅಲೆಮಾರಿ.

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ