Advertisement
ನಿನ್ನ ಬಗಲಲ್ಲಿ ಜೋಳಿಗೆಯಂತೆ ಸುಸ್ತಾಗಿ:ನಕ್ಷತ್ರ ಬರೆದ ದಿನದ ಕವಿತೆ

ನಿನ್ನ ಬಗಲಲ್ಲಿ ಜೋಳಿಗೆಯಂತೆ ಸುಸ್ತಾಗಿ:ನಕ್ಷತ್ರ ಬರೆದ ದಿನದ ಕವಿತೆ

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಕ್ಷತ್ರ ಬರೆದ ದಿನದ ಕವಿತೆ.

ನನ್ನ ಮುದ್ದು ಮತಿಭ್ರಮಣೆಗೆ
ನೀನೇ ಏನಾದರೂ ಕೊಡಬೇಕಷ್ಟೇ
ಏನಿಲ್ಲದಿದ್ದರೂ ಯಾರೋ
ಚುಂಬಿಸಿದ ತುಟಿಯನ್ನಾದರೂ!

ಗೊತ್ತು ನನಗೆ
ಎಲ್ಲಾ ಮುಗಿಸಿದ ಹೊತ್ತು
ಆ ದ್ವೀಪದಲ್ಲಿ ಬೇಕಂತಲೇ
ಬೆನ್ನು ಮಾತ್ರ ಒದ್ದೆಯಾಗುವಂತೆ
ಮಲಗಿ ಮೇಲೆ ನೋಡುವುದು
ಮತ್ತು ಈ ತಡರಾತ್ರಿಯಲ್ಲಿ
ನಿನ್ನ ನೋಡಿ ತಡೆಯಲಾರದೆ
ನಿನ್ನ ಕಣ್ಣಲ್ಲೇ ನನಗೆ ಮುಕ್ತಿ
ದೊರೆಯುವುದು

ಹೊಸ ಬೆಳಕಿಗೆ ನೀನು
ಕಾಲುದಾರಿ ಅಡ್ಡಹಾದಿಯಲ್ಲಿ
ಹೇಳದೆ ನಡೆವಾಗ, ನಿನ್ನ ಬಗಲಲ್ಲಿ
ಜೋಳಿಗೆಯಂತೆ ಸುಸ್ತಾಗಿ
ಜೋಲಾಡಿಕೊಳ್ಳುತ್ತೇನೆ
ತುಂಬಿಸಿಕೊಂಡಷ್ಟು
ಹೆಗಲು ಭಾರವಾದರೆ
ನಾನು ಹಗುರಾಗುವುದು
ನೀನು ತಬ್ಬಿಬ್ಬುಗೊಳಿಸುವ ರೀತಿಗೆ

About The Author

ನಕ್ಷತ್ರ

ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ. ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ. ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ!

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ