Advertisement
ವಸ್ತಾರೆ ಬರೆದ ದಿನದ ಕವಿತೆ  ` …..ಒಬ್ಬಳು’

ವಸ್ತಾರೆ ಬರೆದ ದಿನದ ಕವಿತೆ ` …..ಒಬ್ಬಳು’

ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ editor@kendasampige.com360degree.com ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. 

…..ಒಬ್ಬಳು

ಅವನಿಲ್ಲೇ ಇದ್ದಾನೆ
ಎದುರಿಗೇ
ಕೋವಿಯ ಕುದುರೆಯಲ್ಲಿ
ಸಾವಿನ ಬೆರಳು ಮೀಟುತ್ತ

ಸೆಟೆದು ನಿಂತವರೆಲ್ಲ
ಬಿದ್ದು ಮಲಗಿದರು ಚೆಲ್ಲಾಪಿಲ್ಲಿ
ಕಣ್ಣೆದುರೆ

ಹೆಗಲಿಗಿನ್ನೂ ವಯಸು ಜಗ್ಗಿದಂತಿಲ್ಲ
ಮೊದಲ ಸಲ ಗಡ್ಡ ಮಾಡಿಕೊಂಡಾದ
ಗಾಯ ಸಹಿತ ಮಾಸಿಲ್ಲ
ತಿದ್ದಿದ ಕದಪು, ಗದ್ದ ಚೂಪು
ಕಸುವು ಖಂಡದ ಮೀನ-
ಚಂದವೆನ್ನಲು ಯಾವ ಅಡ್ಡಿಯಿಲ್ಲ

ಸಾವಿಗೂ ಹೀಗೆ
ಸುಂದರಾಂಗ ಹರೆಯವಿದೆಯೆಂದು
ಗೊತ್ತಿದ್ದರೆ ಮುತುವರ್ಜಿಯಿಂದ
ಅಣಿಗೊಂಡೇ ಬರಬಹುದಿತ್ತು

ಅಂತ ಕೊನೆಗೂ ಪೇಚಾಡಿಕೊಂಡೇ
ಮೈ ಚೆಲ್ಲಿದಳು

(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು)

About The Author

ನಾಗರಾಜ ವಸ್ತಾರೆ

ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು.

1 Comment

Leave a comment

Your email address will not be published. Required fields are marked *

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ