Advertisement
ಹೂ ಪದರ: ಎಚ್. ಆರ್. ರಮೇಶ ಬರೆದ ಈ ದಿನದ ಕವಿತೆ

ಹೂ ಪದರ: ಎಚ್. ಆರ್. ರಮೇಶ ಬರೆದ ಈ ದಿನದ ಕವಿತೆ

ಹೂ ಪದರ

ಗುರುತ್ವ, ಗುರುತು ಮೀರಿ
ಇಳಿಯುವುದು
ಇಳಿಸಿಕೊಳ್ಳುವುದು
ಸಂಧಿಸಿದಾಗ
ಒಳಗಿಲ್ಲ
ಹೊರಗಿಲ್ಲ
ದಿಕ್ಕು ವಾಸ್ತವಕೆ
ಅವಾಸ್ತವದಲಿ ಇರದು ದಿಕ್ಕು
ಬೆಳಕಿನ ವೇಗ
ಕಾಲದ ಚಲನೆ
ತೀವ್ರದಲಿ
ಇರದು ಮೇರೆ ಅನುಭವಕೆ
ತಟಸ್ಥ ಭಾಷೆಗೆ ಭಾಷೆಯೇ
ಇಳಿಯುತ್ತಿದೆಯೋ ಎಳೆಯುತ್ತಿದೆಯೋ
ನುಡಿಯಲು
ಗತಿಸಿ ಸ್ಥಿತಿ
ಮಿಳಿತ
ಅಣು ಪ್ರವಾಹ
ಅದರಲ್ಲಿ ಇದು ಇದರಲ್ಲಿ ಅದು
ಅದರಲ್ಲಿ ಇದರಲ್ಲಿ ಅದು
ಇದರಲ್ಲಿ ಅದರಲ್ಲಿ ಇದು
ಹೂ ಪದರಿನ ಆಕಾಶದಲಿ

About The Author

ಎಚ್ ಆರ್ ರಮೇಶ್

ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ