Advertisement
ಹೂ ಪದರ: ಎಚ್. ಆರ್. ರಮೇಶ ಬರೆದ ಈ ದಿನದ ಕವಿತೆ

ಹೂ ಪದರ: ಎಚ್. ಆರ್. ರಮೇಶ ಬರೆದ ಈ ದಿನದ ಕವಿತೆ

ಹೂ ಪದರ

ಗುರುತ್ವ, ಗುರುತು ಮೀರಿ
ಇಳಿಯುವುದು
ಇಳಿಸಿಕೊಳ್ಳುವುದು
ಸಂಧಿಸಿದಾಗ
ಒಳಗಿಲ್ಲ
ಹೊರಗಿಲ್ಲ
ದಿಕ್ಕು ವಾಸ್ತವಕೆ
ಅವಾಸ್ತವದಲಿ ಇರದು ದಿಕ್ಕು
ಬೆಳಕಿನ ವೇಗ
ಕಾಲದ ಚಲನೆ
ತೀವ್ರದಲಿ
ಇರದು ಮೇರೆ ಅನುಭವಕೆ
ತಟಸ್ಥ ಭಾಷೆಗೆ ಭಾಷೆಯೇ
ಇಳಿಯುತ್ತಿದೆಯೋ ಎಳೆಯುತ್ತಿದೆಯೋ
ನುಡಿಯಲು
ಗತಿಸಿ ಸ್ಥಿತಿ
ಮಿಳಿತ
ಅಣು ಪ್ರವಾಹ
ಅದರಲ್ಲಿ ಇದು ಇದರಲ್ಲಿ ಅದು
ಅದರಲ್ಲಿ ಇದರಲ್ಲಿ ಅದು
ಇದರಲ್ಲಿ ಅದರಲ್ಲಿ ಇದು
ಹೂ ಪದರಿನ ಆಕಾಶದಲಿ

About The Author

ಎಚ್ ಆರ್ ರಮೇಶ್

ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ