Advertisement

ಸುವರ್ಣ ಚೆಳ್ಳೂರು

ಅಮರಾವತಿ ಎಂಬ ಹುಚ್ಚಿಯ ವಿಸ್ಮಯ

ಉಸಿರಾಡಿದ್ದೆ ಅವಳೆದೆ ನಡುವೆ. ಏನೊ ಸುಖ ತೊಟ್ಟಿಲ ಕೂಸಂತೆ. ತಾಯನ್ನು ಅಪ್ಪ ಕೊಲ್ಲುವನು ಎಂಬುದು ಈ ಹುಚ್ಚಿಗೆ ಹೇಗೆ ಗೊತ್ತಾಯಿತು! ಯಾರಿಗೂ ಗೊತ್ತಿಲ್ಲದ್ದ ಹೇಗೆ ಪತ್ತೆ ಮಾಡಿದ್ದಳು. ಇವಳೆಂತಹ ಹುಚ್ಚಿ. ಇಲ್ಲವೇ ಯಕ್ಷಿಣಿ ಇರಬೇಕೇ? ಎಷ್ಟು ವಿಷಯಗಳೆಲ್ಲ ತಂತಾನೆ ಅವಳಿಗೆ ತಿಳಿಯುತ್ತಿದ್ದವು. ಅವತ್ತೊಂದಿನ ನಟ್ಟಿರುಳಲ್ಲಿ ನಾಳೆ ಬೆಳಿಗ್ಗೆ ಇಂತವರು ಸಾಯುತ್ತಾರೆ ಎಂದು ಹೇಳಿದ್ದಳು. ಹಾಗೇ ಆ ಊರ ದೊಡ್ಡ ಸಾಹುಕಾರ ಪ್ರಾಣ ಬಿಟ್ಟಿದ್ದ. ಒಹೋ; ಅವಳಲ್ಲಿ ಮೃತ್ಯು ದೇವತೆಯೂ ಸೇರಿಕೊಂಡಿದ್ದಾಳೆಂದು ಜನ ಅವಳ ಕಣ್ಣಿಂದ ತಪ್ಪಿಸಿಕೊಳ್ಳುತ್ತಿದ್ದರು. ಮೊಗಳ್ಳಿ ಗಣೇಶ್ ಸರಣಿ

Read More

ರೇಷ್ಮೆಯ ಮಾಂತ್ರಿಕ ಚಿಟ್ಟೆಗಳ ಅಸುಖ

ನಾನೂ ನನ್ನ ತಾಯಿಯೂ ಅಪ್ಪನ ಆದೇಶಗಳಿಗೆ ಸದಾ ಸಿದ್ಧವಾಗಿರಲೇಬೇಕಿತ್ತು. ಆಗಿನ್ನೂ ಆತ ಪೇಟೆಯ ಎಂಡದ ದಾಸನಾಗಿರಲಿಲ್ಲಾ. ಖಡಕ್ ಆದ ಮನುಷ್ಯ. ಅತ್ಯುಗ್ರ ಸ್ವಾಭಿಮಾನಿ. ಆ ಕ್ಷಣವೇ ಅಲ್ಲೇ ಮರಣವಾದರೂ ಚಿಂತೆ ಇಲ್ಲಾ ಎಂದು ಅನ್ಯಾಯದ ವಿರುದ್ಧ ಪ್ರತಿಭಟಿಸಿ ಇಡೀ ಊರಿಗೆ ಊರನ್ನೇ ಎದುರು ಹಾಕಿಕೊಂಡು ದಂಗೆ ಏಳುತ್ತಿದ್ದ. ಅವನ ರೇಷಿಮೆಯ ಮನಸ್ಸೇ ತಿಳಿಯುತ್ತಿರಲಿಲ್ಲ. ಅತ್ತ ತಾತ ತನ್ನ ಹೋಟೆಲ್ ಕಾಯಕದಲ್ಲಿ ಮುಳುಗಿರುತ್ತಿದ್ದ. ಎಷ್ಟೋ ಬಡವರಿಗೆ ಸುಮ್ಮನೆ ಸಾಲದ ಲೆಕ್ಕದಲ್ಲಿ ಅನ್ನಹಾಕುತಿದ್ದ ಎಂದೂ ಸಾಲ ಕೇಳಿರಲಿಲ್ಲ ಯಾರನ್ನೂ ತಾತ.

Read More

ನನ್ನ ನಿರುಮ್ಮಳ ಇರುಳು ನನ್ನದು…

ಅಲ್ಲೊಂದು ಸಹಜ ಜಲ ಬಾವಿ ಇತ್ತು ಅನಾದಿಯಿಂದಲೂ. ಅದರ ಪವಿತ್ರ ಜಲದಿಂದಲೇ ಆ ಕಾಲದ ವೈದಿಕರು ಧರ್ಮ ಕಾರ್ಯ ಎಸಗುತ್ತಿದ್ದುದು… ಅದಕೆಂದೇ ಆ ಗೊಂಡಾರಣ್ಯ ಪ್ರಸಿದ್ಧವಾಗಿತ್ತು ಆ ಕಾಲಕ್ಕೆ. ಈಗದು ಒಂದು ಹೊಂಡವಾಗಿತ್ತು. ಬೇಸಿಗೆಯಲ್ಲಿ ದಾಹಕ್ಕಿಳಿದ ಪ್ರಾಣಿಗಳು ಆ ಸನಾತನ ಜಾರಿನ ಹೂಳಿನಲ್ಲಿ ಸಿಲುಕಿ ಎದ್ದು ಬರಲಾರದೆ ಅಲ್ಲೇ ಸಮಾಧಿ ಆಗಿದ್ದವು. ಬಾಯಾರಿ ಅಲ್ಲಿ ಸಿಲುಕಿದವರ ಪಾಡನ್ನು ಅರ್ಥಮಾಡಿಕೊಳ್ಳಿ! ಧರ್ಮ ಸೂಕ್ಷ್ಮವನ್ನು ನಾಳೆ ಅರ್ಥ ಮಾಡಿಕೊಳ್ಳಿ ಮಕ್ಕಳೇ; ಈಗಲೇ ಹೇಳಬಾರದು!

Read More

ಒಡಲ ಕುಡಿಯ ಕಿತ್ತುಕೊಂಡವರಿಗೆ ಎಷ್ಟು ಸುಖವೋ

ನಾನಾಗ ಎಷ್ಟು ಪರಿಚಿತ ಆಗಿದ್ದೆ ಎಂದರೆ… ಯಾವತ್ತೂ ಅತ್ತು ಅತ್ತೂ; ಕಣ್ಣೀರ ಬರೆ ಇಳಿದು ಉಳಿದು ಉಳಿದು ಮಚ್ಚೆಯಂತೆ ಕೆನ್ನೆ ಮೇಲೆ ಬರೆಯ ಗುರುತು ಇರುತ್ತಿತ್ತು. ನಾವಾಗ ಮುಖ ತೊಳೆವುದೆಲ್ಲಿತ್ತು. ಕಣ್ಣೀರೇ ಅಂಟಿರುತ್ತಿದ್ದವು. ನನ್ನ ತಾಯ ಸಂಗಡವೇ ನನಗೆ ಸಿಗುತ್ತಿರಲಿಲ್ಲ. ಸದಾ ಯಾವತ್ತೂ ಕಸಮುಸುರೆಯ ಕೆಲಸದ ಜೀತದವಳಂತಿದ್ದಳು. ನನ್ನ್ ತಮ್ಮನ ಅವರು ದತ್ತು ತೆಗೆದುಕೊಂಡು ಹೋದ ನಂತರ ಮತ್ತೂ ಮೆತ್ತಗಾಗಿ ಬಿಟ್ಟಿದ್ದಳು.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಹತ್ತನೇಯ ಕಂತು.

Read More

ಒಡಲ ಕುಡಿಯ ಕಿತ್ತುಕೊಳ್ಳಲು ತಾಯ ಹಂಗೇ

ಆ ಮಂಗಾಡಳ್ಳಿಯವನ ನಿಮ್ಮಪ್ಪ ಹಿಡಿಸಿ ಕಡಿಸಿಬಿಟ್ಟನಂತಲ್ಲಾ… ಪ್ರಾಣ ಮಿತ್ರಾ ಅಂತಿದ್ದ. ಪ್ರಾಣ ಮಿತ್ರನೇ ಪ್ರಾಣ ತಿಂದು ಬಿಟ್ಟನಲ್ಲಾ… ತಂದೆ ತಾಯಿ ಮಾಡಿದ ಪಾಪ ಮಕ್ಕಳಿಗೆ ಶಾಪವಾಗಿ ಬಡಿಯುತ್ತದಂತೇ… ಯಾರ ತಪ್ಪಿಗೆ ಯಾರ ಶಿಕ್ಷೆಯೋ ನಿನ್ನ ನೋಡಿದರೆ ಅಯ್ಯೋ ಅನಿಸುತ್ತದೆ. ನಿಮ್ಮಪ್ಪನ ಮೇಲಿನ ಸಿಟ್ಟಿಗೆ ನಿಮ್ಮಜ್ಜಿಯೆ ಕತ್ತು ಮುರಿಯಲು ಮುಂದಾಗಿದ್ದಳಂತಲ್ಲಾ… ನಿಮ್ಮಜ್ಜಿಯೇ ನನ್ನ ಜೊತೆ ಹೇಳಿಕೊಂಡು ಕಣ್ಣೀರು ಹಾಕಿದ್ದಳು. ಸಂತೆಗೆ ಹೋದರೆ ನಿಮ್ಮಜ್ಜಿಯ ಮಾತಾಡಿಸೂ.
ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶʼ ಸರಣಿಯ ಒಂಭತ್ತನೇ ಕಂತು. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ