Advertisement

ಅಂಕಣ

ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ: ಎಲ್.ಜಿ.ಮೀರಾ ಅಂಕಣ

ಕನ್ನಡ ಮನಸ್ಸು ಪ್ರೀತಿಯನ್ನು ಪರಿಭಾವಿಸುವ ರೀತಿ: ಎಲ್.ಜಿ.ಮೀರಾ ಅಂಕಣ

ಆಧುನಿಕ ಕನ್ನಡ ಸಾಹಿತ್ಯದ ಬಹಳ ಮುಖ್ಯ ಘಟ್ಟವಾದ ನವೋದಯದಲ್ಲಿ ಪ್ರೇಮವನ್ನು ದಾಂಪತ್ಯದೊಳಗಿದ್ದಾಗ ಸಂಭ್ರಮಿಸುವ ಹಾಗೂ ಒಂದು ವೇಳೆ ಅದು ದಾಂಪತ್ಯದ ಹೊರಗಿದ್ದಾಗ ಅದನ್ನು ತ್ಯಾಗ ಮಾಡುವ ಮನೋಧರ್ಮ ಕಾಣುತ್ತಿತ್ತು. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿನ್ನೆಲೆಯಲ್ಲಿದ್ದ ನವ ಭಾರತ ನಿರ್ಮಾಣದ ಆಶಯ, ಸುಧಾರಣಾವಾದ, ಬ್ರಿಟಿಷರ ಕಣ್ಣಲ್ಲಿ ಭಾರತದ `ಸಭ್ಯ ಸಂಸ್ಕೃತಿ’ಯನ್ನು ಎತ್ತಿ ಹಿಡಿಯುವ ನೈತಿಕ ತವಕ ಇವು ಕುವೆಂಪು, ಬೇಂದ್ರೆ, ಪುತಿನ ಮುಂದೆ ಕೆ.ಎಸ್.ನರಸಿಂಹಸ್ವಾಮಿ ಇವರೆಲ್ಲರ ಪ್ರೀತಿಯ ಚಿತ್ರಣವನ್ನು ಪ್ರಭಾವಿಸಿದವು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

read more
ತೊಂಡೆ ಚಪ್ಪರ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ತೊಂಡೆ ಚಪ್ಪರ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ

ಅಮ್ಮನ ಈ ಸ್ವಾಭಾವ ಗೊತ್ತಿದ್ದ ನನಗೆ ತೊಂಡೆ ಚಪ್ಪರ ಗಾಳಿಗೆ ಹೀಗೆ ಮೂರು ಕಾಲಲ್ಲಿ ನಿಂತದ್ದು ನೋಡಿ ದಿಗಿಲಾಯಿತು. ನಾನು ಕೃಷಿ ಕೆಲಸವನ್ನು ಬಿಟ್ಟು ಬಹಳ ವರ್ಷಗಳೇ ಆಗಿಹೋಗಿವೆ. ಹಾಗಾಗಿ ಅಷ್ಟು ದೊಡ್ಡ ಚಪ್ಪರವನ್ನು ಅಪ್ಪನ ಹಾಗೆ ಹಿಡಿದು ನಿಲ್ಲಿಸಿ ಸರಿ ಮಾಡುವ ವಿಶ್ವಾಸ ನನಗೆ ಇರಲಿಲ್ಲ. ಅಮ್ಮನ ಮುಖ ನೋಡಿದೆ. ಬದುಕಿನ ಆಧಾರವೇ ಕಳೆದುಕೊಂಡ ಹಾಗೆ ಕೂತಿದ್ದು ನೋಡಿ ಬೇಸರ ಆಯ್ತು. ಸಮಾಧಾನದ ಮಾತು ಹೇಳುವ ಅಂತ ಅನ್ನಿಸಿದರೂ ಮಾತು ಹೊರಡದೆ ಅಮ್ಮನ ಹತ್ತಿರ ಸುಮ್ಮನೆ ಕುಳಿತೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಎರಡನೆಯ ಬರಹ

read more
ಗುರುವಿನ ಎದುರಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಗುರುವಿನ ಎದುರಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಏನೇ ಆದರೂ ಇದು ತುಂಬ ಅಸಹಜ ಅಂತನ್ನಿಸಿತ್ತು. ತನ್ನ ವಯಸ್ಸಿನ ಸ್ನೇಹಿತರೇ ಇಲ್ಲದ, ಹೆಚ್ಚು ಹೆಚ್ಚು ಮಾನವೀಯಗೊಳಿಸುವ ಕಲೆಗಳ ಪರಿಚಯವಿಲ್ಲದ, ವಯಸ್ಸಿಗೆ ತಕ್ಕ ಜೀವನೋತ್ಸಾಹ ಇಲ್ಲದ, ಮುದುಕಿಯರ ಜೊತೆ ತೀರ್ಥಯಾತ್ರೆಗೆ ಹೋಗುವ, ಉಳಿದಂತೆ ಜನಸಂಪರ್ಕ ತೀರಾ ಕಮ್ಮಿಯಿರುವ ಬದುಕಿನ ಶೈಲಿಯ ಪರಿಣಾಮವೇ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂರನೆಯ ಬರಹ

read more
ಕನ್ನಡ ಪ್ರಜ್ಞೆ: ಸುಕನ್ಯಾ ಕನಾರಳ್ಳಿ ಅಂಕಣ

ಕನ್ನಡ ಪ್ರಜ್ಞೆ: ಸುಕನ್ಯಾ ಕನಾರಳ್ಳಿ ಅಂಕಣ

ನನ್ನ ಮನೆಗೆ ಯಾವ ಮಕ್ಕಳು ಬಂದರೂ ಕನ್ನಡದಲ್ಲಿ ಮಾತಾಡೋದಾದ್ರೆ ಮಾತ್ರ ಒಳಗೆ ಬನ್ನಿ ಅಂತ ಯಾವ ಮುಲಾಜಿಲ್ಲದೆ ಹೇಳಿಬಿಡ್ತೀನಿ. ಮೊನ್ನೆ ಮಹಾ ತರಾತುರಿಯಲ್ಲಿ ನಾಲ್ಕು ಮಕ್ಕಳು ಬಾಗಿಲು ಬಡಿದ್ರು. ಎಲ್ರೂ ಇಂಗ್ಲೀಶಲ್ಲಿ ಒಟ್ಟಿಗೆ ಮಾತಾಡ್ತಾ ಇದ್ರು. ಅವರನ್ನ ತಡೆದು ನಿಲ್ಲಿಸಿ ‘ಕನ್ನಡದಲ್ಲಿ ಹೇಳಿ’ ಅಂದೆ. ತಟ್ಟನೆ ಮೌನ. ಅರೆ ಗಳಿಗೆಯ ನಂತರ ಒಂದು ಮಗು ಧೈರ್ಯ ಮಾಡಿ ‘ನಾವು ಪ್ಲೇ ಮಾಡ್ತಾ ಇದೀವಿ. ಅಲ್ಲಿ ಅಭಿ ಕೌಂಟ್ ಮಾಡ್ತಾ ಇದಾನೆ. ಅದಕ್ಕೆ ನಾವೆಲ್ಲ ರನ್ ಮಾಡಿಕೊಂಡು ಬಂದ್ವಿ. ನಿಮ್ಮನೇಲಿ ಹೈಡ್ ಮಾಡಿಕೊಬಹುದಾ?ʼನಾನು ಕೇಳಿದ್ದು ಕನ್ನಡದಲ್ಲಿ ಹೇಳಿ ಅಂತ, ಕಿಚಡಿಯಲ್ಲಿ ಅಲ್ಲ ಎಂದಿದ್ದು ಪಾಪ ಮಕ್ಕಳಿಗೆ ಅರ್ಥ ಆಗಲಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಎರಡನೆಯ ಬರಹ

read more

ಅವಳ ಹೆಸರು ಗೀತ…: ವಿನಾಯಕ ಅರಳಸುರಳಿ ಅಂಕಣ

ಇದೊಂದು ಚಿಕ್ಕ ಕಾಳಜಿ, ಉಳಿದವರೆಲ್ಲರ ಉಪೇಕ್ಷೆಯ ನಡುವೆ ಆಕೆ ಮೆರೆದ ಸಣ್ಣ ಸಮಯ ಪ್ರಜ್ಞೆ ಎಂದು ಅನಿಸಬಹುದೇನೋ? ಆದರೆ ನೂರಾರು ಕೆಲಸಗಳ ನಡುವೆ ಮುಳುಗಿದಾಕೆ ತನ್ನದಲ್ಲದ ಧಾವಂತಕ್ಕಾಗಿ ಅವನ್ನೆಲ್ಲ ಬದಿಗಿಟ್ಟು ಸ್ವತಃ ಆಕ್ಸಿಜನ್ ಅಳವಡಿಸಿದ ಬೆಡ್ಡನ್ನು ದೂಡಿಕೊಂಡು ಬರುವುದು ಎಷ್ಟು ವಿರಳ ಹಾಗೂ ದೊಡ್ಡ ಮಾನವೀಯತೆಯೆನ್ನುವುದು ತಿಂಗಳಾನುಗಟ್ಟಲೆ ಆಸ್ಪತ್ರೆಯಲ್ಲಿ ಕಳೆದ ಬಳಿಕವಷ್ಟೇ ಅರ್ಥವಾಗುವ ಸೂಕ್ಷ್ಮ ಸತ್ಯ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

read more

ಬೇಸಿಗೆ ತರಲಿರುವ ಅಸಹನೆ, ಆಕಾಂಕ್ಷೆ: ಡಾ. ವಿನತೆ ಶರ್ಮಾ ಅಂಕಣ

ಕ್ರಿಸ್ಮಸ್ ಲಂಚ್ ಮುಗಿಸಿಕೊಂಡು ವಾಪಸ್ ಬರುವಾಗ ನಾವು ‘ಕಂಟ್ರಿ ಸೈಡ್’ ದಾರಿ ಹಿಡಿದಿದ್ದೆವು. ನನಗೆ ಅದಾವುದರ ತಲೆಬುಡ ಗೊತ್ತಿರಲಿಲ್ಲ. ಕರೆದುಕೊಂಡು ಹೋದವರು ವಾಪಸ್ ಮನೆ ಸೇರಿಸುತ್ತಾರೆ ಎಂದು ನಿಶ್ಚಿಂತೆಯಿಂದ ಕಿಟಕಿಯಿಂದ ಕಾಣುತ್ತಿದ್ದ ಆಸ್ಟ್ರೇಲಿಯನ್ ಪೊದೆಕಾಡನ್ನು ನೋಡುತ್ತಾ ಕಳೆದುಹೋಗಿದ್ದೆ. ಇದ್ದಕ್ಕಿದ್ದಂತೆ ಕಾರಿನಲ್ಲಿ ತಾಪಮಾನ ಏರಿದಂತಾಯ್ತು. ಮುಖ ತಿರುಗಿಸಿದಾಗ ಆ ಕಡೆ ಕಂಡಿದ್ದು ಉದ್ದಾನುದ್ದಕ್ಕೆ ಹರಡಿಕೊಂಡು ಉರಿಯುತ್ತಿದ್ದ ಬೆಂಕಿಜ್ವಾಲೆ. ನಾನಿದ್ದ ಕಾರಿನಿಂದ ಸ್ಪಷ್ಟವಾಗಿ ಕಾಣುತ್ತಿದ್ದು, ಶಾಖದ ಅನುಭವವೂ ಚೆನ್ನಾಗಾಗುತ್ತಿತ್ತು. ಅಂದರೆ ಅಷ್ಟು ಹತ್ತಿರದಲ್ಲಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

read more

 ಕನ್ನಡ ಕಲಿಕೆಯ ಮೂರು ಪ್ರಸಂಗಗಳು: ಎಲ್.ಜಿ.ಮೀರಾ ಅಂಕಣ

ನಾನು ಈ ಹುಡುಗಿಗೆ “ನಿನ್ನ ಗುರುತಿನ ಚೀಟಿ ಕೊಡಮ್ಮ” ಅಂದೆ. ಅವಳು ಗಾಬರಿಯಿಂದ “ಅದು ಇಲ್ಲ ಮ್ಯಾಮ್” ಅಂದಳು. ಪಾಪ, ಅದು ಅವಳ ಕುತ್ತಿಗೆಯಲ್ಲೇ ತೂಗುತ್ತಿತ್ತು. ಈ ಘಟನೆಯು ಘಟಿಸುತ್ತಿದ್ದಾಗ ನಮ್ಮ ಕೋಣೆಯಲ್ಲೇ ಕುಳಿತಿದ್ದ ಇಂಗ್ಲಿಷ್ ಅಧ್ಯಾಪಕಿಯೊಬ್ಬರು ಮುಗುಳ್ನಗುತ್ತಾ “ಅದು ನಿನ್ನ ಮೈಮೇಲೇ ಇದೆಯಲ್ಲಮ್ಮ” ಅಂದರು. ಆದರೂ ಆ ಹುಡುಗಿಗೆ ಗುರುತಿನ ಚೀಟಿ ಅಂದರೆ ಏನೆಂದು ಗೊತ್ತಾಗಲಿಲ್ಲ. ಏನು ಒತ್ತಡ ಇತ್ತೋ ಏನೋ ಪಾಪ ಅವಳಿಗೆ!
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಮೂವತ್ತನೆಯ ಬರಹ

read more

ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

ನಮ್ಮ ಪುರಾಣಗಳನ್ನು ಕೆದಕುತ್ತಾ ಹೋದರೆ ಇಂತಹ ಬಹಳಷ್ಟು ಮಾದರಿಗಳು ಸಿಗಬಹುದು. ಪ್ರತಿಯೊಬ್ಬರ ಪರಿಸ್ಥಿತಿಗಳು ಪ್ರತಿಯೊಬ್ಬರ ಋಣದ ಬೇರುಗಳು ಭಿನ್ನವಾಗಿರಬಹುದು. ಆದರೆ ಧರ್ಮಸಂಕಟದ ಆ ಉತ್ಕಟ ಕ್ಷಣಗಳಲ್ಲಿ ಅವರು ತೆಗೆದುಕೊಂಡ ನಿರ್ಧಾರಗಳು ಖಂಡಿತವಾಗಿಯೂ ನಮ್ಮ ಬದುಕಿನ ಸಮಸ್ಯೆಗಳಿಗೂ ಒಂದು ದಾರಿಯನ್ನು ತೋರಿಸಬಹುದು. ಬದುಕಿನ ಅನಾಮಿಕ ತಿರುವಿನಲ್ಲಿ ಎದುರಾಗುವ ದ್ವಂದ್ವಗಳಲ್ಲಿ ಇಲ್ಲಿದ್ದು ಇಲ್ಲಿಲ್ಲ; ಅಲ್ಲಿದ್ದು ಅಲ್ಲಿಲ್ಲ ಅನ್ನುವಂತಾಗಿ ಇದು ಅಥವಾ ಅದು ಅನ್ನುವ ಆಯ್ಕೆ ಮಾಡಲೇಬೇಕಾದ ಪರಿಸ್ಥಿಗಳಲ್ಲಿ ನಮ್ಮ ಮುಂದೆ ಇವರು ಕೊಟ್ಟು ಹೋದ ಮಾದರಿಗಳಿವೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಹೊಸ ಅಂಕಣ “ಇನ್ನೊಂದು ಬದಿ” ಇಂದಿನಿಂದ

read more

ಸುಕನ್ಯಾ ಕನಾರಳ್ಳಿ ಹೊಸ ಅಂಕಣ “ಕಡೆಗಣ್ಣಿನ ಬಿಡಿನೋಟ” ಇಂದಿನಿಂದ

‘ನಿಮ್ಮ ಮನೆಯಲ್ಲೂ ಪಾತಿ ಮಾಡಿದಾರಾ?’ ಎಂದು ಸುಮ್ಮನೆ ಮಾತಿಗೆ ಒಮ್ಮೆ ಕೇಳಿದ್ದೆ. ‘ನಮ್ಮನೆ ಮುಂದೆ ಲಾಲ್ ಬಾಗೇ ಇದೆಯಲ್ಲ?’ ಎಂದು ಫಟ್ಟನೆ ಹೇಳಿದಾಗ ಬೆಚ್ಚಿಬೀಳುವ ಹಾಗಾಯಿತು. ಅದೊಂದು ಮಹಾವಾಕ್ಯದಂತೆ ಕೇಳಿಸಿತ್ತು. ಲಾಲ್ ಬಾಗಿನ ಎದುರು ಇರುವ ಸ್ಲಮ್ಮಿನಲ್ಲಿ ಅವರದ್ದು ಜೋಪಡಿ ವಾಸ. ಹೈದರ್ ಅಲಿ ಟಿಪ್ಪು ಸುಲ್ತಾನರು ದೇಶ ವಿದೇಶಗಳಿಂದ ತರಿಸಿ ಬೆಳೆಸಿರುವ ಅಪರೂಪದ ವೃಕ್ಷಗಳ ನಡುವೆಯೇ ಬೆಳೆಯುತ್ತಿರುವ ಮಗು ಅವಳು.
ಖ್ಯಾತ ಲೇಖಕಿ, ಅನುವಾದಕಿ ಸುಕನ್ಯಾ ಕನಾರಳ್ಳಿ ಹೊಸ ಅಂಕಣ “ಕಡೆಗಣ್ಣಿನ ಬಿಡಿನೋಟ” ಇಂದಿನಿಂದ ಪ್ರತಿ ಬುಧವಾರಗಳಂದು ನಿಮ್ಮ ಓದಿಗೆ…

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ